<p><strong>ಕನಕಪುರ:</strong> ಕಾಡಾನೆಗಳ ದಾಳಿಯಿಂದ ಬಸವನಹಳ್ಳಿಯಲ್ಲಿ ತೆಂಗು ಮತ್ತು ಮಾವಿನ ಮರಗಳು ಹಾಳಾಗಿವೆ. ಸೋಮವಾರ ರಾತ್ರಿ ಗ್ರಾಮದ ರೈತ ಗಂಟೆ ಲಿಂಗೇಗೌಡರ 22 ತೆಂಗಿನ ಮರ, ಕಾಳೇಗೌಡರ 7 ತೆಂಗಿನ ಮರ, ವಿಜಯಕುಮಾರ್ ಅವರ 10 ತೆಂಗಿನ ಮರ ಮತ್ತು ಮರಿಗೌಡರ 5 ಮಾವಿನ ಮರಗಳು ಕಾಡಾನೆಗಳ ದಾಳಿಗೆ ನಾಶವಾಗಿವೆ.</p>.<p>ಎರಡು ಕಾಡಾನೆಗಳು ತೋಟಗಳಿಗೆ ನುಗ್ಗಿ, ಫಸಲು ಬಿಡಲು ಪ್ರಾರಂಭಿಸಿದ್ದ ಸುಮಾರು ಏಳು ವರ್ಷದ ತೆಂಗಿನ ಗಿಡಗಳ ಸುಳಿಗಳನ್ನು ಕಿತ್ತು ತಿಂದಿವೆ. </p>.<p>ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿಗೆ ಗುರಿಯಾದ ತೋಟಗಳನ್ನು ಸಂದರ್ಶಿಸಿ ಪರಿಶೀಲನೆ ನಡೆಸಿದರು. ಸಂತ್ರಸ್ತ ರೈತರಿಂದ ವಿವರ ಪಡೆದರು. ಹಾನಿಗೊಳಗಾದ ತೆಂಗು ಮತ್ತು ಮಾವಿನ ಗಿಡಗಳ ಕುರಿತು ಇಲಾಖೆಗೆ ವರದಿ ಸಲ್ಲಿಸಿ ಪರಿಹಾರ ದೊರಕಿಸಿಕೊಡುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.</p>.<p>ನಾಶವಾದ ತೆಂಗಿನ ಗಿಡಗಳು ಸುಮಾರು ಏಳರಿಂದ ಎಂಟು ವರ್ಷದ ಫಸಲು. ಸರ್ಕಾರ ಪ್ರತಿ ಗಿಡಕ್ಕೆ ನೀಡುವ ₹1 ಸಾವಿರ ಪರಿಹಾರ ಬಹಳ ಕಡಿಮೆ ಎಂದು ಅವರ ರೈತರು ಆಕ್ರೋಶ ವ್ಯಕ್ತಪಡಿಸಿದರು.</p>.<p>ಅರಣ್ಯ ಇಲಾಖೆಯು ನಾಶವಾದ ಪ್ರತಿ ಗಿಡಕ್ಕೂ ಕನಿಷ್ಠ ₹25 ಸಾವಿರ ಪರಿಹಾರ ನೀಡಬೇಕೆಂದು ಯುವ ರೈತ ಕುಮಾರ್ ಒತ್ತಾಯಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಪುರ:</strong> ಕಾಡಾನೆಗಳ ದಾಳಿಯಿಂದ ಬಸವನಹಳ್ಳಿಯಲ್ಲಿ ತೆಂಗು ಮತ್ತು ಮಾವಿನ ಮರಗಳು ಹಾಳಾಗಿವೆ. ಸೋಮವಾರ ರಾತ್ರಿ ಗ್ರಾಮದ ರೈತ ಗಂಟೆ ಲಿಂಗೇಗೌಡರ 22 ತೆಂಗಿನ ಮರ, ಕಾಳೇಗೌಡರ 7 ತೆಂಗಿನ ಮರ, ವಿಜಯಕುಮಾರ್ ಅವರ 10 ತೆಂಗಿನ ಮರ ಮತ್ತು ಮರಿಗೌಡರ 5 ಮಾವಿನ ಮರಗಳು ಕಾಡಾನೆಗಳ ದಾಳಿಗೆ ನಾಶವಾಗಿವೆ.</p>.<p>ಎರಡು ಕಾಡಾನೆಗಳು ತೋಟಗಳಿಗೆ ನುಗ್ಗಿ, ಫಸಲು ಬಿಡಲು ಪ್ರಾರಂಭಿಸಿದ್ದ ಸುಮಾರು ಏಳು ವರ್ಷದ ತೆಂಗಿನ ಗಿಡಗಳ ಸುಳಿಗಳನ್ನು ಕಿತ್ತು ತಿಂದಿವೆ. </p>.<p>ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿಗೆ ಗುರಿಯಾದ ತೋಟಗಳನ್ನು ಸಂದರ್ಶಿಸಿ ಪರಿಶೀಲನೆ ನಡೆಸಿದರು. ಸಂತ್ರಸ್ತ ರೈತರಿಂದ ವಿವರ ಪಡೆದರು. ಹಾನಿಗೊಳಗಾದ ತೆಂಗು ಮತ್ತು ಮಾವಿನ ಗಿಡಗಳ ಕುರಿತು ಇಲಾಖೆಗೆ ವರದಿ ಸಲ್ಲಿಸಿ ಪರಿಹಾರ ದೊರಕಿಸಿಕೊಡುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.</p>.<p>ನಾಶವಾದ ತೆಂಗಿನ ಗಿಡಗಳು ಸುಮಾರು ಏಳರಿಂದ ಎಂಟು ವರ್ಷದ ಫಸಲು. ಸರ್ಕಾರ ಪ್ರತಿ ಗಿಡಕ್ಕೆ ನೀಡುವ ₹1 ಸಾವಿರ ಪರಿಹಾರ ಬಹಳ ಕಡಿಮೆ ಎಂದು ಅವರ ರೈತರು ಆಕ್ರೋಶ ವ್ಯಕ್ತಪಡಿಸಿದರು.</p>.<p>ಅರಣ್ಯ ಇಲಾಖೆಯು ನಾಶವಾದ ಪ್ರತಿ ಗಿಡಕ್ಕೂ ಕನಿಷ್ಠ ₹25 ಸಾವಿರ ಪರಿಹಾರ ನೀಡಬೇಕೆಂದು ಯುವ ರೈತ ಕುಮಾರ್ ಒತ್ತಾಯಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>