ಬಿಸ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಸ್ಕೂರು, ಮುತ್ತಸಾಗರ, ಕೋಡಿಹಳ್ಳಿಯಲ್ಲಿ ನಡೆಯುತ್ತಿರುವ ಜೆಜೆಎಂ ಕಾಮಗಾರಿ ತೀರ ಕಳಪೆಯಿಂದ ಕೂಡಿದೆ. ಕಳಪೆ ಕಾಮಗಾರಿ ನಡೆಸಲು ಇಂಜಿನಿಯರ್ ಮತ್ತು ಗುತ್ತಿಗೆದಾರರೊಂದಿಗೆ ಗ್ರಾಮ ಪಂಚಾಯಿತಿ ಪಿಡಿಒ ಶಾಮೀಲಾಗಿದ್ದಾರೆ ಎಂದು ಬಿ.ಎಸ್ ಸುಹೇಲ್, ಅರುಣ್ ಕುಮಾರ್, ವಿಜಯ್ ಕುಮಾರ್, ಬೈರೋಜಿ ರಾವ್, ಅಲ್ಲಾ ಬಕಶ್ ಆರೋಪಿಸಿದ್ದಾರೆ.