ಕನಕಪುರ: ಮತದಾರರನ್ನು ಸೆಳೆಯಲು ಸ್ವೀಪ್ ಸಮಿತಿ ನಿರ್ಮಾಣ ಮಾಡಿದ್ದ ಅರಣ್ಯ ಮತಗಟ್ಟೆ ಕೇಂದ್ರ ಜನರ ಗಮನ ಸೆಳೆಯಿತು.
ನಗರದ ಸಂಗಮ ರಸ್ತೆಯಲ್ಲಿರುವ ಜಿಟಿಟಿಸಿ ಕೇಂದ್ರದಲ್ಲಿ ನಗರಸಭೆ ಪೌರಾಯುಕ್ತರು ಅರಣ್ಯ ಇಲಾಖೆ ಸಹಕಾರದೊಂದಿಗೆ ಅರಣ್ಯ ಮತಗಟ್ಟೆ ನಿರ್ಮಾಣ ಮಾಡಿ ಮೊದಲು ಮತದಾನಕ್ಕೆ ಬಂದ 500 ಮಂದಿಗೆ ಉಚಿತವಾಗಿ ಹಣ್ಣಿನ ಗಿಡಗಳನ್ನು ವಿತರಣೆ ಮಾಡಿದರು.
ಶುಕ್ರವಾರ ಬೆಳಗ್ಗೆ 6ಕ್ಕೆ ಅಣುಕು ಮತದಾನ ನಡಸಿ ಮತಪೆಟ್ಟಿಗೆಯನ್ನು ಪರಿಶೀಲಿಸಿ ಸರಿ ಇದೆ ಎಂದು ಖಾತರಿ ಪಡಿಸಿಕೊಂಡ ನಂತರ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಸ್ವತಃ ನಗರಸಭೆ ಪೌರಾಯುಕ್ತ ಎಂ.ಎಸ್.ಮಹದೇವ್ ಅವರೇ ಮತದಾನ ಮಾಡಿದ ಮೊದಲ 500 ಮಂದಿಗೆ ಹಣ್ಣಿನ ಗಿಡಗಳನ್ನು ವಿತರಣೆ ಮಾಡಿದರು.
ಗಿಡಗಳನ್ನು ಕೊಟ್ಟು ಈ ಗಿಡಗಳನ್ನು ಬೆಳಸುವ ಮೂಲಕ ಪರಿಸರ ಕಾಪಾಡಿ ಎಂದರು.