‘ಸಂಘದ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಲು ಕಾರಣರಾದ ಶಾಸಕ ಎಚ್.ಸಿ. ಬಾಲಕೃಷ್ಣ ಹಾಗೂ ಸಂಘದ ನಿರ್ದೇಶಕರು ಗ್ರಾಮದ ಮುಖಂಡರಿಗೆ ಕೃತಜ್ಞತೆ ಸಲ್ಲಿಸುವೆ. ಎಲ್ಲರ ಮಾರ್ಗದರ್ಶನದಲ್ಲಿ ಸಂಘವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಶ್ರಮಿಸುವೆ’ ಎಂದು ಸಂಘದ ನೂತನ ಅಧ್ಯಕ್ಷೆ ಉಮಾ ಚಂದ್ರಯ್ಯ ಹೇಳಿದರು.
ನೂತನ ಅಧ್ಯಕ್ಷ– ಉಪಾಧ್ಯಕ್ಷರನ್ನು ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವೈ.ಎಚ್. ಮಂಜು, ಸಂಘದ ಸಿಇಒ ಚಂದ್ರು, ಸಂಘದ ನಿರ್ದೇಶಕರಾದ ಕೃಷ್ಣಪ್ಪ, ಮಹದೇವಸ್ವಾಮಿ, ಬೋರಲಿಂಗಯ್ಯ, ವೆಂಕಟೇಗೌಡ, ಸಾವಿತ್ರಮ್ಮ, ರಾಮಕೃಷ್ಣಯ್ಯ, ಮಾಜಿ ಅಧ್ಯಕ್ಷ ಪುಟ್ಟಮಾರೇಗೌಡ, ಮುಖಂಡರಾದ ಚಂದ್ರಪ್ಪ, ತಮ್ಮಯ್ಯಣ್ಣ, ನಾರಾಯಣಪ್ಪ, ಜೆ.ವಿ.ಶ್ರೀನಿವಾಸ್, ಶಾಸಕ ಬಾಲಕೃಷ್ಣ ಆಪ್ತ ಸಹಾಯಕ ರವಿ ಸನ್ಮಾನಿಸಿದರು.