ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಚನ್ನಪಟ್ಟಣ: ಕಳೆಗಟ್ಟಿದ ಕೆಂಗಲ್ ಐಯ್ಯನಗುಡಿ ದನಗಳ ಜಾತ್ರೆ

ಎಚ್.ಎಂ. ರಮೇಶ್
Published : 19 ಜನವರಿ 2024, 5:40 IST
Last Updated : 19 ಜನವರಿ 2024, 5:40 IST
ಫಾಲೋ ಮಾಡಿ
Comments
ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ಹಳ್ಳಿಕಾರ್ ತಳಿಯ ಹೋರಿ ಏಕಲವ್ಯ
ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ಹಳ್ಳಿಕಾರ್ ತಳಿಯ ಹೋರಿ ಏಕಲವ್ಯ
ಹಳ್ಳಿಕಾರ್ ಹೋರಿ ಏಕಲವ್ಯ ವಿಶೇಷ ಆಕರ್ಷಣೆ:
ತುರುವೇಕೆರೆ ಮಾಜಿ ಶಾಸಕ ಮಸಾಲ ಜಯರಾಂ ಅವರು ಜಾತ್ರೆಗೆ ತಂದಿರುವ ಏಕಲವ್ಯ ಹೆಸರಿನ ಹಳ್ಳಿಕಾರ್ ತಳಿಯ ಹೋರಿ ಈ ಬಾರಿಯ ವಿಶೇಷ ಆಕರ್ಷಣೆಯಾಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಏಕಲವ್ಯನ ಮಗಳು ಪುಣ್ಯಕೋಟಿ ಹಾಗೂ ಮಗ (ಇನ್ನೂ ಹೆಸರಿಟ್ಟಿಲ್ಲ) ಸಹ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿವೆ. ಜಾತ್ರೆಗೆ ಬಂದವರು ಏಕಲವ್ಯ ಹಾಗೂ ಮಕ್ಕಳನ್ನು ನೋಡಲು ಮುಗಿ ಬೀಳುತ್ತಿದ್ದಾರೆ. ಅವುಗಳ ಜೊತೆ ಸೆಲ್ಫಿ ತೆಗೆದುಕೊಳ್ಳುವ ಫೋಟೋ ತೆಗೆಸಿಕೊಳ್ಳುವವರ ಸಂಖ್ಯೆ ಮಿತಿಮೀರಿದೆ. ಈ ಹೋರಿಯನ್ನು ಕೇವಲ ಪ್ರದರ್ಶನಕ್ಕೆ ಮಾತ್ರ ಕರೆತರಲಾಗಿದೆ. ಇದರ ಮಾರಾಟ ಇಲ್ಲ ಎಂದು ಹೋರಿಯ ಉಸ್ತುವಾರಿ ಹೊತ್ತಿರುವ ಯಡಿಯೂರಪ್ಪ ತಿಳಿಸಿದರು. ಇದನ್ನು 10 ತಿಂಗಳ ಕರುವಾಗಿದ್ದಾಗ ಬನ್ನೂರಿನ ಕೃಷ್ಣೇಗೌಡ ಎಂಬುವರು ರೂ. 1.75 ಲಕ್ಷಕ್ಕೆ ಖರೀದಿಸಿದ್ದರು. ಅವರಿಂದ ಅದನ್ನು ಮಸಾಲ ಜಯರಾಂ ಅವರು ರೂ. 8 ಲಕ್ಷಕ್ಕೆ ಖರೀದಿಸಿದ್ದಾರೆ. ಅದನ್ನು ಈಗ ರೂ. 16 ರಿಂದ 25 ಲಕ್ಷದವರೆಗೆ ಬೆಲೆ ನೀಡಿ ಕೊಂಡುಕೊಳ್ಳಲು ಕೆಲವರು ಮುಂದೆ ಬಂದಿದ್ದರು. ಆದರೆ ಅದನ್ನು ನಮ್ಮ ಮಾಜಿ ಶಾಸಕರು ಮಾರಾಟ ಮಾಡುವುದಿಲ್ಲ. ಅದನ್ನು ತಳಿಗೋಸ್ಕರ ಇಟ್ಟುಕೊಂಡಿದ್ದೇವೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT