‘ಕೆಲವರಿಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಮನಗರ ಜಿಲ್ಲೆ ನೆನಪಾಗುತ್ತದೆ. ಆಗಾಗ ನೆಂಟರಂತೆ ಬಂದು ಹೋಗುತ್ತಾರೆ. ನಿಮ್ಮ ಕಷ್ಟ–ಸುಖಕ್ಕೆ ಯಾರೂ ಬರುವುದಿಲ್ಲ. ನಿಮ್ಮೊಂದಿಗೆ ಹೆಗಲು ಕೊಟ್ಟು ಯಾರಾದರೂ ನಿಂತಿದ್ದರೆ, ಅದು ನಾನು ಮತ್ತು ಶಿವಕುಮಾರ್. ರಾಜಕೀಯ ಹಿತಾಸಕ್ತಿಗಾಗಿ ಬಿಜೆಪಿ ಹಾಗೂ ಜೆಡಿಎಸ್ನವರು ಕನಕಪುರವನ್ನು ಕೆಟ್ಟದಾಗಿ ಬಿಂಬಿಸುತ್ತಿರುವುದನ್ನು ಒಕ್ಕೊರಲಿನಿಂದ ಖಂಡಿಸಬೇಕು’ ಎಂದು ಕರೆ ನೀಡಿದರು.