ದೇಶವಾಸಿಗಳ ದೇಹ ಮತ್ತು ಮನಸ್ಸು ಹಾಗೂ ಪರಿಸರವನ್ನು ಶುದ್ಧಗೊಳಿಸಲು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಸಂಕಲ್ಪ ಮಾಡಿದ್ದಾರೆ. ಶ್ರಮದಾನದ ಮೂಲಕ ಗ್ರಾಮದ ಸ್ವಚ್ಛತೆ ಕಾಪಾಡಲು ಉಚಿತ ಸೇವೆ ಮಾಡಬೇಕಿದೆ. ಮೊದಲು ದೇವಾಲಯ, ಮಸೀದಿ, ಚರ್ಚ್ಗಳು, ಬಸದಿ, ವಿಹಾರಗಳ ಬಳಿ ಸ್ವಚ್ಛತೆ ಮಾಡಲಾಗುತ್ತಿದೆ. ಎಲ್ಲರೂ ಸಹಕಾರ ನೀಡಿ ಶುದ್ಧ ವಾತಾವರಣ ನಿರ್ಮಿಸಲು ಮುಂದೆ ಬರಬೇಕು ಎಂದರು.