ಕೂಡ್ಲೂರು ಹಾಗೂ ಮಿಣಿಕೆರೆದೊಡ್ಡಿ ಬಳಿ ಕಣ್ವ ನದಿ ಹರಿಯುತ್ತಿದೆ. ಮಿಟಿಕೆರೆಯಿಂದ ಕೂಡ್ಲೂರಿಗೆ ನದಿಗೆ ಅಡ್ಡಲಾಗಿ ಇರುವ ಕಾಲು ಸೇತುವೆಯಲ್ಲಿ ದಂಪತಿ ಹಸು ಜೊತೆ ಮನೆಗೆ ಬರುತ್ತಿದ್ದರು. ಈ ವೇಳೆ ಹಸು ಎಳೆದಿದ್ದರಿಂದ ಕಾಳಮ್ಮ ಜಾರಿ ನದಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಹೋಗಿ ವೆಂಕಟೇಶ ಸಹ ಬಿದ್ದಿದ್ದು ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟರು ಎನ್ನಲಾಗಿದೆ.