ನೂತನವಾಗಿ ಆಯ್ಕೆಯಾದ ಮಹೇಶ್, ಜೀವನ್, ಕುಮಾರ್ ಎನ್ ಮತ್ತು ಆನಂದ್, ಗೆಲುವಿಗೆ ಶ್ರಮಿಸಿದ ಮುಖಂಡರಿಗೆ ಅಭಿನಂದನೆ ಸಲ್ಲಿಸಿದರು. ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಾಣಕಲ್ ನಟರಾಜ್, ಜಿಲ್ಲಾ ಪಂಚಾಯಿತಿ ಸದಸ್ಯ ಪುಟ್ಟಯ್ಯ, ಎ.ಪಿ.ಎಂ.ಸಿ ನಿರ್ದೇಶಕ ರಮೇಶ್, ಮುಖಂಡರಾದ ಚಂದ್ರಶೇಖರ್ ಎಲ್, ನರಸಿಂಹಯ್ಯ, ಸಂಪತ್ ಕುಮಾರ್, ಸ್ವಾಮಿ, ಗೋಪಾಲ್ ರಾಜು ಇದ್ದರು.