<p><strong>ಬಿಡದಿ (ರಾಮನಗರ):</strong> ಬಿಡದಿ ಸಮಗ್ರ ಉಪನಗರ ಯೋಜನೆಗಾಗಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಜಿಬಿಡಿಎ) ಭೂ ಸ್ವಾಧೀನಕ್ಕೆ ಮುಂದಾಗಿರುವುದನ್ನು ವಿರೋಧಿಸಿ ರೈತರು ಸೋಮವಾರ ಭೈರಮಂಗಲ ಗ್ರಾಮವನ್ನು ಬಂದ್ ಮಾಡಿದರು.</p>.<p>ಭೈರಮಂಗಲ-ಕಂಚುಗಾರನಹಳ್ಳಿ ರೈತರ ಹಿತರಕ್ಷಣಾ ಸಂಘ ನೀಡಿದ್ದ ಬಂದ್ನಲ್ಲಿ ಉಪನಗರ ಯೋಜನೆ ವ್ಯಾಪ್ತಿಯ ರೈತರು, ರೈತ ಸಂಘದ ಸದಸ್ಯರು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಸೇರಿದಂತೆ ಹಲವರು ಭಾಗವಹಿಸಿದ್ದರು.</p>.<p>ಚಿತ್ರನಟ ಚೇತನ್ ಅಹಿಂಸಾ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಯೋಜನೆ ಕೈ ಬಿಟ್ಟು ಭೂ ಸ್ವಾಧೀನ ಅಧಿಸೂಚನೆ ರದ್ದುಪಡಿಸುವಂತೆ ಪ್ರತಿಭಟನಕಾರರು ಆಗ್ರಹಿಸಿದರು.</p>.<p>ಗ್ರಾಮದಲ್ಲಿ ಹಾದು ಹೋಗಿರುವ ಮುಖ್ಯರಸ್ತೆಯನ್ನು ತಡೆದ ಪ್ರತಿಭಟನಕಾರರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸ್ಥಳೀಯ ಶಾಸಕ ಎಚ್.ಸಿ. ಬಾಲಕೃಷ್ಣ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.</p>.<p>ರಸ್ತೆಗೆ ಅಡ್ಡಲಾಗಿ ಹಸುಗಳು ಮತ್ತು ಎತ್ತಿನಗಾಡಿಗಳನ್ನು ನಿಲ್ಲಿಸಿ ತಾಸು ರಸ್ತೆ ತಡೆ ನಡೆಸಿದರು. ವಾಹನಗಳು ರಸ್ತೆಯಲ್ಲಿ ಮೈಲುಗಟ್ಟಲೇ ಸಾಲುಗಟ್ಟಿ ನಿಂತಿದ್ದವು. ಪ್ರಯಾಣಿಕರು ಹಾಗೂ ವಾಹನ ಸವಾರರು ಪರದಾಡಿದರು. ಔಷಧ ಅಂಗಡಿ ಹೊರತುಪಡಿಸಿ ಉಳಿದ ಅಂಗಡಿಗಳನ್ನು ಬಂದ್ ಬೆಂಬಲಿಸಿ ಮುಚ್ಚಲಾಗಿತ್ತು. </p>.<p>ನಟ ಚೇತನ್ ಮಾತನಾಡಿ, ‘ಬಂಡವಾಳಶಾಹಿಗಳೇ ರೈತರ ಶತ್ರುಗಳು. ಸರ್ಕಾರ ಕೂಡ ಅವರ ಪರವಾಗಿಯೇ ಇದೆ. ಫಲವತ್ತಾದ ಕೃಷಿ ಭೂಮಿ ಕಬಳಿಸಿ ಅಲ್ಲಿ ವಿಮಾನ ನಿಲ್ದಾಣ, ಅಪಾರ್ಟ್ಮೆಂಟ್, ಈಜುಕೊಳ ಸೇರಿದಂತೆ ಬಂಡವಾಳಶಾಹಿಗಳ ಐಷಾರಾಮಿ ಬದುಕಿಗೆ ಬೇಕಾದ್ದನ್ನು ನಿರ್ಮಾಣ ಮಾಡಿ ಬಡ ಜನರನ್ನು ಬೀದಿಪಾಲು ಮಾಡುವುದು ಸರಿಯಲ್ಲ. ಸರ್ಕಾರ ಭೂ ಸ್ವಾಧೀನ ಕೈ ಬಿಡಬೇಕು’ ಎಂದು ಆಗ್ರಹಹಿಸಿದರು.</p>.<p>ರೈತ ಸಂಘದ ನಾಗೇಶ್, ‘ರೈತರ ಇಚ್ಛೆಗೆ ವಿರುದ್ಧವಾಗಿ ನಡೆದುಕೊಂಡ ಹಲವು ಸರ್ಕಾರಗಳು ಬಿದ್ದು ಹೋಗಿವೆ. ಇಲ್ಲಿನ ರೈತರ ಹೋರಾಟಕ್ಕೆ ಕಿವಿಗೊಡದಿದ್ದರೆ ರಾಜ್ಯ ಸರ್ಕಾರಕ್ಕೂ ಅದೇ ಗತಿ ಬರಲಿದೆ. ಸ್ಥಳೀಯರು ಭೂಸ್ವಾಧೀನ ವಿರೋಧಿಸುತ್ತಿದ್ದರೂ ಇಲ್ಲಿನ ಶಾಸಕ ಬಾಲಕೃಷ್ಣ ಗ್ರಾಮಗಳಿಗೆ ಬಂದು ಅಹವಾಲು ಆಲಿಸಿಲ್ಲ. ರೈತರಿಗೆ ವಿರುದ್ಧವಾಗಿ ಹೋದ ಯಾವ ಸರ್ಕಾರಗಳೂ ಉಳಿದಿಲ್ಲ’ ಎಂದು ಎಚ್ಚರಿಕೆ ನೀಡಿದರು.</p>.<p>ಬಂದ್ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ರೈತ ಸಂಘದ ಭೈರೇಗೌಡ, ಪ್ರಕಾಶ್, ಕರ್ನಾಟಕ ಪ್ರಾಂತರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಶವಂತ, ಹೋರಾಟ ಸಮಿತಿಯ ಪ್ರಕಾಶ್, ನಾಗರಾಜು, ಜನತಾ ಪಕ್ಷದ ಮಹಿಳಾ ಅಧ್ಯಕ್ಷೆ ವಾಣಿ, ಧಮ್ಮ ದೀವಿಗೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ, ಅವತಾರ ಶಿವು, ಮಾದೇಗೌಡ ಹಾಗೂ ಇತರರು ಇದ್ದರು.</p>.<p>ಉಪನಗರದ ಹೆಸರಿನಲ್ಲಿ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡಲು ಸರ್ಕಾರ ರೈತರ ಭೂಮಿಯನ್ನ ಕಬಳಿಸಲು ಮುಂದಾಗಿದೆ. ಇದರ ವಿರುದ್ಧದ ಹೋರಾಟಕ್ಕೆ ರೈತ ಮತ್ತು ಕನ್ನಡಪರ ಸಂಘಟನೆಗಳು ಕೈ ಜೋಡಿಸಬೇಕಿದೆ</p><p><strong>ಚೇತನ್ ಅಹಿಂಸಾ, ಸಿನಿಮಾ ನಟ</strong></p>.<p>ಬಿಡದಿ ಉಪನಗರಕ್ಕೆ ಗುರುತಿಸಿರುವ ಭೂಮಿ ಪೈಕಿ ಸಾವಿರ ಎಕರೆಯನ್ನು ಕೆಐಎಡಿಬಿ ಕೊಟ್ಟಾಗ ಯಾಕೆ ಹೋರಾಡಲಿಲ್ಲ? ಈಗ ನನ್ನ ಅವಧಿಯಲ್ಲಿ ಉಪನಗರವಾಗುತ್ತಿರುವ ಕಾರಣಕ್ಕೆ ಈ ಹೋರಾಟವೇ? </p><p><strong>ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ</strong></p>.