ಈ ಭೂಮಿಯ ಅಕ್ಕಪಕ್ಕದವರು, ಮಾಜಿ ಶಾಸಕರ ಹಿಂಬಾಲಕರೊಬ್ಬರು ಸೇರಿದಂತೆ ನಾಲ್ವರು ಒಟ್ಟು 10 ಎಕರೆ ಗೋಮಾಳದ ಭೂಮಿಯಲ್ಲಿ ಜೆಸಿಬಿ ಯಂತ್ರ ಬಳಸಿ ಅಕ್ರಮವಾಗಿ ಸಮಗೊಳಿಸಿ ಟ್ರಂಚ್ ತೆಗೆದಿದ್ದಾರೆ. ಗ್ರಾಮಸ್ಥರ ಬಳಕೆಗೆ ಮೀಸಲಿಟ್ಟಿದ್ದ ಗೋಮಾಳ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಳ್ಳುವುದನ್ನು ವಿರೋಧಿಸುತ್ತಿದ್ದೇವೆ. ಜಿಲ್ಲಾಧಿಕಾರಿ ಮತ್ತು ಶಾಸಕರು ಗೋಮಾಳ ಉಳಿಸಲು ಮುಂದಾಗಬೇಕು ಎಂದರು.