‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿರುವ ರಾಮನಗರ ತಾಲ್ಲೂಕಿನ ಶಿಥಿಲಾವಸ್ಥೆ ತಲುಪಿದ ಶಾಲಾ ಕಟ್ಟಡಗಳ ಕುರಿತು ವಿಶೇಷ ವರದಿಯ ತುಣುಕುಗಳು
‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿರುವ ರಾಮನಗರ ತಾಲ್ಲೂಕಿನ ಶಿಥಿಲಾವಸ್ಥೆ ತಲುಪಿದ ಶಾಲಾ ಕಟ್ಟಡಗಳ ಕುರಿತು ವಿಶೇಷ ವರದಿಯ ತುಣುಕು
ಪಿ. ಸೋಮಲಿಂಗಯ್ಯ ಕ್ಷೇತ್ರ ಶಿಕ್ಷಣಾಧಿಕಾರಿ ರಾಮನಗರ
ಉಮೇಶ್ ಜಿ. ಗಂಗವಾಡಿ ಅಧ್ಯಕ್ಷ ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ
ತಾಲ್ಲೂಕಿನ ಹಳೆಯ ಮತ್ತು ಶಿಥಿಲ ಶಾಲಾ ಕಟ್ಟಡಗಳ ದುರಸ್ತಿಗೆ ಪ್ರಸಕ್ತ ಸಾಲಿನಲ್ಲಿ ಕ್ರಿಯಾಯೋಜನೆ ತಯಾರಿಸಿ ಕಳಿಸಲಾಗಿದೆ. ಅನುದಾನ ಬಿಡುಗಡೆಯಾದ ತಕ್ಷಣ ದುರಸ್ತಿ ಕೆಲಸ ಆರಂಭಿಸಲಾಗುವುದು
– ಪಿ. ಸೋಮಲಿಂಗಯ್ಯ ಕ್ಷೇತ್ರ ಶಿಕ್ಷಣಾಧಿಕಾರಿ ರಾಮನಗರ‘ಶಾಲೆ ಮುಚ್ಚುವ ಹುನ್ನಾರ’
‘ರಾಮನಗರ ತಾಲ್ಲೂಕಿನಲ್ಲಿ ಸುಮಾರು ಕನಿಷ್ಠ 30 ವರ್ಷದಿಂದ ಸುಮಾರು 50 ವರ್ಷ ಮೀರಿದ ಹಳೆಯ ಶಾಲಾ ಕಟ್ಟಡಗಳಿವೆ. ವರ್ಷಗಳಿಂದ ಸೋರುತ್ತಿರುವ ಗೋಡೆಗಳು ಬಿರುಕಾಗಿರುವ ನೆಲ ಹದಗೆಟ್ಟಿರುವ ವರ್ಷಗಳಿಂದ ಬಣ್ಣ ಕಾಣದ ಶಾಲೆಗಳನ್ನು ಬೇಕೆಂದೇ ದುರಸ್ತಿ ಮಾಡದೆ ಕಡೆಗಣಿಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ದಾಖಲಾತಿ ಕುಸಿಯುತ್ತಿರುವ ಈ ಶಾಲೆಗಳನ್ನು ಮುಂದೊಂದು ದಿನ ವಿದ್ಯಾರ್ಥಿಗಳಿಲ್ಲ ಎಂಬ ನೆಪವೊಡ್ಡಿ ಮುಚ್ಚುವ ಹುನ್ನಾರವನ್ನು ಶಿಕ್ಷಣ ಇಲಾಖೆಯೇ ಮಾಡುತ್ತಿದೆ. ಶಾಲೆಗಳ ದಾಖಲಾತಿ ಕುಸಿತಕ್ಕೆ ಕಾರಣವಾಗಿರುವ ಕಟ್ಟಡ ಸಮಸ್ಯೆ ಮೂಲಸೌಕರ್ಯ ಶಿಕ್ಷಕರ ಕೊರತೆಯನ್ನು ಪರಿಹರಿಸಿದರೆ ಈ ಶಾಲೆಗಳು ಕ್ರಮೇಣ ವಿದ್ಯಾರ್ಥಿಗಳನ್ನು ಸೆಳೆಯಲಿವೆ. ಇಲಾಖೆ ಈ ಕುರಿತು ಗಮನ ಹರಿಸಬೇಕಿದೆ’ ಎಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಅಧ್ಯಕ್ಷ ಉಮೇಶ್ ಜಿ. ಗಂಗವಾಡಿ ಒತ್ತಾಯಿಸಿದರು.