ಬ್ಯಾಂಕ್ನ ಶಾಖೆಗಳಿಗೆ ತಲುಪಿಸಲು ವಾಹನದಲ್ಲಿ ಹಣ ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ, ವಾಹನ ತಡೆದು ವಿಚಾರಿಸಿದೆವು. ಅವರು ತೋರಿಸಿದ ದಾಖಲೆಗಳು ಸಮರ್ಪಕವಾಗಿಲ್ಲದ್ದರಿಂದ, ವಾಹನವನ್ನು ವಶಕ್ಕೆ ಪಡೆದು ದಾಖಲೆಗಳನ್ನು ತಂದು ತೋರಿಸಿ ಕೊಂಡೊಯ್ಯುವಂತೆ ಸೂಚಿಸಿದೆವು. ಕೆಲ ತಾಸಿನ ಬಳಿಕ ಬ್ಯಾಂಕ್ ಅಧಿಕಾರಿಗಳು ದಾಖಲೆಗಳನ್ನು ತಂದು ತೋರಿಸಿ ವಾಹನವನ್ನು ಕೊಂಡೊಯ್ದರು ಎಂದು ಬಿಡದಿ ಪೊಲೀಸರು ತಿಳಿಸಿದರು.