<p>ಕನಕಪುರ: ನಗರದ ಸಂಗಮ ರಸ್ತೆಯಲ್ಲಿರುವ ಧರ್ಮರಾಯ ಮತ್ತು ದ್ರೌಪದಮ್ಮ ಹೂವಿನ ಕರಗ ಶಕ್ತ್ಯೋತ್ಸವ ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಿಗ್ಗೆವರೆಗೆ ವಿಜೃಂಭಣೆಯಿಂದ ಯಶಸ್ವಿಯಾಗಿ ನಡೆಯಿತು.</p>.<p>ಬೆಂಗಳೂರಿನಲ್ಲಿ ನಡೆಯುವ ಕರಗದ ರೀತಿಯಲ್ಲೇ ಕನಕಪುರದಲ್ಲಿ ಕರಗ ಮಹೋತ್ಸವ ಕಳೆದ 27 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಈ ವರ್ಷ ವಿಜೃಂಭಣೆ ಆಚರಣೆಗೆ ಸಿದ್ಧಗೊಳಿಸಲಾಗಿದೆ.</p>.<p>ಹತ್ತು ದಿನಗಳ ಕಾಲ ನಡೆಯುವ ಕರಗ ಮಹೋತ್ಸವದಲ್ಲಿ ಪ್ರತಿದಿನವೂ ಒಂದೊಂದು ರೀತಿ ಧಾರ್ಮಿಕ ಆಚರಣೆ, ಪೂಜಾ ಕಾರ್ಯಕ್ರಮ ನಡೆಯುತ್ತಾ ಬಂದಿದೆ. ಗುರುವಾರ ಬೆಳಿಗ್ಗೆ ಹೂವಿನ ಕರಗಕ್ಕೆ ಸಕಲ ಸಿದ್ಧತೆ ನಡೆಯಿತು.</p>.<p>ಗುರುವಾರ ರಾತ್ರಿ ಕರಗದ ಹಿನ್ನೆಲೆಯಲ್ಲಿ ಧರ್ಮರಾಯ ದೇವಸ್ಥಾನದ ಪಕ್ಕದಲ್ಲಿ ಮನರಂಜನೆ ಕಾರ್ಯಕ್ರಮ ನಡೆಸಲಾಯಿತು. ರಾತ್ರಿ 12:30ಕ್ಕೆ ಕರಗ ದೇವಸ್ಥಾನದಿಂದ ಹೊರಟು ಕೆಂಕೆರಮ್ಮನ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಮೆರವಣಿಗೆ ಹೊರಟಿತು.</p>.<p>ಕೆಂಕೇರಮ್ಮನ ಬೀದಿಯಿಂದ ಅಂಬೇಡ್ಕರ್ ನಗರಕ್ಕೆ ಹೊರಟು ಅಲ್ಲಿ ಭಕ್ತರಿಂದ ಪೂಜೆ ಸ್ವೀಕರಿಸಿ ಚಾಮುಂಡೇಶ್ವರಿ ಛತ್ರದ ರಸ್ತೆ, ನಿಂಗಣ್ಣ ರಸ್ತೆ, ಯಲ್ಲಮ್ಮ ದೇವಸ್ಥಾನದ ರಸ್ತೆ, ಪೈಪ್ಲೈನ್ ರಸ್ತೆ, ಎಂಎಚ್ಎಸ್ ರಸ್ತೆ ಮುಗಿಸಿ ಕೆಎನ್ಎಸ್ ವೃತ್ತಕ್ಕೆ ಬಂದು ಅಲ್ಲಿಂದ ಕನಕ ಆಸ್ಪತ್ರೆ ರಸ್ತೆಗೆ ತೆರಳಿತು.</p>.<p>ಪೊಲೀಸ್ ಕ್ವಾಟ್ರಸ್ ಮುಂಭಾಗದ ರಸ್ತೆಯಿಂದ ಬಾಣಂತ ಮಾರಮ್ಮ ಬಡಾವಣೆಯಲ್ಲಿ ಬಾಣಂತ ಮಾರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ರಾಮನಗರ ರಸ್ತೆ, ಗಿರೀಶ್ ಕಲ್ಯಾಣ ಮಂಟಪ ರಸ್ತೆ, ಮೇಗಳ ಬೀದಿ ಮಾರ್ಗವಾಗಿ ವಿವೇಕಾನಂದ ನಗರ ಮುಗಿಸಿ ಎಂ.ಜಿ ರಸ್ತೆ ಮಾರ್ಗವಾಗಿ ಕೋಟೆ ಪ್ರವೇಶಿಸಿತು.</p>.<p>ಹಲಸಿನ ಮರದೊಡ್ಡಿ ಮುಗಿಸಿ ಧರ್ಮರಾಯ ದೇವಸ್ಥಾನ ಮುಂಭಾಗ ಶುಕ್ರವಾರ ಬೆಳಿಗ್ಗೆ ಏರ್ಪಡಿಸಿದ್ದ ಅಗ್ನಿಕೊಂಡ ಆಯ್ದು ನಂತರ ದೇವಾಲಯವನ್ನು ಪ್ರವೇಶಿಸಿತು. ಶುಕ್ರವಾರ ಸಂಜೆ 6ಕ್ಕೆ ವಸಂತೋತ್ಸವ ಏರ್ಪಡಿಸಲಾಗಿತ್ತು.</p>.<p>ಅರ್ಚಕರಾದ ಒಕ್ಕಲೇರಿ ರಘು ಮತ್ತು ಶ್ರೀನಿವಾಸ್ ಹೂವಿನ ಕರಗ ಹೊತ್ತು ಯಶಸ್ವಿಯಾಗಿ ನಡೆಸಿಕೊಟ್ಟರು.</p>.<p>ಕರಗ ಹಾದು ಹೋಗುವ ರಸ್ತೆಗಳಲ್ಲಿ ಪ್ರತಿ ಮನೆ ಮುಂದೆ ಬಣ್ಣ ಬಣ್ಣದ ರಂಗೋಲಿ ಬಿಡಿಸಿ ಹೂವುಗಳಿಂದ ಕರಗವನ್ನು ಸ್ವಾಗತಿಸಿದರು. ವಿಜೃಂಭಣೆಯಿಂದ ನಡೆದ ಕರಗವನ್ನು ಜನರು ನೋಡಿ ಕಣ್ತುಂಬಿಕೊಂಡರು.</p>.<p>ದ್ರೌಪತಮ್ಮ ಧರ್ಮರಾಯಸ್ವಾಮಿ ಸೇವಾ ಸಮಿತಿ ಪದಾಧಿಕಾರಿಗಳು ಕರಗದ ನೇತೃತ್ವ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕನಕಪುರ: ನಗರದ ಸಂಗಮ ರಸ್ತೆಯಲ್ಲಿರುವ ಧರ್ಮರಾಯ ಮತ್ತು ದ್ರೌಪದಮ್ಮ ಹೂವಿನ ಕರಗ ಶಕ್ತ್ಯೋತ್ಸವ ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಿಗ್ಗೆವರೆಗೆ ವಿಜೃಂಭಣೆಯಿಂದ ಯಶಸ್ವಿಯಾಗಿ ನಡೆಯಿತು.</p>.<p>ಬೆಂಗಳೂರಿನಲ್ಲಿ ನಡೆಯುವ ಕರಗದ ರೀತಿಯಲ್ಲೇ ಕನಕಪುರದಲ್ಲಿ ಕರಗ ಮಹೋತ್ಸವ ಕಳೆದ 27 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಈ ವರ್ಷ ವಿಜೃಂಭಣೆ ಆಚರಣೆಗೆ ಸಿದ್ಧಗೊಳಿಸಲಾಗಿದೆ.</p>.<p>ಹತ್ತು ದಿನಗಳ ಕಾಲ ನಡೆಯುವ ಕರಗ ಮಹೋತ್ಸವದಲ್ಲಿ ಪ್ರತಿದಿನವೂ ಒಂದೊಂದು ರೀತಿ ಧಾರ್ಮಿಕ ಆಚರಣೆ, ಪೂಜಾ ಕಾರ್ಯಕ್ರಮ ನಡೆಯುತ್ತಾ ಬಂದಿದೆ. ಗುರುವಾರ ಬೆಳಿಗ್ಗೆ ಹೂವಿನ ಕರಗಕ್ಕೆ ಸಕಲ ಸಿದ್ಧತೆ ನಡೆಯಿತು.</p>.<p>ಗುರುವಾರ ರಾತ್ರಿ ಕರಗದ ಹಿನ್ನೆಲೆಯಲ್ಲಿ ಧರ್ಮರಾಯ ದೇವಸ್ಥಾನದ ಪಕ್ಕದಲ್ಲಿ ಮನರಂಜನೆ ಕಾರ್ಯಕ್ರಮ ನಡೆಸಲಾಯಿತು. ರಾತ್ರಿ 12:30ಕ್ಕೆ ಕರಗ ದೇವಸ್ಥಾನದಿಂದ ಹೊರಟು ಕೆಂಕೆರಮ್ಮನ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಮೆರವಣಿಗೆ ಹೊರಟಿತು.</p>.<p>ಕೆಂಕೇರಮ್ಮನ ಬೀದಿಯಿಂದ ಅಂಬೇಡ್ಕರ್ ನಗರಕ್ಕೆ ಹೊರಟು ಅಲ್ಲಿ ಭಕ್ತರಿಂದ ಪೂಜೆ ಸ್ವೀಕರಿಸಿ ಚಾಮುಂಡೇಶ್ವರಿ ಛತ್ರದ ರಸ್ತೆ, ನಿಂಗಣ್ಣ ರಸ್ತೆ, ಯಲ್ಲಮ್ಮ ದೇವಸ್ಥಾನದ ರಸ್ತೆ, ಪೈಪ್ಲೈನ್ ರಸ್ತೆ, ಎಂಎಚ್ಎಸ್ ರಸ್ತೆ ಮುಗಿಸಿ ಕೆಎನ್ಎಸ್ ವೃತ್ತಕ್ಕೆ ಬಂದು ಅಲ್ಲಿಂದ ಕನಕ ಆಸ್ಪತ್ರೆ ರಸ್ತೆಗೆ ತೆರಳಿತು.</p>.<p>ಪೊಲೀಸ್ ಕ್ವಾಟ್ರಸ್ ಮುಂಭಾಗದ ರಸ್ತೆಯಿಂದ ಬಾಣಂತ ಮಾರಮ್ಮ ಬಡಾವಣೆಯಲ್ಲಿ ಬಾಣಂತ ಮಾರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ರಾಮನಗರ ರಸ್ತೆ, ಗಿರೀಶ್ ಕಲ್ಯಾಣ ಮಂಟಪ ರಸ್ತೆ, ಮೇಗಳ ಬೀದಿ ಮಾರ್ಗವಾಗಿ ವಿವೇಕಾನಂದ ನಗರ ಮುಗಿಸಿ ಎಂ.ಜಿ ರಸ್ತೆ ಮಾರ್ಗವಾಗಿ ಕೋಟೆ ಪ್ರವೇಶಿಸಿತು.</p>.<p>ಹಲಸಿನ ಮರದೊಡ್ಡಿ ಮುಗಿಸಿ ಧರ್ಮರಾಯ ದೇವಸ್ಥಾನ ಮುಂಭಾಗ ಶುಕ್ರವಾರ ಬೆಳಿಗ್ಗೆ ಏರ್ಪಡಿಸಿದ್ದ ಅಗ್ನಿಕೊಂಡ ಆಯ್ದು ನಂತರ ದೇವಾಲಯವನ್ನು ಪ್ರವೇಶಿಸಿತು. ಶುಕ್ರವಾರ ಸಂಜೆ 6ಕ್ಕೆ ವಸಂತೋತ್ಸವ ಏರ್ಪಡಿಸಲಾಗಿತ್ತು.</p>.<p>ಅರ್ಚಕರಾದ ಒಕ್ಕಲೇರಿ ರಘು ಮತ್ತು ಶ್ರೀನಿವಾಸ್ ಹೂವಿನ ಕರಗ ಹೊತ್ತು ಯಶಸ್ವಿಯಾಗಿ ನಡೆಸಿಕೊಟ್ಟರು.</p>.<p>ಕರಗ ಹಾದು ಹೋಗುವ ರಸ್ತೆಗಳಲ್ಲಿ ಪ್ರತಿ ಮನೆ ಮುಂದೆ ಬಣ್ಣ ಬಣ್ಣದ ರಂಗೋಲಿ ಬಿಡಿಸಿ ಹೂವುಗಳಿಂದ ಕರಗವನ್ನು ಸ್ವಾಗತಿಸಿದರು. ವಿಜೃಂಭಣೆಯಿಂದ ನಡೆದ ಕರಗವನ್ನು ಜನರು ನೋಡಿ ಕಣ್ತುಂಬಿಕೊಂಡರು.</p>.<p>ದ್ರೌಪತಮ್ಮ ಧರ್ಮರಾಯಸ್ವಾಮಿ ಸೇವಾ ಸಮಿತಿ ಪದಾಧಿಕಾರಿಗಳು ಕರಗದ ನೇತೃತ್ವ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>