ಸಿಂಧು ಮದ್ದೂರು ತಾಲ್ಲೂಕಿನ ವೈದ್ಯನಾಥಪುರದವರು. ಬಿಎಸ್ಸಿ ನರ್ಸಿಂಗ್ ಓದಿರುವ ಈಕೆ ಕೆಲ ವರ್ಷಗಳಿಂದ ನರ್ಸಿಂಗ್ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೋವಿಡ್ ಸೋಂಕು ಜಾಸ್ತಿಯಾದ ಕಾರಣಕ್ಕೆ ‘ಕೆಲಸ ಬಿಟ್ಟು ಬಂದು ಬಿಡು’ ಎಂದು ಮನೆಯವರು ಆತಂಕದಲ್ಲಿ ಹೇಳಿದ್ದುಂಟು. ಆದರೆ, ವೃತ್ತಿ ಬಿಡುವ ಯೋಚನೆ ಕೂಡ ಮಾಡಿಲ್ಲ. ಅಷ್ಟೇ ಏಕೆ ತಿಂಗಳ ಕಾಲ ರಜೆ ಇಲ್ಲದೇ ಕೆಲಸ ಮಾಡಿದ್ದಾರೆ.