ಯುವ ಸ್ಪಂದನ ಕೇಂದ್ರದ ಪರಿವರ್ತಕ ಡಾ.ಡೊಳ್ಳು ಚಂದ್ರು ಮಾತನಾಡಿ, ಯುವ ಜನರಿಂದ ಯುವ ಜನರಿಗಾಗಿ ಜನರಲ್ಲಿನ ಸಂಬಂಧಗಳು, ಸುರಕ್ಷತೆ, ಸಂವಹನ, ಮಾರ್ಗದರ್ಶನ, ಆರೋಗ್ಯ ಜೀವನ ಶೈಲಿ, ಬೆಳವಣಿಗೆ ಹಾಗೂ ಶಿಕ್ಷಣದಂತಹ ಹಲವು ಆಶಯಗಳ ಅನುಷ್ಠಾನ ಕಾರ್ಯದಲ್ಲಿ ಯುವಸ್ಪಂದನ ಕೇಂದ್ರ ಕೆಲಸ ನಿರ್ವಹಿಸುತ್ತಿದೆ. ಕಳೆದ 8 ತಿಂಗಳಿಂದ ಎದುರಾಗಿರುವ ಕೋವಿಡ್ ಜನರನ್ನು ಚಿಂತೆಗೀಡುಮಾಡಿದೆ. ಜನರು ಭಯಪಡುವ ಅವಶ್ಯಕತೆಯಿಲ್ಲ. ಬದಲಿಗೆ ಎಚ್ಚರ ವಹಿಸುವ ಮೂಲಕ ನಾವು ರೋಗದ ಹತೋಟಿಗೆ ಪಣತೊಡೋಣ. ಹೆಚ್ಚಿನ ಮಾಹಿತಿ ಅವಶ್ಯವಿದ್ದಲ್ಲಿ ಯುವ ಪರಿವರ್ತಕರ ನೆರವು ಪಡೆಯಿರಿ ಎಂದು ಕರೆ ನೀಡಿದರು.