ಚಾಮುಂಡೇಶ್ವರಿ, ಮಗ್ಗದಕೆರೆ ಮಾರಮ್ಮ, ಭಂಡಾರಮ್ಮ, ಬಿಸಲು ಮಾರಮ್ಮ, ಕೊಂಕಾಣಿದೊಡ್ಡಿ, ಐಜೂರು ಶೆಟ್ಟಿಹಳ್ಳಿ ಬೀದಿ ಆದಿಶಕ್ತಿ, ಮುತ್ತುಮಾರಮ್ಮ ಅಮ್ಮನವರ ಕರಗಗಳು ನಡೆದವು. ಬೆಳಗ್ಗೆ ದೇವಾಲಯಗಳಲ್ಲಿ ಮಡಿ ನೀರು ಕರಗ ಜರುಗಿತು. ಸಂಜೆ ಹೂವಿನ ಕರಗ ಜರುಗಿತು. ದೇವರ ಮೂರ್ತಿಗಳಿಗೆ ವಿಶೇಷ ಪೂಜೆ ಮತ್ತು ಅಲಂಕಾರ ಏರ್ಪಡಿಸಲಾಗಿತ್ತು. ರಾತ್ರಿ ಮಹಿಳೆಯರು ತಂಬಿಟ್ಟಿನ ಆರತಿ ಬೆಳಗಿದರು. ದಿನವಿಡೀ ಭಕ್ತರು ಭೇಟಿ ನೀಡಿದರು.