ಗ್ರಾಮದ ಹೊರವಲಯದಲ್ಲಿರುವ ನಾಗಮ್ಮ ಪುಟ್ಟೇಗೌಡರ 22 ಗುಂಟೆ ಜಮೀನಿನಲ್ಲಿದ್ದ 40 ತೆಂಗಿನ ಸಸಿ, 20 ಅಡಿಕೆ ಮರಕ್ಕೆ ಹಾನಿಯಾಗಿದೆ. ದೊಡ್ಡಬೋರೇಗೌಡರ ಕೆ.ಬಿ. ನಿಂಗರಾಜು ಜಮೀನಿನ 40 ತೆಂಗಿನ ಮರ, ಕೆ.ಎನ್. ದೇವರಾಜೇಗೌಡರ ಸುಶೀಲಮ್ಮ ಜಮೀನಿನ 20 ತೆಂಗು, ರಾಜೇಗೌಡರ ಕೆ.ಆರ್. ಲೋಹಿತ್ ಜಮೀನಿನಲ್ಲಿದ್ದ 3 ತೆಂಗಿನ ಮರ,10 ತೆಂಗಿನ ಸಸಿ ಸಂಪೂರ್ಣ ನಾಶವಾಗಿದೆ.
ವಿಷಯ ತಿಳಿದ ತಾಲೂಕು ಅಗ್ನಿಶಾಮಕದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕದಳ ಠಾಣಾಧಿಕಾರಿ ಶಿವಣ್ಣ, ಸಹಾಯಕ ಠಾಣಾಧಿಕಾರಿ ಚಂದ್ರಶೇಖರ್, ಸಿಬ್ಬಂದಿಗಳಾದ ಶ್ರೀಕಾಂತ್, ಓಂಕಾರ್ ಪಾಟೀಲ್, ಶ್ರೀಶೈಲ ಕುದರಿ ಇದ್ದರು.