ಪ್ರತಿನಿತ್ಯ ಸಾವಿರಾರು ಮಂದಿ ಸಂಚರಿಸುವ ಶತಮಾನಕ್ಕೂ ಹೆಚ್ಚಿನ ಹಳೆಯ ಸೇತುವೆಯ ಬಳಿ ಭೂಕುಸಿತ ಉಂಟಾಗಿದ್ದು, ಸೇತುವೆಗೆ ಅಪಾಯ ಎದುರಾಗಿದೆ. ಇದು ಬೇವೂರು ಹಾಗೂ ಮಾಕಳಿ ಮಾರ್ಗದ ಹಲವಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಎನ್ನಿಸಿದ್ದು, ಸೇತುವೆ ಕುಸಿಯುವ ಭೀತಿ ಎದುರಾಗಿದೆ ಎಂದು ಗ್ರಾಮಸ್ಥರಾದ ಸೊಸೈಟಿ ರಾಜಣ್ಣ, ಉಮಾಶಂಕರ್, ಪುಟಾಣಿ ಗೌಡ, ವೆಂಕಟೇಶ್, ಮೆಡಿಕಲ್ ಕುಮಾರ್, ಟಿ.ಎಸ್. ಯೋಗೇಶ್, ದೀಪಾ ರಾಜು ಆರೋಪಿಸಿದ್ದಾರೆ.