<p><strong>ಜಿಲ್ಲಾಧಿಕಾರಿಗಾಗಿ ಪಟ್ಟು</strong> </p><p>ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಬಂದು ಮನವಿ ಸ್ವೀಕರಿಸುವವರೆಗೆ ರಸ್ತೆ ತಡೆ ನಿಲ್ಲಿಸುವುದಿಲ್ಲ ಎಂದು ಪ್ರತಿಭಟನಕಾರರು ಪಟ್ಟು ಹಿಡಿದರು. ಆಗ ರಾಮನಗರ ಡಿವೈಎಸ್ಪಿ ಶ್ರೀನಿವಾಸ್ ಸೇರಿದಂತೆ ಪೊಲೀಸರು ‘ಜಿಲ್ಲಾಧಿಕಾರಿ ಅವರು ಕನಕಪುರದಲ್ಲಿ ಉಪ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯುತ್ತಿರುವ ಜನಸ್ಪಂದನ ಕಾರ್ಯಕ್ರಮದಲ್ಲಿದ್ದಾರೆ. ಹಾಗಾಗಿ ತಹಶೀಲ್ದಾರ್ ಬರಲಿದ್ದಾರೆ’ ಎಂದು ಮನವೊಲಿಸಿದರು. ತಹಶೀಲ್ದಾರ್ ತೇಜಸ್ವಿನಿ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದ ಬಳಿಕ ಪ್ರತಿಭಟನಕಾರರು ರಸ್ತೆ ತಡೆ ನಿಲ್ಲಿಸಿದರು. </p>.<p><strong>ಉಪನಗರಕ್ಕೆ ಶೇ 75ರಷ್ಟು ರೈತರ ಒಪ್ಪಿಗೆ: ಡಿಸಿಎಂ</strong> </p><p>‘ಬಿಡದಿ ಸಮಗ್ರ ಉಪನಗರ ಯೋಜನೆ ಡಿನೋಟಿಫೈ ಮಾಡಲು ಬರುವುದಿಲ್ಲ. ಉಪನಗರ ಯೋಜನೆಗೂ ಶೇ 75ರಷ್ಟು ರೈತರು ಒಪ್ಪಿಗೆ ನೀಡಿ ಪರಿಹಾರ ಕೊಡಿ ಎಂದಿದ್ದಾರೆ. ನಮ್ಮ ರೈತರೊಂದಿಗೆ ಚರ್ಚಿಸಿ ಮನವರಿಕೆ ಮಾಡಿಕೊಡುವೆ. ಅವರಿಗೆ ಅನ್ಯಾಯವಾಗದಂತೆ ಯಾವ ರೀತಿ ನ್ಯಾಯ ಒದಗಿಸಬೇಕು ಎಂಬುದು ಗೊತ್ತಿದೆ’ ಎಂದು ಭೂ ಸ್ವಾಧೀನ ವಿರೋಧಿಸಿ ಭೈರಮಂಗಲದಲ್ಲಿ ನಡೆದ ಬಂದ್ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕನಕಪುರ ತಾಲ್ಲೂಕಿನ ಕೋಡಿಹಳ್ಳಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.</p>.<p><strong>ಬೃಹತ್ ಪ್ರತಿಭಟನೆ ಹೆದ್ದಾರಿ ತಡೆಗೆ ನಿರ್ಣಯ</strong> </p><p>ರಸ್ತೆ ತಡೆ ಬಳಿಕ ಸಭೆ ನಡೆಸಿದ ಪ್ರತಿಭಟನಕಾರರು ಹೋರಾಟ ತೀವ್ರಗೊಳಿಸುವ ನಿಟ್ಟಿನಲ್ಲಿ ಸಭೆ ನಡೆಸಿ ಚರ್ಚಿಸಿದರು. ಆ. 11ರಿಂದ ಶುರುವಾಗಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಉಪನಗರ ಯೋಜನೆಗೆ ಭೂ ಸ್ವಾಧೀನ ಮಾಡಿಕೊಳ್ಳದಂತೆ ಸರ್ಕಾರದ ಗಮನ ಗಮನ ಸೆಳೆಯಲು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಬೇಕು ಎಂಬ ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಿಡದಿ (ರಾಮನಗರ):</strong> ಬಿಡದಿ ಸಮಗ್ರ ಉಪನಗರ ಯೋಜನೆಗಾಗಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಜಿಬಿಡಿಎ) ಭೂ ಸ್ವಾಧೀನಕ್ಕೆ ಮುಂದಾಗಿರುವುದನ್ನು ವಿರೋಧಿಸಿ ರೈತರು ಸೋಮವಾರ ಭೈರಮಂಗಲ ಗ್ರಾಮವನ್ನು ಬಂದ್ ಮಾಡಿದರು.</p>.<p>ಭೈರಮಂಗಲ-ಕಂಚುಗಾರನಹಳ್ಳಿ ರೈತರ ಹಿತರಕ್ಷಣಾ ಸಂಘ ನೀಡಿದ್ದ ಬಂದ್ನಲ್ಲಿ ಉಪನಗರ ಯೋಜನೆ ವ್ಯಾಪ್ತಿಯ ರೈತರು, ರೈತ ಸಂಘದ ಸದಸ್ಯರು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಸೇರಿದಂತೆ ಹಲವರು ಭಾಗವಹಿಸಿದ್ದರು.</p>.<p>ಚಿತ್ರನಟ ಚೇತನ್ ಅಹಿಂಸಾ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಯೋಜನೆ ಕೈ ಬಿಟ್ಟು ಭೂ ಸ್ವಾಧೀನ ಅಧಿಸೂಚನೆ ರದ್ದುಪಡಿಸುವಂತೆ ಪ್ರತಿಭಟನಕಾರರು ಆಗ್ರಹಿಸಿದರು.</p>.<p>ಗ್ರಾಮದಲ್ಲಿ ಹಾದು ಹೋಗಿರುವ ಮುಖ್ಯರಸ್ತೆಯನ್ನು ತಡೆದ ಪ್ರತಿಭಟನಕಾರರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸ್ಥಳೀಯ ಶಾಸಕ ಎಚ್.ಸಿ. ಬಾಲಕೃಷ್ಣ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.</p>.<p>ರಸ್ತೆಗೆ ಅಡ್ಡಲಾಗಿ ಹಸುಗಳು ಮತ್ತು ಎತ್ತಿನಗಾಡಿಗಳನ್ನು ನಿಲ್ಲಿಸಿ ತಾಸು ರಸ್ತೆ ತಡೆ ನಡೆಸಿದರು. ವಾಹನಗಳು ರಸ್ತೆಯಲ್ಲಿ ಮೈಲುಗಟ್ಟಲೇ ಸಾಲುಗಟ್ಟಿ ನಿಂತಿದ್ದವು. ಪ್ರಯಾಣಿಕರು ಹಾಗೂ ವಾಹನ ಸವಾರರು ಪರದಾಡಿದರು. ಔಷಧ ಅಂಗಡಿ ಹೊರತುಪಡಿಸಿ ಉಳಿದ ಅಂಗಡಿಗಳನ್ನು ಬಂದ್ ಬೆಂಬಲಿಸಿ ಮುಚ್ಚಲಾಗಿತ್ತು. </p>.<p>ನಟ ಚೇತನ್ ಮಾತನಾಡಿ, ‘ಬಂಡವಾಳಶಾಹಿಗಳೇ ರೈತರ ಶತ್ರುಗಳು. ಸರ್ಕಾರ ಕೂಡ ಅವರ ಪರವಾಗಿಯೇ ಇದೆ. ಫಲವತ್ತಾದ ಕೃಷಿ ಭೂಮಿ ಕಬಳಿಸಿ ಅಲ್ಲಿ ವಿಮಾನ ನಿಲ್ದಾಣ, ಅಪಾರ್ಟ್ಮೆಂಟ್, ಈಜುಕೊಳ ಸೇರಿದಂತೆ ಬಂಡವಾಳಶಾಹಿಗಳ ಐಷಾರಾಮಿ ಬದುಕಿಗೆ ಬೇಕಾದ್ದನ್ನು ನಿರ್ಮಾಣ ಮಾಡಿ ಬಡ ಜನರನ್ನು ಬೀದಿಪಾಲು ಮಾಡುವುದು ಸರಿಯಲ್ಲ. ಸರ್ಕಾರ ಭೂ ಸ್ವಾಧೀನ ಕೈ ಬಿಡಬೇಕು’ ಎಂದು ಆಗ್ರಹಹಿಸಿದರು.