ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಣಂತ ಮಾರಮ್ಮ ಅಗ್ನಿಕೊಂಡೋತ್ಸವ

Published 2 ಮೇ 2024, 6:13 IST
Last Updated 2 ಮೇ 2024, 6:13 IST
ಅಕ್ಷರ ಗಾತ್ರ

ಕನಕಪುರ: ನಗರದಲ್ಲಿ ಬುಧವಾರ ಶಕ್ತಿ ದೇವತೆ ಬಾಣಂತ ಮಾರಮ್ಮ ದೇವಿಯ ಅಗ್ನಿ ಕೊಂಡೋತ್ಸವ ಸಾವಿರಾರು ಭಕ್ತರು ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆಯಿತು.

ಬಾಣಂತಮಾರಮ್ಮ ದೇವಿಯ ಎಳವಾರ ಕಾರ್ಯಕ್ರಮವು ಮಂಗಳವಾರ ರಾತ್ರಿ ನಡೆದಿದ್ದು ಬುಧವಾರ ಬೆಳಿಗ್ಗೆ  ಅಗ್ನಿಕೊಂಡೋತ್ಸವದ ಅಂಗವಾಗಿ ಅರ್ಕಾವತಿ ನದಿಯಿಂದ ಗಂಗಾಪೂಜೆ ನೆರವೇರಿಸಿ ಮೆರವಣಿಗೆ ಮೂಲಕ ದೇವರನ್ನು ಕರೆತರಲಾಯಿತು.

ಮಹಿಳೆಯರು ಶೃಂಗರಿಸಿದ ತಂಬಿಟ್ಟಿನ ಆರತಿಯೊಂದಿಗೆ ಬಾಣಂತಮಾರಮ್ಮ ಮೆರವಣಿಗೆಯಲ್ಲಿ ಸಾಗಿದರು. ದೇವಾಲಯದ ಅರ್ಚಕ ಬೆಳಿಗ್ಗೆ 7 ಗಂಟೆಗೆ ದೇವಿಯ ಕಳಸವನ್ನು ಹೊತ್ತು ಅಗ್ನಿಕೊಂಡವನ್ನು ಯಶಸ್ವಿಯಾಗಿ ಆಯ್ದರು.

ಬಾಣಂತ ಮಾರಮ್ಮ ಬಡಾವಣೆ, ವಿವೇಕಾನಂದ ನಗರ, ನೀಲಕಂಠೇಶ್ವರ ಬಡಾವಣೆ, ನಿರ್ವಹಣೆಶ್ವರ ನಗರ, ಭುವನೇಶ್ವರಿ ನಗರ, ಮಹದೇಶ್ವರ ಬಡಾವಣೆ, ಬೃಂದಾವನ ನಗರ ಸೇರಿದಂತೆ ಸುತ್ತಮುತ್ತಲ ಬಡಾವಣೆಯ ಜನತೆ ಅಗ್ನಿಕೊಂಡೋತ್ಸವದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT