<h2><span style="font-size:24px;"><strong>ಕನಕಪುರ: </strong>ರಾಜರ ಕಾಲದಲ್ಲಿ ಧರ್ಮದ ಸಹಿಷ್ಣುತೆಗಾಗಿ ನಮ್ಮ ಕಲಾ ಸೌಂದರ್ಯ ಮತ್ತು ಸಾಂಸ್ಕೃತಿಕ ವೈಭವದ ಸಂಕೇತವಾಗಿ ಪ್ರಸಿದ್ಧ ದೇವಾಲಯವನ್ನು ಕಟ್ಟಿದ್ದಾರೆ. ಅವುಗಳನ್ನು ಜೋಪಾನವಾಗಿ ಕಾಪಾಡಿ ಮುಂದಿನ ತಲೆಮಾರಿನ ಜನತೆಗೆ ಕೊಡಬೇಕಿದೆ ಎಂದು ರೂರಲ್ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಗೋವಿಂದಪ್ಪ ತಿಳಿಸಿದರು. </span></h2>.<h2><span style="font-size:24px;">ಇಲ್ಲಿನ ಅರಳಾಳು ಗ್ರಾಮದಲ್ಲಿನ ಪುರಾತನವಾದ ಆದಿ ನಾರಾಯಣ ದೇವಾಲಯದಲ್ಲಿ ರೂರಲ್ ಕಾಲೇಜಿನ ಎನ್ಸಿಸಿ ವಿದ್ಯಾರ್ಥಿಗಳು ಗುರುವಾರ ‘ಇತಿಹಾಸ ಪ್ರಸಿದ್ಧ ಸ್ಥಳಗಳ ಸಂರಕ್ಷಣೆ ಮತ್ತು ಸ್ವಚ್ಛತೆ ಕಾರ್ಯಕ್ರಮ’ದಡಿಯಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದರು. </span></h2>.<h2><span style="font-size:24px;">‘ನಮ್ಮ ದೇಶ ಸಾಂಸ್ಕೃತಿಕ ನಾಡಾಗಿದ್ದು ದೇವಾಲಯಗಳನ್ನು ವಿಶಿಷ್ಟ ಕಲಾ ವಿನ್ಯಾಸದೊಂದಿಗೆ ನಿರ್ಮಾಣ ಮಾಡಿದ್ದಾರೆ. ಅಂತಹ ವಾಸ್ತುಶಿಲ್ಪ, ಕಲ್ಲುಗಳ ಕೆತ್ತನೆ ಮತ್ತೆಲ್ಲೂ ಸಿಗುವುದಿಲ್ಲ. ಇಂತಹ ದೇವಾಲಯಗಳನ್ನು ನಾಶವಾಗದಂತೆ ನಾವು ಜೋಪಾನ ಮಾಡಬೇಕು’ ಎಂದು ಹೇಳಿದರು. </span></h2>.<h2><span style="font-size:24px;">‘ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಇಂದು ಇಲ್ಲಿ ದೇವಾಲಯದ ಸುತ್ತ ಬೆಳೆದಿದ್ದ ಗಿಡಗಂಟಿಗಳನ್ನು ತೆಗೆದು ಸ್ವಚ್ಛಗೊಳಿಸಿ ಚೆನ್ನಾಗಿ ಮಾಡಿದ್ದಾರೆ. ಗ್ರಾಮದ ಜನತೆಯು ಇದೇ ರೀತಿ ನಿರ್ವಹಣೆ ಮಾಡಿಕೊಂಡು ಹೋಗಬೇಕು’ ಎಂದು ಹೇಳಿದರು. </span></h2>.<h2><span style="font-size:24px;">ಎನ್ಸಿಸಿ ಯ 70 ವಿದ್ಯಾರ್ಥಿಗಳು ಲೆಪ್ಟಿನೆಂಟ್ ವಿಜೇಂದ್ರ ಅವರ ನೇತೃತ್ವದಲ್ಲಿ ಗ್ರಾಮದಲ್ಲಿ ಪರಿಸರ ಸ್ವಚ್ಛತೆ ಮತ್ತು ಇತಿಹಾಸ ಪ್ರಸಿದ್ಧ ಸ್ಥಳಗಳ ಸಂರಕ್ಷಣೆ ಕುರಿತು ಬ್ಯಾನರ್ಗಳನ್ನು ಹಿಡಿದು ಮತ್ತು ಕರಪತ್ರಗಳನ್ನು ಹಂಚಿ ಅರಳಾಳು ಗ್ರಾಮದಲ್ಲಿ ಪಥ ಸಂಚಲನ ನಡೆಸಿ ಜನಜಾಗೃತಿ ಮೂಡಿಸಿದರು. </span></h2>.<h2><span style="font-size:24px;">ಅರಳಾಳು ಗ್ರಾಮಸ್ಥರಾದ ಜಯರಾಮು, ಶ್ರೀನಿವಾಸ, ಬಸವರಾಜು, ಪ್ರಶಾಂತ್, ಚಿಕ್ಕಯ್ಯ, ಮೃತ್ಯಂಜಯ, ಬೋರೇಗೌಡ, ಗೋಪಾಲ, ಕೃಷ್ಣಪ್ಪ, ಸುರೇಶ್, ಮಲ್ಲೇಶ್, ಅರ್ಚಕ ದಯಾನಿಧಿ ಉಪಸ್ಥಿತರಿದ್ದರು. </span></h2>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h2><span style="font-size:24px;"><strong>ಕನಕಪುರ: </strong>ರಾಜರ ಕಾಲದಲ್ಲಿ ಧರ್ಮದ ಸಹಿಷ್ಣುತೆಗಾಗಿ ನಮ್ಮ ಕಲಾ ಸೌಂದರ್ಯ ಮತ್ತು ಸಾಂಸ್ಕೃತಿಕ ವೈಭವದ ಸಂಕೇತವಾಗಿ ಪ್ರಸಿದ್ಧ ದೇವಾಲಯವನ್ನು ಕಟ್ಟಿದ್ದಾರೆ. ಅವುಗಳನ್ನು ಜೋಪಾನವಾಗಿ ಕಾಪಾಡಿ ಮುಂದಿನ ತಲೆಮಾರಿನ ಜನತೆಗೆ ಕೊಡಬೇಕಿದೆ ಎಂದು ರೂರಲ್ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಗೋವಿಂದಪ್ಪ ತಿಳಿಸಿದರು. </span></h2>.<h2><span style="font-size:24px;">ಇಲ್ಲಿನ ಅರಳಾಳು ಗ್ರಾಮದಲ್ಲಿನ ಪುರಾತನವಾದ ಆದಿ ನಾರಾಯಣ ದೇವಾಲಯದಲ್ಲಿ ರೂರಲ್ ಕಾಲೇಜಿನ ಎನ್ಸಿಸಿ ವಿದ್ಯಾರ್ಥಿಗಳು ಗುರುವಾರ ‘ಇತಿಹಾಸ ಪ್ರಸಿದ್ಧ ಸ್ಥಳಗಳ ಸಂರಕ್ಷಣೆ ಮತ್ತು ಸ್ವಚ್ಛತೆ ಕಾರ್ಯಕ್ರಮ’ದಡಿಯಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದರು. </span></h2>.<h2><span style="font-size:24px;">‘ನಮ್ಮ ದೇಶ ಸಾಂಸ್ಕೃತಿಕ ನಾಡಾಗಿದ್ದು ದೇವಾಲಯಗಳನ್ನು ವಿಶಿಷ್ಟ ಕಲಾ ವಿನ್ಯಾಸದೊಂದಿಗೆ ನಿರ್ಮಾಣ ಮಾಡಿದ್ದಾರೆ. ಅಂತಹ ವಾಸ್ತುಶಿಲ್ಪ, ಕಲ್ಲುಗಳ ಕೆತ್ತನೆ ಮತ್ತೆಲ್ಲೂ ಸಿಗುವುದಿಲ್ಲ. ಇಂತಹ ದೇವಾಲಯಗಳನ್ನು ನಾಶವಾಗದಂತೆ ನಾವು ಜೋಪಾನ ಮಾಡಬೇಕು’ ಎಂದು ಹೇಳಿದರು. </span></h2>.<h2><span style="font-size:24px;">‘ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಇಂದು ಇಲ್ಲಿ ದೇವಾಲಯದ ಸುತ್ತ ಬೆಳೆದಿದ್ದ ಗಿಡಗಂಟಿಗಳನ್ನು ತೆಗೆದು ಸ್ವಚ್ಛಗೊಳಿಸಿ ಚೆನ್ನಾಗಿ ಮಾಡಿದ್ದಾರೆ. ಗ್ರಾಮದ ಜನತೆಯು ಇದೇ ರೀತಿ ನಿರ್ವಹಣೆ ಮಾಡಿಕೊಂಡು ಹೋಗಬೇಕು’ ಎಂದು ಹೇಳಿದರು. </span></h2>.<h2><span style="font-size:24px;">ಎನ್ಸಿಸಿ ಯ 70 ವಿದ್ಯಾರ್ಥಿಗಳು ಲೆಪ್ಟಿನೆಂಟ್ ವಿಜೇಂದ್ರ ಅವರ ನೇತೃತ್ವದಲ್ಲಿ ಗ್ರಾಮದಲ್ಲಿ ಪರಿಸರ ಸ್ವಚ್ಛತೆ ಮತ್ತು ಇತಿಹಾಸ ಪ್ರಸಿದ್ಧ ಸ್ಥಳಗಳ ಸಂರಕ್ಷಣೆ ಕುರಿತು ಬ್ಯಾನರ್ಗಳನ್ನು ಹಿಡಿದು ಮತ್ತು ಕರಪತ್ರಗಳನ್ನು ಹಂಚಿ ಅರಳಾಳು ಗ್ರಾಮದಲ್ಲಿ ಪಥ ಸಂಚಲನ ನಡೆಸಿ ಜನಜಾಗೃತಿ ಮೂಡಿಸಿದರು. </span></h2>.<h2><span style="font-size:24px;">ಅರಳಾಳು ಗ್ರಾಮಸ್ಥರಾದ ಜಯರಾಮು, ಶ್ರೀನಿವಾಸ, ಬಸವರಾಜು, ಪ್ರಶಾಂತ್, ಚಿಕ್ಕಯ್ಯ, ಮೃತ್ಯಂಜಯ, ಬೋರೇಗೌಡ, ಗೋಪಾಲ, ಕೃಷ್ಣಪ್ಪ, ಸುರೇಶ್, ಮಲ್ಲೇಶ್, ಅರ್ಚಕ ದಯಾನಿಧಿ ಉಪಸ್ಥಿತರಿದ್ದರು. </span></h2>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>