</p>.<p>ರೈತ ಸಂಘದ ನಾಗೇಶ್, ‘ರೈತರ ಇಚ್ಛೆಗೆ ವಿರುದ್ಧವಾಗಿ ನಡೆದುಕೊಂಡ ಹಲವು ಸರ್ಕಾರಗಳು ಬಿದ್ದು ಹೋಗಿವೆ. ಇಲ್ಲಿನ ರೈತರ ಹೋರಾಟಕ್ಕೆ ಕಿವಿಗೊಡದಿದ್ದರೆ ರಾಜ್ಯ ಸರ್ಕಾರಕ್ಕೂ ಅದೇ ಗತಿ ಬರಲಿದೆ. ಸ್ಥಳೀಯರು ಭೂಸ್ವಾಧೀನ ವಿರೋಧಿಸುತ್ತಿದ್ದರೂ ಇಲ್ಲಿನ ಶಾಸಕ ಬಾಲಕೃಷ್ಣ ಗ್ರಾಮಗಳಿಗೆ ಬಂದು ಅಹವಾಲು ಆಲಿಸಿಲ್ಲ. ರೈತರಿಗೆ ವಿರುದ್ಧವಾಗಿ ಹೋದ ಯಾವ ಸರ್ಕಾರಗಳೂ ಉಳಿದಿಲ್ಲ’ ಎಂದು ಎಚ್ಚರಿಕೆ ನೀಡಿದರು.</p>.<p>ಬಂದ್ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ರೈತ ಸಂಘದ ಭೈರೇಗೌಡ, ಪ್ರಕಾಶ್, ಕರ್ನಾಟಕ ಪ್ರಾಂತರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಶವಂತ, ಹೋರಾಟ ಸಮಿತಿಯ ಪ್ರಕಾಶ್, ನಾಗರಾಜು, ಜನತಾ ಪಕ್ಷದ ಮಹಿಳಾ ಅಧ್ಯಕ್ಷೆ ವಾಣಿ, ಧಮ್ಮ ದೀವಿಗೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ, ಅವತಾರ ಶಿವು, ಮಾದೇಗೌಡ ಹಾಗೂ ಇತರರು ಇದ್ದರು.</p>.<p>ಉಪನಗರದ ಹೆಸರಿನಲ್ಲಿ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡಲು ಸರ್ಕಾರ ರೈತರ ಭೂಮಿಯನ್ನ ಕಬಳಿಸಲು ಮುಂದಾಗಿದೆ. ಇದರ ವಿರುದ್ಧದ ಹೋರಾಟಕ್ಕೆ ರೈತ ಮತ್ತು ಕನ್ನಡಪರ ಸಂಘಟನೆಗಳು ಕೈ ಜೋಡಿಸಬೇಕಿದೆ</p><p><strong>ಚೇತನ್ ಅಹಿಂಸಾ, ಸಿನಿಮಾ ನಟ</strong></p>.<p>ಬಿಡದಿ ಉಪನಗರಕ್ಕೆ ಗುರುತಿಸಿರುವ ಭೂಮಿ ಪೈಕಿ ಸಾವಿರ ಎಕರೆಯನ್ನು ಕೆಐಎಡಿಬಿ ಕೊಟ್ಟಾಗ ಯಾಕೆ ಹೋರಾಡಲಿಲ್ಲ? ಈಗ ನನ್ನ ಅವಧಿಯಲ್ಲಿ ಉಪನಗರವಾಗುತ್ತಿರುವ ಕಾರಣಕ್ಕೆ ಈ ಹೋರಾಟವೇ? </p><p><strong>ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ</strong></p>.<p><strong>ಜಿಲ್ಲಾಧಿಕಾರಿಗಾಗಿ ಪಟ್ಟು</strong> </p><p>ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಬಂದು ಮನವಿ ಸ್ವೀಕರಿಸುವವರೆಗೆ ರಸ್ತೆ ತಡೆ ನಿಲ್ಲಿಸುವುದಿಲ್ಲ ಎಂದು ಪ್ರತಿಭಟನಕಾರರು ಪಟ್ಟು ಹಿಡಿದರು. ಆಗ ರಾಮನಗರ ಡಿವೈಎಸ್ಪಿ ಶ್ರೀನಿವಾಸ್ ಸೇರಿದಂತೆ ಪೊಲೀಸರು ‘ಜಿಲ್ಲಾಧಿಕಾರಿ ಅವರು ಕನಕಪುರದಲ್ಲಿ ಉಪ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯುತ್ತಿರುವ ಜನಸ್ಪಂದನ ಕಾರ್ಯಕ್ರಮದಲ್ಲಿದ್ದಾರೆ. ಹಾಗಾಗಿ ತಹಶೀಲ್ದಾರ್ ಬರಲಿದ್ದಾರೆ’ ಎಂದು ಮನವೊಲಿಸಿದರು. ತಹಶೀಲ್ದಾರ್ ತೇಜಸ್ವಿನಿ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದ ಬಳಿಕ ಪ್ರತಿಭಟನಕಾರರು ರಸ್ತೆ ತಡೆ ನಿಲ್ಲಿಸಿದರು. </p>.<p><strong>ಉಪನಗರಕ್ಕೆ ಶೇ 75ರಷ್ಟು ರೈತರ ಒಪ್ಪಿಗೆ: ಡಿಸಿಎಂ</strong> </p><p>‘ಬಿಡದಿ ಸಮಗ್ರ ಉಪನಗರ ಯೋಜನೆ ಡಿನೋಟಿಫೈ ಮಾಡಲು ಬರುವುದಿಲ್ಲ. ಉಪನಗರ ಯೋಜನೆಗೂ ಶೇ 75ರಷ್ಟು ರೈತರು ಒಪ್ಪಿಗೆ ನೀಡಿ ಪರಿಹಾರ ಕೊಡಿ ಎಂದಿದ್ದಾರೆ. ನಮ್ಮ ರೈತರೊಂದಿಗೆ ಚರ್ಚಿಸಿ ಮನವರಿಕೆ ಮಾಡಿಕೊಡುವೆ. ಅವರಿಗೆ ಅನ್ಯಾಯವಾಗದಂತೆ ಯಾವ ರೀತಿ ನ್ಯಾಯ ಒದಗಿಸಬೇಕು ಎಂಬುದು ಗೊತ್ತಿದೆ’ ಎಂದು ಭೂ ಸ್ವಾಧೀನ ವಿರೋಧಿಸಿ ಭೈರಮಂಗಲದಲ್ಲಿ ನಡೆದ ಬಂದ್ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕನಕಪುರ ತಾಲ್ಲೂಕಿನ ಕೋಡಿಹಳ್ಳಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.</p>.<p><strong>ಬೃಹತ್ ಪ್ರತಿಭಟನೆ ಹೆದ್ದಾರಿ ತಡೆಗೆ ನಿರ್ಣಯ</strong> </p><p>ರಸ್ತೆ ತಡೆ ಬಳಿಕ ಸಭೆ ನಡೆಸಿದ ಪ್ರತಿಭಟನಕಾರರು ಹೋರಾಟ ತೀವ್ರಗೊಳಿಸುವ ನಿಟ್ಟಿನಲ್ಲಿ ಸಭೆ ನಡೆಸಿ ಚರ್ಚಿಸಿದರು. ಆ. 11ರಿಂದ ಶುರುವಾಗಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಉಪನಗರ ಯೋಜನೆಗೆ ಭೂ ಸ್ವಾಧೀನ ಮಾಡಿಕೊಳ್ಳದಂತೆ ಸರ್ಕಾರದ ಗಮನ ಗಮನ ಸೆಳೆಯಲು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಬೇಕು ಎಂಬ ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>