ಕುಣಿಗಲ್–ಮಾಗಡಿ, ಕಲ್ಲುದೇವನಹಳ್ಳಿ, ಅಜ್ಜನಹಳ್ಳಿ, ಮತ್ತಿಕೆರೆ, ಬ್ಯಾಲಕೆರೆ, ಗುಡೇಮಾರನಹಳ್ಳಿ, ಹೊಸಪಾಳ್ಯ, ಲಕ್ಷ್ಮೀಪುರ ಮಾರ್ಗವಾಗಿ ನಿತ್ಯ ಮುಂಜಾನೆ 9 ಗಂಟೆಗೆ ಮತ್ತು ಸಂಜೆ 4ಗಂಟೆಯ ನಂತರ ಸೂಕ್ತ ಬಸ್ ಸಂಚರಿಸಿದರೆ, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾದರೆ ಸಹಿಸುವುದಿಲ್ಲ. ವಿದ್ಯಾರ್ಥಿಗಳು ಸಹ ಸರ್ಕಾರಿ ಬಸ್ ಕಂಡಕ್ಟರ್ ಜತೆ ಸೌಜನ್ಯದಿಂದ ನಡೆದುಕೊಳ್ಳಬೇಕು. ಬೆಂಗಳೂರು ಮಾರ್ಗವಾಗಿ ಸಂಜೆ ಮತ್ತು ಮುಂಜಾನೆ ಸರ್ಕಾರಿ ಬಸ್ಗಳು ಸಮಯಕ್ಕೆ ಸರಿಯಾಗಿ ಸಂಚರಿಸುವಂತೆ ಅನುಕೂಲ ಮಾಡಿಕೊಡಬೇಕು ಎಂದರು.