ತಾಲ್ಲೂಕಿನಲ್ಲಿ ಸಾರ್ವಜನಿಕರ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಲು ಅಧಿಕಾರಿಗಳ ತಂಡ ನಾನಾ ರೀತಿಯಲ್ಲಿ ಪ್ರಯತ್ನಿಸುತ್ತಿದ್ದು, ಇಷ್ಟಿದ್ದರೂ ವಾಹನ ಸವಾರರು ಲಾಕ್ಡೌನ್ ಲೆಕ್ಕಿಸದೆ ಬೇಕಾಬಿಟ್ಟಿ ಓಡಾಟ ನಡೆಸುತ್ತಿದ್ದಾರೆ. ಇದನ್ನು ತಡೆಯಲು ಸಂಚಾರ ತಪಾಸಣಾ ತಂಡದ ಅಧಿಕಾರಿಗಳು ವಾಹನ ಸವಾರರನ್ನು ತಡೆದು ಕೆರೆ ಏರಿ ರಸ್ತೆಯಲ್ಲಿ ಕಬ್ಬಿನ ಹಾಲು ಮಾರಾಟ ಮಾಡುತ್ತಿದ್ದ ಅಂಗಡಿಯಿಂದ ಕಬ್ಬಿನ ಹಾಲು ಖರೀದಿಸಿ ವಾಹನ ಸವಾರರಿಗೆ ನೀಡಿ, ಮನೆಯಲ್ಲಿ ಇರುವಂತೆ ಮನವಿ ಮಾಡಿದರು.