ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

19 ಸಾಧಕರಿಗೆ ‘ಜಾನಪದ ಲೋಕ’ ‍ಪ್ರಶಸ್ತಿ ಪ್ರದಾನ

Published 12 ಫೆಬ್ರುವರಿ 2024, 6:07 IST
Last Updated 12 ಫೆಬ್ರುವರಿ 2024, 6:07 IST
ಅಕ್ಷರ ಗಾತ್ರ

ರಾಮನಗರ: ಇಲ್ಲಿನ ಜಾನಪದ ಲೋಕದಲ್ಲಿ ಭಾನುವಾರ ನಡೆದ ಸುವರ್ಣ ಕರ್ನಾಟಕ ಜಾನಪದ ಲೋಕೋತ್ಸವ ಸಮಾರೋಪ ಸಮಾರಂಭದಲ್ಲಿ ಜಾನಪದ ವಿದ್ವಾಂಸರು, ಕಲಾ ಸಾಧಕರು ಸೇರಿ 19 ಮಂದಿಗೆ ಕರ್ನಾಟಕ ಜಾನಪದ ಪರಿಷತ್ತಿನ ‘ಜಾನಪದ ಲೋಕ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿಯು ₹10 ಸಾವಿರದಿಂದ ₹25 ಸಾವಿರದವರೆಗೆ ನಗದು ಪುರಸ್ಕಾರ ಹಾಗೂ ಫಲಕ ಒಳಗೊಂಡಿದೆ. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ರಾಮನಗರ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ, ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ, ಸಂಗೀತ ನಿರ್ದೇಶಕ ಹಂಸಲೇಖ, ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಶಿ. ರಾಮಚಂದ್ರೇಗೌಡ, ಕಾರ್ಯಾಧ್ಯಕ್ಷ ಪ್ರೊ.ಹಿ.ಚಿ. ಬೋರಲಿಂಗಯ್ಯ ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್ ಪ್ರಶಸ್ತಿ ಪ್ರದಾನ ಮಾಡಿದರು. 

ಪ್ರಶಸ್ತಿ ಪುರಸ್ಕೃತರು: 

ಮೈಸೂರಿನ ಡಾ. ಡಿ.ಕೆ. ರಾಜೇಂದ್ರ ಅವರಿಗೆ ‘ನಾಡೋಜ ಎಚ್‌.ಎಲ್. ನಾಗೇಗೌಡ ಜಾನಪದ ಲೋಕಶ್ರೀ ಪ್ರಶಸ್ತಿ’, ಡಾ. ಕಾಳೇಗೌಡ ನಾಗವಾರ ಅವರಿಗೆ ‘ಡಾ. ಜೀ.ಶಂ. ಪರಮಶಿವಯ್ಯ ಜಾನಪದ ಪ್ರಶಸ್ತಿ’, ಬೆಂಗಳೂರಿನ ಸಹಜ ಸಮೃದ್ಧ, ಸಾವಯವ ಮತ್ತು ಕೃಷಿ ಬಳಗಕ್ಕೆ ‘ನಾಡೋಜ ಡಾ.ಜಿ. ನಾರಾಯಣ ಜಾನಪದ ಲೋಕ ಪ್ರಶಸ್ತಿ’, ಯಾದಗಿರಿ ಜಿಲ್ಲೆಯ ಕೌದಿ ಕಲಾವಿದೆ ಭಾಗೀರಥಿ ಸಂಗಣ್ಣ ಮಲಗೊಂಡ ಅವರಿಗೆ ‘ಲಕ್ಷ್ಮಮ್ಮ ನಾಗೇಗೌಡ ಪ್ರಶಸ್ತಿ’, ರಾಮನಗರದ ಪೂಜಾ ಕುಣಿತ ಕಲಾವಿದ ಜಯರಾಮಯ್ಯ ಮತ್ತು ಏಕತಾರಿ ಕಲಾವಿದ ಶಿವಪ್ಪ ಅವರಿಗೆ ‘ದೊಡ್ಡಆಲಹಳ್ಳಿ ಗೌರಮ್ಮ–ಕೆಂಪೇಗೌಡ ಪ್ರಶಸ್ತಿ’, ಜನಪದ ಕೆರೆಗಳ ಸಂಸ್ಕೃತಿ ಪುಸ್ತಕ ಲೇಖಕ ಪಿ.ಡಿ. ವಾಲೀಕಾರ ಅವರಿಗೆ ‘ಲೋಕ ಸರಸ್ವತಿ ಗ್ರಂಥ ಪ್ರಶಸ್ತಿ. 

ಜಾನಪದ ಲೋಕ ದತ್ತಿ ಪ್ರಶಸ್ತಿ ಪುರಸ್ಕೃತರು:

ಇಮಾಮ್ ಸಾಬ್ ವಲ್ಲೆಪ್ಪನವರ (ಡೊಳ್ಳಿನ ಪದ, ಧಾರವಾಡ). ಶೇಖರ ಪಂಬದ (ದೈವ ನರ್ತನ, ದಕ್ಷಿಣ ಕನ್ನಡ), ದ್ಯಾವೇಗೌಡ ಎನ್.ಎಂ. (ಸೋಮನ ಕುಣಿತ, ಹಾಸನ), ಬೆಳ್ಳಿಯಪ್ಪ (ಡೊಳ್ಳು, ಶಿವಮೊಗ್ಗ), ಬನ್ನಂಜೆ ನಾರಾಯಣ (ಯಕ್ಷಗಾನ ಮದ್ದಳೆ, ದಕ್ಷಿಣ ಕನ್ನಡ), ಜ್ಯೋತಿ ರಾಜು (ಸಾಹಸ, ಚಿತ್ರದುರ್ಗ), ಮೈಸೂರು ಮಹಾದೇವಪ್ಪ (ಜನಪದ ಗಾಯಕ, ಮಂಡ್ಯ), ಮಹೇಶಪ್ಪ ಚನ್ನಪ್ಪ ಕಂಬಳಿ (ಸೋಬಾನೆ, ಕೊಪ್ಪಳ), ಎನ್‌.ಎಂ. ಮಹದೇವೇಗೌಡ (ಗೊರವ ಕುಣಿತ, ಚಾಮರಾಜನಗರ), ಲಕ್ಷ್ಮಿಬಾಯಿ ಹರಿಜನ (ಗೀಗೀ ಪದ, ಧಾರವಾಡ), ನಾಗಮ್ಮ ಮರಖಲ (ಬುಲಾಯಿ ಹಾಡು, ಬೀದರ್), ಎ.ಎಂ. ಶಿವಶಂಕರಯ್ಯ (ಮೂಡಲಪಾಯ ಯಕ್ಷಗಾನ ಭಾಗವತ, ತುಮಕೂರು) 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT