<p><strong>ರಾಮನಗರ:</strong> ಆಷಾಡ ಮಾಸದ ಕೊನೆಯ ಶುಕ್ರವಾರ ನಗರದ ಕನ್ನಿಕಾ ಪರಮೇಶ್ವರಿ ಅಮ್ಮನವರ ತೆಪ್ಪೋತ್ಸವ ಕಾರ್ಯಕ್ರಮ ಭಕ್ತಿ–ಭಾವದಿಂದ ಜರುಗಿತು. ಎಂ.ಜಿ. ರಸ್ತೆಯಲ್ಲಿರುವ ದೇವಾಲಯದ ಮುಂಭಾಗ ರಸ್ತೆಯಲ್ಲಿ ಕೃತಕವಾಗಿ ಕೊಳ ನಿರ್ಮಿಸಿ ತೆಪ್ಪೋತ್ಸವ ನೆರೆವೇರಿಸಲಾಯಿತು.</p>.<p>ದರ್ಬಾರ್ ಶೈಲಿಯಲ್ಲಿ ಅಲಂಕೃತಗೊಂಡ ಅಮ್ಮನವರ ಉತ್ಸವ ಮೂರ್ತಿಯನ್ನು ತೇಲುವ ವೇದಿಕೆಯ ಮೇಲೆ ಅಳವಡಿಸಲಾಗಿತ್ತು. ಧಾರ್ಮಿಕ ವಿಧಿವಿಧಾನಗಳೊಂದಿಗೆ ತೆಪ್ಪೋತ್ಸವಕ್ಕೆ ಚಾಲನೆ ನೀಡಲಾಯಿತು. ಶ್ಲೋಕಗಳ ಪಠಣ, ನಾದಸ್ವರ ಮಂಗಳ ವಾದನದ ನಡುವೆ ಅಮ್ಮನವರ ಉತ್ಸವ ಮೂರ್ತಿಯನ್ನು ಕೊಳದಲ್ಲಿ ತೇಲಿ ಬಿಡಲಾಯಿತು.</p>.<p>ಬೆಂಗಳೂರಿನಿಂದ ಬಂದಿದ್ದ ಋತ್ವಿಕರ ತಂಡ ನೆರೆವೇರಿಸಿದ ಗಂಗಾರತಿಯನ್ನು ನೆರದಿದ್ದ ಭಕ್ತ ಸಮೂಹ ಕಣ್ತುಂಬಿಕೊಂಡಿತು. ಕೊಳದ ಬಳಿಯಲ್ಲೇ ಪಂಚ ಲಿಂಗ ದರ್ಶನ, ವಿಶೆಷ ಪೂಜೆ ಮತ್ತು ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗಿತ್ತು. ಚಂಡೆಮೇಳವು ಭಕ್ತಿಯನ್ನು ಇಮ್ಮಡಿಗೊಳಿಸಿತು.</p>.<p>ರಾಧಾಕೃಷ್ಣ ಶಾಸ್ತ್ರಿ ಅವರು ಉತ್ಸವ ಮೂರ್ತಿಯನ್ನು ಅಲಂಕರಿಸಿದ್ದರು. ವಾಸವಿ ಮಾತೆಯ ಮೂಲ ವಿಗ್ರಹಕ್ಕೆ ಚಿನ್ನಲೇಪಿತ ವಜ್ರಾಂಗಿಯನ್ನು ತೊಡಿಸಿ, ಬಗೆಬಗೆಯ ಹೂಗಳಿಂದ ಸಿಂಗರಿಸಲಾಗಿತ್ತು. ವಿವಿಧ ಭಾಗಗಳ ಭಕ್ತರು ತೆಪ್ಪೋತ್ಸವವನ್ನು ಕಣ್ತುಂಬಿಕೊಂಡರು. ಸಾಮಾಜಿಕ ಜಾಲತಾಣಗಳಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.</p>.<p>ತೆಪ್ಪೋತ್ಸವ ಆಚರಣಾ ಸಮಿತಿ, ರಾಮನಗರದ ಆರ್ಯವೈಶ್ಯ ಸಭ, ವಾಸವಿ ಯೂತ್ಸ್ ಫೋರಂ, ವಾಸವಿ ವನಿತಾ ಸಂಘ ಹಾಗೂ ವಾಸವಿ ಭಜನಾ ಮಂಡಳಿ ಸಹಯೋಗದಲ್ಲಿ ತೆಪ್ಪೋತ್ಸವ ಜರುಗಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ:</strong> ಆಷಾಡ ಮಾಸದ ಕೊನೆಯ ಶುಕ್ರವಾರ ನಗರದ ಕನ್ನಿಕಾ ಪರಮೇಶ್ವರಿ ಅಮ್ಮನವರ ತೆಪ್ಪೋತ್ಸವ ಕಾರ್ಯಕ್ರಮ ಭಕ್ತಿ–ಭಾವದಿಂದ ಜರುಗಿತು. ಎಂ.