ಗುಣಮುಖ: ಚನ್ನಪಟ್ಟಣ ತಾಲ್ಲೂಕಿನಲ್ಲಿ 22, ಕನಕಪುರ ತಾಲ್ಲೂಕಿನಲ್ಲಿ 18, ಮಾಗಡಿ ತಾಲ್ಲೂಕಿನಲ್ಲಿ 6 ಹಾಗೂ ರಾಮನಗರ ತಾಲ್ಲೂಕಿನಲ್ಲಿ 47 ಜನ ಸೇರಿ ಒಟ್ಟಾರೆ 93 ಜನರು ಮಂಗಳವಾರ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 3040 ಜನರು ಗುಣಮುಖರಾಗಿದ್ದಾರೆ. ಈ ಪೈಕಿ ಚನ್ನಪಟ್ಟಣ 753, ಕನಕಪುರ 617, ಮಾಗಡಿ 384 ಮತ್ತು ರಾಮನಗರ 1286 ಜನರು ಸೇರಿದ್ದಾರೆ. ಇನ್ನೂ 943 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.