<p><strong>ಕನಕಪುರ:</strong> ತಾಲ್ಲೂಕಿನ ಚುಂಚಿ ಫಾಲ್ಸ್ ನೋಡಲು ಶನಿವಾರ ಬೆಂಗಳೂರಿನಿಂದ ಬಂದಿದ್ದ ಜಯನಗರದ ಜೈನ್ ಕಾಲೇಜಿನ ಮೂರನೇ ವರ್ಷದ ಬಿಸಿಎ ವಿದ್ಯಾರ್ಥಿ ಸಾಯಿ ಪ್ರಸಾದ್ ಪಾಟೀಲ(21) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.</p>.<p>ಮೂಲತಃ ಬೀದರನ ಸಾಯಿ ಪ್ರಸಾದ್ ಬೆಂಗಳೂರಿನ ಅಕ್ಕ ಮತ್ತು ಭಾವನ ಮನೆಯಲ್ಲಿದ್ದು ಕೊಂಡು ಓದುತ್ತಿದ್ದ. ಶನಿವಾರ ಬೆಳಗ್ಗೆ ನಾಲ್ಕು ದ್ವಿಚಕ್ರ ವಾಹನಗಳಲ್ಲಿ ಎಂಟು ಸ್ನೇಹಿತರು ಚುಂಚಿ ಫಾಲ್ಸ್ಗೆ ಬಂದಿದ್ದರು.</p>.<p>ಈ ವೇಳೆ ಎಲ್ಲರೂ ಚುಂಚಿ ಫಾಲ್ಸ್ನ ನೀರಿನಲ್ಲಿ ಇಳಿದು ಆಟವಾಡುತ್ತಿದ್ದರು. ಸಾಯಿ ಪ್ರಸಾದ್ ಪಾಟೀಲ ಮತ್ತು ಆದಿತ್ಯ ಆಳವಾದ ನೀರಿನಲ್ಲಿ ಸಿಲುಕಿದ್ದಾರೆ. ಈ ವೇಳೆ ಆದಿತ್ಯನನ್ನು ಸ್ನೇಹಿತರು ರಕ್ಷಣೆ ಮಾಡಿದ್ದಾರೆ. ಆದರೆ ಸಾಯಿ ಪ್ರಸಾದ್ ಆಳವಾದ ನೀರಿನಲ್ಲಿ ಮುಳಗಿದ್ದರಿಂದ ಸ್ನೇಹಿತರು ರಕ್ಷಣೆ ಮಾಡಲು ವಿಫಲರಾದರು. </p>.<p>ಸ್ನೇಹಿತರು ವಿಚಾರವನ್ನು ಸಾತನೂರು ಪೊಲೀಸರಿಗೆ ತಿಳಿಸಿದರು. ಸಬ್ಇನ್ಸ್ಪೆಕ್ಟರ್ ದುರ್ಗೆಗೌಡ ಮತ್ತು ತಂಡ, ಅರಣ್ಯ ಇಲಾಖೆ ಅಧಿಕಾರಿಗಳು, ಅಗ್ನಿಶಾಮಕ ದಳ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿದರು. ಮಧ್ಯಾಹ್ನ ಒಂದು ಗಂಟೆವರೆಗೆ ಶೋಧ ಕಾರ್ಯ ನಡೆಸಿ ಶವವನ್ನು ಹೊರ ತೆಗೆದಿದ್ದಾರೆ.</p>.<p>ಮೃತ ವಿದ್ಯಾರ್ಥಿಯ ಭಾವ ಸಂತೋಷ್ ದೂರು ನೀಡಿದ್ದಾರೆ. ಯುಡಿಆರ್ ಪ್ರಕರಣ ದಾಖಲಿಸಿಕೊಂಡಿರುವ ಸಾತನೂರು ಪೊಲೀಸರು ಶವವನ್ನು ಕನಕಪುರ ಸಾರ್ವಜನಿಕ ಆಸ್ಪತ್ರೆಗೆ ಸ್ಥಳಾಂತರಿಸಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಪುರ:</strong> ತಾಲ್ಲೂಕಿನ ಚುಂಚಿ ಫಾಲ್ಸ್ ನೋಡಲು ಶನಿವಾರ ಬೆಂಗಳೂರಿನಿಂದ ಬಂದಿದ್ದ ಜಯನಗರದ ಜೈನ್ ಕಾಲೇಜಿನ ಮೂರನೇ ವರ್ಷದ ಬಿಸಿಎ ವಿದ್ಯಾರ್ಥಿ ಸಾಯಿ ಪ್ರಸಾದ್ ಪಾಟೀಲ(21) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.</p>.<p>ಮೂಲತಃ ಬೀದರನ ಸಾಯಿ ಪ್ರಸಾದ್ ಬೆಂಗಳೂರಿನ ಅಕ್ಕ ಮತ್ತು ಭಾವನ ಮನೆಯಲ್ಲಿದ್ದು ಕೊಂಡು ಓದುತ್ತಿದ್ದ. ಶನಿವಾರ ಬೆಳಗ್ಗೆ ನಾಲ್ಕು ದ್ವಿಚಕ್ರ ವಾಹನಗಳಲ್ಲಿ ಎಂಟು ಸ್ನೇಹಿತರು ಚುಂಚಿ ಫಾಲ್ಸ್ಗೆ ಬಂದಿದ್ದರು.</p>.<p>ಈ ವೇಳೆ ಎಲ್ಲರೂ ಚುಂಚಿ ಫಾಲ್ಸ್ನ ನೀರಿನಲ್ಲಿ ಇಳಿದು ಆಟವಾಡುತ್ತಿದ್ದರು. ಸಾಯಿ ಪ್ರಸಾದ್ ಪಾಟೀಲ ಮತ್ತು ಆದಿತ್ಯ ಆಳವಾದ ನೀರಿನಲ್ಲಿ ಸಿಲುಕಿದ್ದಾರೆ. ಈ ವೇಳೆ ಆದಿತ್ಯನನ್ನು ಸ್ನೇಹಿತರು ರಕ್ಷಣೆ ಮಾಡಿದ್ದಾರೆ. ಆದರೆ ಸಾಯಿ ಪ್ರಸಾದ್ ಆಳವಾದ ನೀರಿನಲ್ಲಿ ಮುಳಗಿದ್ದರಿಂದ ಸ್ನೇಹಿತರು ರಕ್ಷಣೆ ಮಾಡಲು ವಿಫಲರಾದರು. </p>.<p>ಸ್ನೇಹಿತರು ವಿಚಾರವನ್ನು ಸಾತನೂರು ಪೊಲೀಸರಿಗೆ ತಿಳಿಸಿದರು. ಸಬ್ಇನ್ಸ್ಪೆಕ್ಟರ್ ದುರ್ಗೆಗೌಡ ಮತ್ತು ತಂಡ, ಅರಣ್ಯ ಇಲಾಖೆ ಅಧಿಕಾರಿಗಳು, ಅಗ್ನಿಶಾಮಕ ದಳ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿದರು. ಮಧ್ಯಾಹ್ನ ಒಂದು ಗಂಟೆವರೆಗೆ ಶೋಧ ಕಾರ್ಯ ನಡೆಸಿ ಶವವನ್ನು ಹೊರ ತೆಗೆದಿದ್ದಾರೆ.</p>.<p>ಮೃತ ವಿದ್ಯಾರ್ಥಿಯ ಭಾವ ಸಂತೋಷ್ ದೂರು ನೀಡಿದ್ದಾರೆ. ಯುಡಿಆರ್ ಪ್ರಕರಣ ದಾಖಲಿಸಿಕೊಂಡಿರುವ ಸಾತನೂರು ಪೊಲೀಸರು ಶವವನ್ನು ಕನಕಪುರ ಸಾರ್ವಜನಿಕ ಆಸ್ಪತ್ರೆಗೆ ಸ್ಥಳಾಂತರಿಸಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>