‘ಇನ್ನೆರಡು ದಿನದಲ್ಲಿ ಬಜೆಟ್ ದಿನಾಂಕ ಘೋಷಣೆ’
‘ಇನ್ನೆರಡು ದಿನಗಳಲ್ಲಿ ಬಜೆಟ್ ದಿನಾಂಕ ಘೋಷಣೆಯಾಗಲಿದೆ. ಮುಖ್ಯಮಂತ್ರಿ ಕೂಡ ಮುಂದಿನ ತಿಂಗಳ ಮೊದಲ ವಾರದಲ್ಲಿ ಬಜೆಟ್ ಮುಂಡಿಸಲು ತಯಾರಿ ಮಾಡಿಕೊಂಡಿದ್ದಾರೆ. ಗ್ಯಾರಂಟಿ ಯೋಜನೆಗಳು ಜನರಿಗೆ ನಾವು ಕೊಟ್ಟಿರುವ ಆರ್ಥಿಕ ಶಕ್ತಿ. ವರ್ಷಕ್ಕೆ ₹56 ಸಾವಿರ ಕೋಟಿ ಮೊತ್ತವು ಜನರನ್ನು ತಲುಪುತ್ತಿದೆ. ಬದುಕಿನ ಸುಧಾರಣೆ ಹಾಗೂ ಸ್ವಾವಲಂಬನೆಗಾಗಿ ಈ ಯೋಜನೆ ಜಾರಿಗೆ ತಂದಿದ್ದೇವೆ’ ಎಂದು ಬಜೆಟ್ ತಯಾರಿ ಕುರಿತ ಪ್ರಶ್ನೆಗೆ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದರು. ‘ಭಾರತದ ವಲಸಿಗರನ್ನು ಅಮೆರಿಕ ಹೀನಾಯವಾಗಿ ನಡೆಸಿಕೊಂಡಿರುವುದು ಖಂಡನೀಯ. ರಾಜಕಾರಣಕ್ಕಿಂತ ಮಾನವೀಯತೆ ಮುಖ್ಯ. ಹಿಂದೆ ಜೀತದಾಳುಗಳ ಕಾಲಿಗೆ ಸರಪಳಿ ಹಾಕಿ ಕೆಲಸ ಮಾಡಿಸುತ್ತಿದ್ದರು. ಈಗ, ಹೆಚ್ಚಿನ ತಿಳಿವಳಿಕೆ ಇರುವ ಅಮೆರಿಕದಂತಹ ದೇಶದಲ್ಲೇ ಇಂತಹ ಘಟನೆ ನಡೆದರೆ ಹೇಗೆ? ವಲಸಿಗರನ್ನು ಕೈದಿಗಳ ರೀತಿ ನೋಡಬಾರದು. ಅಮೆರಿಕದ ನಡೆ ಮಾನವ ಕುಲಕ್ಕೆ ಮಾಡಿದ ಅವಮಾನವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.