<p><strong>ಚನ್ನಪಟ್ಟಣ</strong>: ಖಾಸಗಿ ಕೋಳಿ ಸಾಕಾಣಿಕೆ ಕಂಪನಿಯು ಕಳೆದ ಐದು ದಿನಗಳಿಂದ ಕೋಳಿಗಳಿಗೆ ಆಹಾರ ನೀಡದ ಕಾರಣ ತಾಲ್ಲೂಕು ಸೇರಿದಂತೆ ಜಿಲ್ಲೆಯ ಹಲವೆಡೆ ಇರುವ ಕೋಳಿ ಫಾರಂಗಳಲ್ಲಿ ಕೋಳಿಗಳು ಸಾಯುತ್ತಿವೆ. ಈ ಬಗ್ಗೆ ನ್ಯಾಯ ನೀಡಬೇಕೆಂದು ಜಿಲ್ಲೆಯ ಕೋಳಿ ಸಾಕಾಣಿಕೆದಾರರು ನಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.</p><p>ಜಿಲ್ಲೆಯಲ್ಲಿ ಹಲವು ರೈತರು ಕಂಪನಿಯೊಂದರ ಜತೆ ಕೋಳಿ ಸಾಕಾಣಿಕೆಗೆ ಒಪ್ಪಂದ ಮಾಡಿಕೊಂಡು ಸಾಕಾಣಿಕೆ ಮಾಡುತ್ತಾ ಬಂದಿದ್ದೇವೆ. ಈ ಕಂಪನಿ ಶಾಖೆಯು ಚನ್ನಪಟ್ಟಣದಲ್ಲಿದ್ದು, ಇದು ಕೋಳಿಗಳಿಗೆ ಒದಗಿಸುವ</p><p>ಆಹಾರ ಸಮರ್ಪಕವಾಗಿ ನೀಡುತ್ತಿಲ್ಲ. ಇದರಿಂದ ಕೋಳಿ ತೂಕದಲ್ಲಿ ಇಳಿಕೆ ಕಂಡು<br>ರೈತರಿಗೆ ನಷ್ಟ ಎದುರಾಗಿದೆ. ಇದಲ್ಲದೆ ಕಳೆದ ಐದು ದಿನಗಳಿಂದ ಕಂಪನಿ ಶಾಖೆಯು ಕೋಳಿ ಆಹಾರ ನೀಡುವುದನ್ನು ನಿಲ್ಲಿಸಿದೆ. ಇದರಿಂದ ನೂರಾರು ಕೋಳಿಗಳು ಸಾಯುತ್ತಿವೆ. ಕೋಳಿ ಸಾಕಾಣಿಕಾ ರೈತರು ಸಂಕಷ್ಟ ಎದುರಿಸುವಂತಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.</p><p>ಕೋಳಿ ಸಾಕಾಣಿಕೆ ಮಾಡಲು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿರುವ ರೈತರಿಗೆ ಈಗ ಕಂಪನಿ ಸರಿಯಾಗಿ ಸ್ಪಂದಿಸದೆ ತೊಂದರೆ ಕೊಡುತ್ತಿದೆ. ಈ ಬಗ್ಗೆ ಪ್ರಶ್ನಿಸಿದರೆ ಕಂಪನಿ ಅಧಿಕಾರಿಗಳು ನಷ್ಟದ ಕಾರಣ ನೀಡುತ್ತಾರೆ. ಜತೆಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು<br>ದೂರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಪಟ್ಟಣ</strong>: ಖಾಸಗಿ ಕೋಳಿ ಸಾಕಾಣಿಕೆ ಕಂಪನಿಯು ಕಳೆದ ಐದು ದಿನಗಳಿಂದ ಕೋಳಿಗಳಿಗೆ ಆಹಾರ ನೀಡದ ಕಾರಣ ತಾಲ್ಲೂಕು ಸೇರಿದಂತೆ ಜಿಲ್ಲೆಯ ಹಲವೆಡೆ ಇರುವ ಕೋಳಿ ಫಾರಂಗಳಲ್ಲಿ ಕೋಳಿಗಳು ಸಾಯುತ್ತಿವೆ. ಈ ಬಗ್ಗೆ ನ್ಯಾಯ ನೀಡಬೇಕೆಂದು ಜಿಲ್ಲೆಯ ಕೋಳಿ ಸಾಕಾಣಿಕೆದಾರರು ನಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.</p><p>ಜಿಲ್ಲೆಯಲ್ಲಿ ಹಲವು ರೈತರು ಕಂಪನಿಯೊಂದರ ಜತೆ ಕೋಳಿ ಸಾಕಾಣಿಕೆಗೆ ಒಪ್ಪಂದ ಮಾಡಿಕೊಂಡು ಸಾಕಾಣಿಕೆ ಮಾಡುತ್ತಾ ಬಂದಿದ್ದೇವೆ. ಈ ಕಂಪನಿ ಶಾಖೆಯು ಚನ್ನಪಟ್ಟಣದಲ್ಲಿದ್ದು, ಇದು ಕೋಳಿಗಳಿಗೆ ಒದಗಿಸುವ</p><p>ಆಹಾರ ಸಮರ್ಪಕವಾಗಿ ನೀಡುತ್ತಿಲ್ಲ. ಇದರಿಂದ ಕೋಳಿ ತೂಕದಲ್ಲಿ ಇಳಿಕೆ ಕಂಡು<br>ರೈತರಿಗೆ ನಷ್ಟ ಎದುರಾಗಿದೆ. ಇದಲ್ಲದೆ ಕಳೆದ ಐದು ದಿನಗಳಿಂದ ಕಂಪನಿ ಶಾಖೆಯು ಕೋಳಿ ಆಹಾರ ನೀಡುವುದನ್ನು ನಿಲ್ಲಿಸಿದೆ. ಇದರಿಂದ ನೂರಾರು ಕೋಳಿಗಳು ಸಾಯುತ್ತಿವೆ. ಕೋಳಿ ಸಾಕಾಣಿಕಾ ರೈತರು ಸಂಕಷ್ಟ ಎದುರಿಸುವಂತಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.</p><p>ಕೋಳಿ ಸಾಕಾಣಿಕೆ ಮಾಡಲು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿರುವ ರೈತರಿಗೆ ಈಗ ಕಂಪನಿ ಸರಿಯಾಗಿ ಸ್ಪಂದಿಸದೆ ತೊಂದರೆ ಕೊಡುತ್ತಿದೆ. ಈ ಬಗ್ಗೆ ಪ್ರಶ್ನಿಸಿದರೆ ಕಂಪನಿ ಅಧಿಕಾರಿಗಳು ನಷ್ಟದ ಕಾರಣ ನೀಡುತ್ತಾರೆ. ಜತೆಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು<br>ದೂರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>