ಜಿ. ರಸ್ತೆಯಲ್ಲಿರುವ ದೇವಾಲಯದ ಮುಂಭಾಗ ರಸ್ತೆಯಲ್ಲಿ ಕೃತಕವಾಗಿ ಕೊಳ ನಿರ್ಮಿಸಿ ತೆಪ್ಪೋತ್ಸವ ನೆರೆವೇರಿಸಲಾಯಿತು.</p>.<p>ದರ್ಬಾರ್ ಶೈಲಿಯಲ್ಲಿ ಅಲಂಕೃತಗೊಂಡ ಅಮ್ಮನವರ ಉತ್ಸವ ಮೂರ್ತಿಯನ್ನು ತೇಲುವ ವೇದಿಕೆಯ ಮೇಲೆ ಅಳವಡಿಸಲಾಗಿತ್ತು. ಧಾರ್ಮಿಕ ವಿಧಿವಿಧಾನಗಳೊಂದಿಗೆ ತೆಪ್ಪೋತ್ಸವಕ್ಕೆ ಚಾಲನೆ ನೀಡಲಾಯಿತು. ಶ್ಲೋಕಗಳ ಪಠಣ, ನಾದಸ್ವರ ಮಂಗಳ ವಾದನದ ನಡುವೆ ಅಮ್ಮನವರ ಉತ್ಸವ ಮೂರ್ತಿಯನ್ನು ಕೊಳದಲ್ಲಿ ತೇಲಿ ಬಿಡಲಾಯಿತು.</p>.<p>ಬೆಂಗಳೂರಿನಿಂದ ಬಂದಿದ್ದ ಋತ್ವಿಕರ ತಂಡ ನೆರೆವೇರಿಸಿದ ಗಂಗಾರತಿಯನ್ನು ನೆರದಿದ್ದ ಭಕ್ತ ಸಮೂಹ ಕಣ್ತುಂಬಿಕೊಂಡಿತು. ಕೊಳದ ಬಳಿಯಲ್ಲೇ ಪಂಚ ಲಿಂಗ ದರ್ಶನ, ವಿಶೆಷ ಪೂಜೆ ಮತ್ತು ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗಿತ್ತು. ಚಂಡೆಮೇಳವು ಭಕ್ತಿಯನ್ನು ಇಮ್ಮಡಿಗೊಳಿಸಿತು.</p>.<p>ರಾಧಾಕೃಷ್ಣ ಶಾಸ್ತ್ರಿ ಅವರು ಉತ್ಸವ ಮೂರ್ತಿಯನ್ನು ಅಲಂಕರಿಸಿದ್ದರು. ವಾಸವಿ ಮಾತೆಯ ಮೂಲ ವಿಗ್ರಹಕ್ಕೆ ಚಿನ್ನಲೇಪಿತ ವಜ್ರಾಂಗಿಯನ್ನು ತೊಡಿಸಿ, ಬಗೆಬಗೆಯ ಹೂಗಳಿಂದ ಸಿಂಗರಿಸಲಾಗಿತ್ತು. ವಿವಿಧ ಭಾಗಗಳ ಭಕ್ತರು ತೆಪ್ಪೋತ್ಸವವನ್ನು ಕಣ್ತುಂಬಿಕೊಂಡರು. ಸಾಮಾಜಿಕ ಜಾಲತಾಣಗಳಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.</p>.<p>ತೆಪ್ಪೋತ್ಸವ ಆಚರಣಾ ಸಮಿತಿ, ರಾಮನಗರದ ಆರ್ಯವೈಶ್ಯ ಸಭ, ವಾಸವಿ ಯೂತ್ಸ್ ಫೋರಂ, ವಾಸವಿ ವನಿತಾ ಸಂಘ ಹಾಗೂ ವಾಸವಿ ಭಜನಾ ಮಂಡಳಿ ಸಹಯೋಗದಲ್ಲಿ ತೆಪ್ಪೋತ್ಸವ ಜರುಗಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>