<p><strong>ಮಾಗಡಿ:</strong> ‘ರಂಗಕಲೆ ಉಳಿಸಲು ಶ್ರಮಿಸುತ್ತಿರುವ ರಂಗ ನಿರ್ದೇಶಕರು ಮತ್ತು ಕಲಾವಿದರನ್ನು ಗುರುತಿಸಿ ಸರ್ಕಾರ ಸವಲತ್ತು ನೀಡಬೇಕು’ ಎಂದು ರಂಗ ನಿರ್ದೇಶಕ ಎಚ್.ಎಂ. ನಾರಾಯಣಪ್ಪ ಒತ್ತಾಯಿಸಿದರು.</p>.<p>ರಂಗನಾಥಸ್ವಾಮಿ ದನಗಳ ಜಾತ್ರೆ ಅಂಗವಾಗಿ ಹೊಸಪೇಟೆ ಸರ್ಕಲ್ನಲ್ಲಿ ರಂಗನಾಥಸ್ವಾಮಿ ಕೃಪಾಪೋಷಿತ ಕಲಾ ಸಂಘದಿಂದ ಶುಕ್ರವಾರ ರಾತ್ರಿ ನಡೆದ ‘ಕುರುಕ್ಷೇತ್ರ’ ಪೌರಾಣಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>ಕೊರೊನಾ ಸೋಂಕು ಹರಡುವಿಕೆಯಿಂದಾಗಿ ಜಿಲ್ಲಾಡಳಿತ ನಾಟಕ ಪ್ರದರ್ಶನಕ್ಕೆ ನೀಡಿರುವ ತಡೆಯನ್ನು ತೆರವುಗೊಳಿಸಬೇಕು. ಪೌರಾಣಿಕ ನಾಟಕಾಭಿನಯವಿಲ್ಲದೆ ಹಸಿವಿನಿಂದ ನರಳುತ್ತಿರುವ ರಂಗ ಕಲಾವಿದರ ಸಂಕಟಕ್ಕೆ ಸ್ಪಂದಿಸಬೇಕು ಎಂದು ಹೇಳಿದರು.</p>.<p>ಪೌರಾಣಿಕ ನಾಟಕದಿಂದಾಗಿ ಸಮಾಜದಲ್ಲಿ ಭಕ್ತಿ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಬಹುದು. ಸಿನಿಮಾ ನಟರಿಗೆ ಕೊಡುವ ಗೌರವವನ್ನು ರಂಗ ಕಲಾವಿದರಿಗೆ ನೀಡದೆ ತಾರತಮ್ಯ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.</p>.<p>ಪಟ್ಟಣದಲ್ಲಿ ಭೂತ ಬಂಗಲೆಯಂತಿರುವ ಕೆಂಪೇಗೌಡ ಬಯಲು ರಂಗಮಂದಿರವನ್ನು ದುರಸ್ತಿಪಡಿಸಿ ಕಲಾವಿದರ ಸಂಘದ ವಶಕ್ಕೆ ಒಪ್ಪಿಸಬೇಕು ಎಂದು<br />ಹೇಳಿದರು.</p>.<p>ಪುರಸಭೆ ಸದಸ್ಯರಾದ ಎಚ್.ಆರ್. ಶಿವಕುಮಾರ್, ಆಶಾರಾಣಿ ರಘು, ಕಾಂಗ್ರೆಸ್ ಮುಖಂಡ ಬಿ.ವಿ. ಜಯರಾಮ್, ಹೊಸಪೇಟೆಯ ಎಚ್.ಕೆ. ರಾಜಣ್ಣ, ಚಿಕ್ಕನರಸಿಂಹಯ್ಯ, ಎಚ್.ಎಂ. ಜಯಸಿಂಹ, ಕಲಾವಿದರಾದ ಗಾರೆ ವೆಂಕಟೇಶ್, ನರಸಿಂಹಮೂರ್ತಿ, ಶಿವಕುಮಾರ್, ಎಚ್.ಎನ್. ವೆಂಕಟೇಶ್, ಕೆ.ಎಸ್. ಮಂಜುನಾಥ ಇದ್ದರು. ಇದೇ ವೇಳೆ ಸಾಧಕರನ್ನು ಸನ್ಮಾನಿಸಲಾ<br />ಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಗಡಿ:</strong> ‘ರಂಗಕಲೆ ಉಳಿಸಲು ಶ್ರಮಿಸುತ್ತಿರುವ ರಂಗ ನಿರ್ದೇಶಕರು ಮತ್ತು ಕಲಾವಿದರನ್ನು ಗುರುತಿಸಿ ಸರ್ಕಾರ ಸವಲತ್ತು ನೀಡಬೇಕು’ ಎಂದು ರಂಗ ನಿರ್ದೇಶಕ ಎಚ್.ಎಂ. ನಾರಾಯಣಪ್ಪ ಒತ್ತಾಯಿಸಿದರು.</p>.<p>ರಂಗನಾಥಸ್ವಾಮಿ ದನಗಳ ಜಾತ್ರೆ ಅಂಗವಾಗಿ ಹೊಸಪೇಟೆ ಸರ್ಕಲ್ನಲ್ಲಿ ರಂಗನಾಥಸ್ವಾಮಿ ಕೃಪಾಪೋಷಿತ ಕಲಾ ಸಂಘದಿಂದ ಶುಕ್ರವಾರ ರಾತ್ರಿ ನಡೆದ ‘ಕುರುಕ್ಷೇತ್ರ’ ಪೌರಾಣಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>ಕೊರೊನಾ ಸೋಂಕು ಹರಡುವಿಕೆಯಿಂದಾಗಿ ಜಿಲ್ಲಾಡಳಿತ ನಾಟಕ ಪ್ರದರ್ಶನಕ್ಕೆ ನೀಡಿರುವ ತಡೆಯನ್ನು ತೆರವುಗೊಳಿಸಬೇಕು. ಪೌರಾಣಿಕ ನಾಟಕಾಭಿನಯವಿಲ್ಲದೆ ಹಸಿವಿನಿಂದ ನರಳುತ್ತಿರುವ ರಂಗ ಕಲಾವಿದರ ಸಂಕಟಕ್ಕೆ ಸ್ಪಂದಿಸಬೇಕು ಎಂದು ಹೇಳಿದರು.</p>.<p>ಪೌರಾಣಿಕ ನಾಟಕದಿಂದಾಗಿ ಸಮಾಜದಲ್ಲಿ ಭಕ್ತಿ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಬಹುದು. ಸಿನಿಮಾ ನಟರಿಗೆ ಕೊಡುವ ಗೌರವವನ್ನು ರಂಗ ಕಲಾವಿದರಿಗೆ ನೀಡದೆ ತಾರತಮ್ಯ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.</p>.<p>ಪಟ್ಟಣದಲ್ಲಿ ಭೂತ ಬಂಗಲೆಯಂತಿರುವ ಕೆಂಪೇಗೌಡ ಬಯಲು ರಂಗಮಂದಿರವನ್ನು ದುರಸ್ತಿಪಡಿಸಿ ಕಲಾವಿದರ ಸಂಘದ ವಶಕ್ಕೆ ಒಪ್ಪಿಸಬೇಕು ಎಂದು<br />ಹೇಳಿದರು.</p>.<p>ಪುರಸಭೆ ಸದಸ್ಯರಾದ ಎಚ್.ಆರ್. ಶಿವಕುಮಾರ್, ಆಶಾರಾಣಿ ರಘು, ಕಾಂಗ್ರೆಸ್ ಮುಖಂಡ ಬಿ.ವಿ. ಜಯರಾಮ್, ಹೊಸಪೇಟೆಯ ಎಚ್.ಕೆ. ರಾಜಣ್ಣ, ಚಿಕ್ಕನರಸಿಂಹಯ್ಯ, ಎಚ್.ಎಂ. ಜಯಸಿಂಹ, ಕಲಾವಿದರಾದ ಗಾರೆ ವೆಂಕಟೇಶ್, ನರಸಿಂಹಮೂರ್ತಿ, ಶಿವಕುಮಾರ್, ಎಚ್.ಎನ್. ವೆಂಕಟೇಶ್, ಕೆ.ಎಸ್. ಮಂಜುನಾಥ ಇದ್ದರು. ಇದೇ ವೇಳೆ ಸಾಧಕರನ್ನು ಸನ್ಮಾನಿಸಲಾ<br />ಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>