<p><strong>ಚನ್ನಪಟ್ಟಣ</strong>: ಆಫ್ಗಾನಿಸ್ತಾನದ ಕೌನ್ಸೆಲ್ ಜನರಲ್ ಝಕೀಯ ವಾರ್ದಕ್ ಅವರು ಮಂಗಳವಾರ ನಗರದ ಮೆಹದಿನಗರ ಹಾಗೂ ತಾಲ್ಲೂಕಿನ ಕರಿಯಪ್ಪನದೊಡ್ಡಿ ಗ್ರಾಮದ ಮಕ್ಕಳ ಆಟಿಕೆ ತಯಾರಿಕಾ ಘಟಕಗಳಿಗೆ ಭೇಟಿ ನೀಡಿದ್ದರು.<br><br>ಚನ್ನಪಟ್ಟಣ ತಾಲ್ಲೂಕಿನ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಮಹಿಳೆಯರು ತಯಾರು ಮಾಡಿದ್ದ ಮರದ ಆಟಿಕೆಗಳನ್ನು 2023ರಲ್ಲಿ ಆಫ್ಗಾನಿಸ್ತಾನಕ್ಕೆ ಕಳುಹಿಸಿ ಕೊಡಲಾಗಿತ್ತು.</p>.<p>ಇದರಿಂದ ಪ್ರೇರಣೆಗೊಂಡ ಅಲ್ಲಿನ ಸರ್ಕಾರ ಮಕ್ಕಳಿಗೆ ಮತ್ತಷ್ಟು ಆಟಿಕೆ ಖರೀದಿಸುವ ಬಯಕೆಯೊಂದಿಗೆ ಝಕೀಯಾ ವಾರ್ದಕ್ ಅವರನ್ನು ಮರದ ಆಟಿಕೆ ವೀಕ್ಷಣೆಗೆ ಕಳುಹಿಸಿಕೊಟ್ಟಿದೆ ಎಂದು ಜಿಲ್ಲಾ ಅಧಿಕಾರಿಗಳು ತಿಳಿಸಿದರು.</p>.<p>ಆಟಿಕೆ ತಯಾರಿಕೆ ವೀಕ್ಷಿಸಿದ ಅವರು, ಕುಶಲಕರ್ಮಿಗಳ ಜೊತೆ ಮಾತುಕತೆ ನಡೆಸಿದರು. ಆಟಿಕೆ ತಯಾರಿಕೆ ಬಗ್ಗೆ ಕಲಾವಿದರನ್ನು ಕೇಳಿ ತಿಳಿದುಕೊಂಡ ಅವರು, ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಚನ್ನಪಟ್ಟಣದ ಆಟಿಕೆ ಮತ್ತು ಬೊಂಬೆಗಳು ಪೂರಕವಾಗಿವೆ ಎಂದು ಹೊಗಳಿದರು.</p>.<p>ಭಾರತೀಯ ರಾಯಭಾರಿ ಕಚೇರಿಯ ಸಹಯೋಗದೊಂದಿಗೆ ಯುನೈಟೆಡ್ ನೇಷನ್ಸ್ ಆಫೀಸ್ ಆನ್ ಡ್ರಗ್ಸ್ ಅಂಡ್ ಕ್ರೈಂ (ಯುಎನ್ಓಡಿಸಿ) ರಾಜ್ಯ ಸಂಜೀವಿನಿ ಗ್ರಾಮೀಣ ಜೀವನೋಪಾಯ ಯೋಜನೆಯ ಮೂಲಕ ಚನ್ನಪಟ್ಟಣದ ಆಟಿಕೆಗಳನ್ನು ಆಫ್ಗಾನಿಸ್ತಾನಕ್ಕೆ ಕಳುಹಿಸಿ ಕೊಡಲಾಗಿತ್ತು. </p>.<p>ಉಗ್ರರ ದಾಳಿಯಲ್ಲಿ ತಂದೆ, ತಾಯಿ ಕಳೆದುಕೊಂಡು ತಬ್ಬಲಿಗಳಾಗಿರುವ ಆಘ್ಗನ್ ಮಕ್ಕಳು ಡ್ರಗ್ಸ್ ಮತ್ತು ಅಪರಾಧ ಕೃತ್ಯದಲ್ಲಿ ಭಾಗಿಯಾಗುವುದನ್ನು ತಪ್ಪಿಸುವ ಉದ್ದೇಶದಿಂದ ಇಲ್ಲಿನ ಮರದ ಆಟಿಕೆ ಕಳುಹಿಸಲಾಗಿತ್ತು. ಇದು ಆ ದೇಶದ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಸಹಕಾರಿಯಾಗಿತ್ತು.</p>.