ತಿಪ್ಪಸಂದ್ರ ಹೋಬಳಿಯ ಹುಳ್ಳೇನಹಳ್ಳಿಯ ಎ.ಕೆ. ಲಾಯ ಗ್ರಾಮದ ನಿವಾಸಿ ಬರ್ಕತ್ ಉಲ್ಲಾ ಖಾನ್ ಮೋಸ ಹೋದ ವ್ಯಕ್ತಿ. ಅವರ ವಾಟ್ಸ್ ಆ್ಯಪ್ಗೆ ಬಂದ ‘ಬಿಡುವಿನ ವೇಳೆಯಲ್ಲಿ ಕೆಲಸ ಮಾಡಿ, ಹಣ ಗಳಿಸಬಹುದು’ ಎಂಬ ಅನಾಮಧೇಯ ಸಂದೇಶಕ್ಕೆ ಮಾರುಹೋಗಿ ರಿಪ್ಲೈ ಮಾಡಿದ್ದಾರೆ. ನಂತರ ಲಿಂಕ್ಡ್ ಇನ್ ಐಡಿಯಾ 2024 ಟೆಲಿಗ್ರಾಂ ಲಿಂಕ್ ಅನ್ನು ಕಳಿಸಿ ಲಾಗಿನ್ ಆಗಲು ತಿಳಿಸಲಾಗಿದೆ. ನಂತರ ಅದರಲ್ಲಿ ಹೋಟೆಲ್ಗಳನ್ನು ರಿವ್ಯೂ ಮಾಡಿ 5 ಸ್ಟಾರ್ ರೇಟಿಂಗ್ ಕೊಟ್ಟರೆ ಹಣ ಗಳಿಸಬಹುದಾಗಿ ತಿಳಿಸಲಾಗಿದೆ.