ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಪಟ್ಟಣದಲ್ಲಿ ನದಿಗೆ ಬಿದ್ದು ದಂಪತಿ ಸಾವು

Last Updated 30 ಸೆಪ್ಟೆಂಬರ್ 2022, 4:48 IST
ಅಕ್ಷರ ಗಾತ್ರ

ರಾಮನಗರ: ಚನ್ನಪಟ್ಟಣ ತಾಲ್ಲೂಕಿನ ಕೂಡ್ಲೂರು ಗ್ರಾಮದ ದಂಪತಿ ವೆಂಕಟೇಶ್ ( 55) ಹಾಗೂ ಕಾಳಮ್ಮ (50) ಗುರುವಾರ ಸಂಜೆ ಹಸು ಮೇಯಿಸಿಕೊಂಡು ಮನೆಗೆ ವಾಪಸ್ ಆಗುವ ವೇಳೆ ಕಣ್ವ ನದಿಗೆ ಬಿದ್ದು ಮೃತಪಟ್ಟರು.

ಕೂಡ್ಲೂರು ಹಾಗೂ ಮಿಣಿಕೆರೆದೊಡ್ಡಿ ಬಳಿ ಕಣ್ವ ನದಿ ಹರಿಯುತ್ತಿದೆ. ಮಿಟಿಕೆರೆಯಿಂದ ಕೂಡ್ಲೂರಿಗೆ ನದಿಗೆ ಅಡ್ಡಲಾಗಿ ಇರುವ ಕಾಲು ಸೇತುವೆಯಲ್ಲಿ ದಂಪತಿ ಹಸು ಜೊತೆ ಮನೆಗೆ ಬರುತ್ತಿದ್ದರು. ಈ ವೇಳೆ ಹಸು ಎಳೆದಿದ್ದರಿಂದ ಕಾಳಮ್ಮ ಜಾರಿ ನದಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಹೋಗಿ ವೆಂಕಟೇಶ ಸಹ ಬಿದ್ದಿದ್ದು ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT