ಕೋಡಿಹಳ್ಳಿ ಸಾತನೂರು, ಉಯ್ಯಂಬಳ್ಳಿ ಹೋಬಳಿಗಳು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿವೆ. ಈ ಭಾಗದಲ್ಲಿ ಕಳ್ಳಬೇಟೆ ಹೆಚ್ಚಾಗಿ ನಡೆಯುತ್ತದೆ. ಬೇಟೆಗಾರರು ಅರಣ್ಯದೊಳಗೆ ಹೋಗುವ ಬದಲು ಕಾಡಂಚಿನ ಜಮೀನುಗಳಲ್ಲಿ ನಾಡಬಾಂಬ್ (ಮದ್ದಿನ ಉಂಡೆ) ಇಟ್ಟು ಬೇಟೆಯಾಡುತ್ತಾರೆ. ಕಾಡುಪ್ರಾಣಿಗಳ ಬೇಟೆಗಾಗಿ ಇಟ್ಟಿರುವ ಉಂಡೆಗಳನ್ನು ಹಸುಗಳು ತಿಂದಾಗ ಅವುಗಳ ಬಾಯಿ ಛಿದ್ರಗೊಳ್ಳುತ್ತದೆ. ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿವೆ.