ಚನ್ನಪಟ್ಟಣ: ನಗರದ ಕುವೆಂಪುನಗರ ಮೂರನೇ ಅಡ್ಡರಸ್ತೆ ಅಂಗಡಿಯೊಂದರ ಬಳಿ ವ್ಯಕ್ತಿಯೊಬ್ಬ ಶನಿವಾರ ಸಂಜೆ ಲಾಂಗು ಹಿಡಿದು ಓಡಾಡಿದ್ದು, ಜನ ಭಯಭೀತರಾದರು.
ಕುವೆಂಪುನಗರದ ಭರತ್ (36) ಲಾಂಗು ಹಿಡಿದು ಓಡಾಡಿದ ವ್ಯಕ್ತಿ ಎಂದು ತಿಳಿದು ಬಂದಿದೆ. ಈತ ಮಾನಸಿಕ ಅಸ್ವಸ್ಥ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ಪುರ ಠಾಣೆ ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು. ವ್ಯಕ್ತಿಯು ಲಾಂಗು ಹಿಡಿದು ಓಡಾಡಿದರೂ ಯಾರಿಗೂ ತೊಂದರೆ ಮಾಡಿಲ್ಲ. ಆತ ಮಾನಸಿಕ ತೊಂದರೆಯಿಂದ ಈ ರೀತಿ ಮಾಡಿದ್ದಾನೆ. ಮುತುವರ್ಜಿ ವಹಿಸುವಂತೆ ಯುವಕನ ತಂದೆಗೆ ಸೂಚಿಸಿ ಕಳುಹಿಸಿಕೊಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.