<p>ರಾಮನಗರ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು, ಸ್ತ್ರೀಶಕ್ತಿ ಸಂಘಗಳ ಪದಾಧಿಕಾರಿಗಳು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಪಟ್ಟಣ</strong>: ಆಫ್ಗಾನಿಸ್ತಾನದ ಕೌನ್ಸೆಲ್ ಜನರಲ್ ಝಕೀಯ ವಾರ್ದಕ್ ಅವರು ಮಂಗಳವಾರ ನಗರದ ಮೆಹದಿನಗರ ಹಾಗೂ ತಾಲ್ಲೂಕಿನ ಕರಿಯಪ್ಪನದೊಡ್ಡಿ ಗ್ರಾಮದ ಮಕ್ಕಳ ಆಟಿಕೆ ತಯಾರಿಕಾ ಘಟಕಗಳಿಗೆ ಭೇಟಿ ನೀಡಿದ್ದರು.<br><br>ಚನ್ನಪಟ್ಟಣ ತಾಲ್ಲೂಕಿನ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಮಹಿಳೆಯರು ತಯಾರು ಮಾಡಿದ್ದ ಮರದ ಆಟಿಕೆಗಳನ್ನು 2023ರಲ್ಲಿ ಆಫ್ಗಾನಿಸ್ತಾನಕ್ಕೆ ಕಳುಹಿಸಿ ಕೊಡಲಾಗಿತ್ತು.</p>.<p>ಇದರಿಂದ ಪ್ರೇರಣೆಗೊಂಡ ಅಲ್ಲಿನ ಸರ್ಕಾರ ಮಕ್ಕಳಿಗೆ ಮತ್ತಷ್ಟು ಆಟಿಕೆ ಖರೀದಿಸುವ ಬಯಕೆಯೊಂದಿಗೆ ಝಕೀಯಾ ವಾರ್ದಕ್ ಅವರನ್ನು ಮರದ ಆಟಿಕೆ ವೀಕ್ಷಣೆಗೆ ಕಳುಹಿಸಿಕೊಟ್ಟಿದೆ ಎಂದು ಜಿಲ್ಲಾ ಅಧಿಕಾರಿಗಳು ತಿಳಿಸಿದರು.</p>.<p>ಆಟಿಕೆ ತಯಾರಿಕೆ ವೀಕ್ಷಿಸಿದ ಅವರು, ಕುಶಲಕರ್ಮಿಗಳ ಜೊತೆ ಮಾತುಕತೆ ನಡೆಸಿದರು. ಆಟಿಕೆ ತಯಾರಿಕೆ ಬಗ್ಗೆ ಕಲಾವಿದರನ್ನು ಕೇಳಿ ತಿಳಿದುಕೊಂಡ ಅವರು, ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಚನ್ನಪಟ್ಟಣದ ಆಟಿಕೆ ಮತ್ತು ಬೊಂಬೆಗಳು ಪೂರಕವಾಗಿವೆ ಎಂದು ಹೊಗಳಿದರು.</p>.<p>ಭಾರತೀಯ ರಾಯಭಾರಿ ಕಚೇರಿಯ ಸಹಯೋಗದೊಂದಿಗೆ ಯುನೈಟೆಡ್ ನೇಷನ್ಸ್ ಆಫೀಸ್ ಆನ್ ಡ್ರಗ್ಸ್ ಅಂಡ್ ಕ್ರೈಂ (ಯುಎನ್ಓಡಿಸಿ) ರಾಜ್ಯ ಸಂಜೀವಿನಿ ಗ್ರಾಮೀಣ ಜೀವನೋಪಾಯ ಯೋಜನೆಯ ಮೂಲಕ ಚನ್ನಪಟ್ಟಣದ ಆಟಿಕೆಗಳನ್ನು ಆಫ್ಗಾನಿಸ್ತಾನಕ್ಕೆ ಕಳುಹಿಸಿ ಕೊಡಲಾಗಿತ್ತು. </p>.<p>ಉಗ್ರರ ದಾಳಿಯಲ್ಲಿ ತಂದೆ, ತಾಯಿ ಕಳೆದುಕೊಂಡು ತಬ್ಬಲಿಗಳಾಗಿರುವ ಆಘ್ಗನ್ ಮಕ್ಕಳು ಡ್ರಗ್ಸ್ ಮತ್ತು ಅಪರಾಧ ಕೃತ್ಯದಲ್ಲಿ ಭಾಗಿಯಾಗುವುದನ್ನು ತಪ್ಪಿಸುವ ಉದ್ದೇಶದಿಂದ ಇಲ್ಲಿನ ಮರದ ಆಟಿಕೆ ಕಳುಹಿಸಲಾಗಿತ್ತು. ಇದು ಆ ದೇಶದ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಸಹಕಾರಿಯಾಗಿತ್ತು.</p>.<p>ರಾಮನಗರ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು, ಸ್ತ್ರೀಶಕ್ತಿ ಸಂಘಗಳ ಪದಾಧಿಕಾರಿಗಳು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>