<p><strong>ರಾಮನಗರ</strong>: ಜಿಲ್ಲೆಯ ನ್ಯಾಯಾಲಯಗಳಲ್ಲಿ ಇತ್ತೀಚೆಗೆ ನಡೆದ ಲೋಕ ಅದಾಲತ್ನಲ್ಲಿ ಒಟ್ಟು 1,72,271 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿ ₹311.57 ಕೋಟಿ ವಸೂಲಿ ಮಾಡಿಕೊಳ್ಳಲಾಯಿತು. ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಲೋಕ ಅದಾಲತ್ನಲ್ಲಿ ವಿಚಾರಣೆ ಕೈಗೊಳ್ಳಲಾಯಿತು.</p>.<p>ರಾಮನಗರ, ಚನ್ನಪಟ್ಟಣ, ಕನಕಪುರ ಹಾಗೂ ಮಾಗಡಿ ನ್ಯಾಯಾಲಯಗಳು ಸೇರಿದಂತೆ ಒಟ್ಟು 21 ಪೀಠಗಳಲ್ಲಿ ಅದಾಲತ್ ಆಯೋಜಿಸಲಾಗಿತ್ತು. ಜಿಲ್ಲೆಯಾದ್ಯಂತ ವಿಚಾರಣೆಗೆ ಬಾಕಿ ಇರುವ ಒಟ್ಟು 54,150 ಪ್ರಕರಣಗಳಲ್ಲಿ 4,794 ಪ್ರಕರಣಗಳನ್ನು ಹಾಗೂ 1,67,477 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿದಂತೆ ಒಟ್ಟಾರೆ 1,72,271 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು.</p>.<p>74 ರಾಜಿಯಾಗಬಲ್ಲ ಕ್ರಿಮಿನಲ್ ಪ್ರಕರಣ, 77 ನೆಗೋಷಬಲ್ ಇನ್ಸ್ಟ್ರಮೆಂಟ್ ಕಾಯ್ದೆ (ಎನ್ಐ ಆಕ್ಟ್) ಪ್ರಕರಣ, 11 ಸಾಲ ವಸೂಲಾತಿ ಪ್ರಕರಣ, 48 ಮೋಟಾರು ವಾಹನ ಅಪಘಾತ ಪ್ರಕರಣ, 15 ಕಾರ್ಮಿಕ ವಿವಾದ ಪ್ರಕರಣ, 24 ಗಣಿ ಮತ್ತು ಭೂ ವಿಜ್ಞಾನ ಪ್ರಕರಣ, 5 ವೈವಾಹಿಕ ಪ್ರಕರಣ, 68 ಆಸ್ತಿ ವಿಭಾಗ ಪ್ರಕರಣ, 28 ನಿರ್ದಿಷ್ಟ ಪ್ರಕರಣ, 32 ಭೂ ಸ್ವಾಧೀನಕ್ಕೆ ಸಂಬಂಧಿಸಿದ ಜಾರಿ ಪ್ರಕರಣ, 1 ಅಂತಿಮ ಡಿಕ್ರಿ ಕಾರ್ಯಾಚರಣೆ ಪ್ರಕರಣ, 40 ಜಾರಿ ಪ್ರಕರಣ, 14 ಎಂವಿಸಿ ಎಕ್ಸಿಕ್ಯೂಟಿವ್ ಪ್ರಕರಣ, 48 ಹಕ್ಕು ಘೋಷಣೆ, ಶಾಶ್ವತ ನಿರ್ಭಂದಕಾಜ್ಞೆ ಹಾಗೂ ಇತರೆ, 103 ಜನನ ಹಾಗೂ ಮರಣ ಪ್ರಮಾಣಪತ್ರಕ್ಕೆ ಸಂಬಂಧಿಸಿದ ಪ್ರಕರಣ, 3576 ಲಘು ವ್ಯಾಜ್ಯ ಪ್ರಕರಣ, 563 ಇತರ ಕ್ರಿಮಿನಲ್ ಪ್ರಕರಣ, 39 ಬ್ಯಾಂಕ್ ಮೊಕದ್ದಮೆ, 125– ಸಿಆರ್ಪಿಸಿಗೆ ಸಂಬಂಧಿಸಿದ 21 ಪ್ರಕರಣ, 4 ಡಿವಿ ಕಾಯ್ದೆ ಹಾಗೂ 1,67,477 ಪೂರ್ವ ದಾವೆ (ಪ್ರೀ ಲಿಟಿಗೇಷನ್) ಪ್ರಕರಣಗಳು ಅದಾಲತ್ನಲ್ಲಿ ಇತ್ಯರ್ಥಗೊಂಡವು.</p>.<p>ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಬಿ.ವಿ. ರೇಣುಕಾ ಅವರ ಮೇಲುಸ್ತುವಾರಿಯಲ್ಲಿ ಲೋಕ ಅದಾಲತ್ ನಿರ್ವಹಿಸಲಾಯಿತು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸವಿತ ಪಿ.ಆರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ</strong>: ಜಿಲ್ಲೆಯ ನ್ಯಾಯಾಲಯಗಳಲ್ಲಿ ಇತ್ತೀಚೆಗೆ ನಡೆದ ಲೋಕ ಅದಾಲತ್ನಲ್ಲಿ ಒಟ್ಟು 1,72,271 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿ ₹311.57 ಕೋಟಿ ವಸೂಲಿ ಮಾಡಿಕೊಳ್ಳಲಾಯಿತು. ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಲೋಕ ಅದಾಲತ್ನಲ್ಲಿ ವಿಚಾರಣೆ ಕೈಗೊಳ್ಳಲಾಯಿತು.</p>.<p>ರಾಮನಗರ, ಚನ್ನಪಟ್ಟಣ, ಕನಕಪುರ ಹಾಗೂ ಮಾಗಡಿ ನ್ಯಾಯಾಲಯಗಳು ಸೇರಿದಂತೆ ಒಟ್ಟು 21 ಪೀಠಗಳಲ್ಲಿ ಅದಾಲತ್ ಆಯೋಜಿಸಲಾಗಿತ್ತು. ಜಿಲ್ಲೆಯಾದ್ಯಂತ ವಿಚಾರಣೆಗೆ ಬಾಕಿ ಇರುವ ಒಟ್ಟು 54,150 ಪ್ರಕರಣಗಳಲ್ಲಿ 4,794 ಪ್ರಕರಣಗಳನ್ನು ಹಾಗೂ 1,67,477 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿದಂತೆ ಒಟ್ಟಾರೆ 1,72,271 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು.</p>.<p>74 ರಾಜಿಯಾಗಬಲ್ಲ ಕ್ರಿಮಿನಲ್ ಪ್ರಕರಣ, 77 ನೆಗೋಷಬಲ್ ಇನ್ಸ್ಟ್ರಮೆಂಟ್ ಕಾಯ್ದೆ (ಎನ್ಐ ಆಕ್ಟ್) ಪ್ರಕರಣ, 11 ಸಾಲ ವಸೂಲಾತಿ ಪ್ರಕರಣ, 48 ಮೋಟಾರು ವಾಹನ ಅಪಘಾತ ಪ್ರಕರಣ, 15 ಕಾರ್ಮಿಕ ವಿವಾದ ಪ್ರಕರಣ, 24 ಗಣಿ ಮತ್ತು ಭೂ ವಿಜ್ಞಾನ ಪ್ರಕರಣ, 5 ವೈವಾಹಿಕ ಪ್ರಕರಣ, 68 ಆಸ್ತಿ ವಿಭಾಗ ಪ್ರಕರಣ, 28 ನಿರ್ದಿಷ್ಟ ಪ್ರಕರಣ, 32 ಭೂ ಸ್ವಾಧೀನಕ್ಕೆ ಸಂಬಂಧಿಸಿದ ಜಾರಿ ಪ್ರಕರಣ, 1 ಅಂತಿಮ ಡಿಕ್ರಿ ಕಾರ್ಯಾಚರಣೆ ಪ್ರಕರಣ, 40 ಜಾರಿ ಪ್ರಕರಣ, 14 ಎಂವಿಸಿ ಎಕ್ಸಿಕ್ಯೂಟಿವ್ ಪ್ರಕರಣ, 48 ಹಕ್ಕು ಘೋಷಣೆ, ಶಾಶ್ವತ ನಿರ್ಭಂದಕಾಜ್ಞೆ ಹಾಗೂ ಇತರೆ, 103 ಜನನ ಹಾಗೂ ಮರಣ ಪ್ರಮಾಣಪತ್ರಕ್ಕೆ ಸಂಬಂಧಿಸಿದ ಪ್ರಕರಣ, 3576 ಲಘು ವ್ಯಾಜ್ಯ ಪ್ರಕರಣ, 563 ಇತರ ಕ್ರಿಮಿನಲ್ ಪ್ರಕರಣ, 39 ಬ್ಯಾಂಕ್ ಮೊಕದ್ದಮೆ, 125– ಸಿಆರ್ಪಿಸಿಗೆ ಸಂಬಂಧಿಸಿದ 21 ಪ್ರಕರಣ, 4 ಡಿವಿ ಕಾಯ್ದೆ ಹಾಗೂ 1,67,477 ಪೂರ್ವ ದಾವೆ (ಪ್ರೀ ಲಿಟಿಗೇಷನ್) ಪ್ರಕರಣಗಳು ಅದಾಲತ್ನಲ್ಲಿ ಇತ್ಯರ್ಥಗೊಂಡವು.</p>.<p>ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಬಿ.ವಿ. ರೇಣುಕಾ ಅವರ ಮೇಲುಸ್ತುವಾರಿಯಲ್ಲಿ ಲೋಕ ಅದಾಲತ್ ನಿರ್ವಹಿಸಲಾಯಿತು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸವಿತ ಪಿ.ಆರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>