ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಪಟ್ಟಣ: ಡಿಸೇಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ

Published 29 ಮೇ 2023, 16:18 IST
Last Updated 29 ಮೇ 2023, 16:18 IST
ಅಕ್ಷರ ಗಾತ್ರ

ಚನ್ನಪಟ್ಟಣ: ಪತ್ನಿ ಹಾಗೂ ಮಾವನ ಜತೆ ಸಾಂಸಾರಿಕವಾಗಿ ಜಗಳ ಮಾಡಿಕೊಂಡ ವ್ಯಕ್ತಿಯೊಬ್ಬರು ಮೈಮೇಲೆ ಡಿಸೇಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ ನಗರದ ಟೋಲ್ ಗೇಟ್ ಬಡಾವಣೆ ಬಳಿ ನಡೆದಿದೆ.

ಟೋಲ್ ಗೇಟ್ ಬಡಾವಣೆ ನಿವಾಸಿ ಇಮ್ರಾನ್ (25) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ವೃತ್ತಿಯಲ್ಲಿ ಆಟೊ ಚಾಲಕನಾಗಿದ್ದು ತಮ್ಮದೇ ಬಡಾವಣೆ ಯುವತಿಯನ್ನು ಒಂದು ವರ್ಷದ ಹಿಂದೆ ಮದುವೆಯಾಗಿದ್ದ. ಇವರ ನಡುವೆ ಆಗಾಗ ಸಾಂಸಾರಿಕ ಜಗಳ ನಡೆಯುತ್ತಿತ್ತು. ಆದರೆ, ಸಂಬಂಧಿಕರು ಇವರಿಗೆ ಬುದ್ಧಿಹೇಳಿ ಒಗ್ಗೂಡಿಸಿದ್ದರು.

ಗರ್ಭಿಣಿಯಾಗಿದ್ದ ಪತ್ನಿ ಭಾನುವಾರ ತನ್ನ ತವರು ಮನೆಗೆ ಹೋಗಿದ್ದರು. ರಾತ್ರಿ ಪತ್ನಿ ಮನೆಗೆ ತೆರಳಿದ ಇಮ್ರಾನ್, ತವರು ಮನೆಗೆ ಬಂದಿರುವ ವಿಚಾರ ಬಗ್ಗೆ ಮಾತುಕತೆ ನಡೆಸಿದ್ದರು. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಆಗ ಮಾವ ಕೂಡ ಜಗಳದಲ್ಲಿ ಭಾಗಿಯಾಗಿ ಅಳಿಯನ ಜತೆ ವಾಗ್ವಾದ ನಡೆಸಿದ್ದಾರೆ. ತಕ್ಷಣ ರೊಚ್ಚಿಗೆದ್ದ ಇಮ್ರಾನ್, ತನ್ನ ಆಟೊದಲ್ಲಿ ಇಟ್ಟಿದ್ದ ಡಿಸೇಲ್‌ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಕ್ಷಣ ನೆರೆಹೊರೆ ನಿವಾಸಿಗಳು ಬೆಂಕಿ ನಂದಿಸಿ ಇಮ್ರಾನ್ ಅವರನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇವರಿಗೆ ಶೇ40ರಷ್ಟು ಸುಟ್ಟ ಗಾಯಗಳಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರದ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT