ರಾಮನಗರ: ಜಿಲ್ಲೆಯಾದ್ಯಂತ ಸೋಮವಾರ ಕಿರಿಯ ಪ್ರಾಥಮಿಕ ಶಾಲೆಗಳ ಬಾಗಿಲುಗಳು ತೆರೆದಿದ್ದು, ಚಿಣ್ಣರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಶಾಲೆಗೆ ಬಂದ ಮಕ್ಕಳಿಗೆ ಗುಲಾಬಿ ಜೊತೆಗೆ ಕೈಗೆ ಸ್ಯಾನಿಟೈಸರ್ ನೀಡಲಾಯಿತು.
ರಾಮನಗರ ತಾಲ್ಲೂಕಿನ ಮದರ್ ಸಾಬ್ ದೊಡ್ಡಿಯಲ್ಲಿ ಮಕ್ಕಳನ್ನು ಕಲಾ ತಂಡಗಳ ಮೆರವಣಿಗೆಯೊಂದಿಗೆ ಶಾಲೆಗೆ ಕರೆತರಲಾಯಿತು. ಮಹಿಳೆಯರು ಕಲಶ ಹೊತ್ತು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಶಿಕ್ಷಕರು ಮಕ್ಕಳನ್ನು ಬರಮಾಡಿಕೊಂಡರು.