ರಾಮನಗರದ ಜಾನಪದ ಲೋಕದಲ್ಲಿ ಭಾನುವಾರ ನಡೆದ ‘ಲೋಕಸಿರಿ’ ಕಾರ್ಯಕ್ರಮದಲ್ಲಿ ಬಾಗಲಕೋಟೆಯ ಗೊಂದಲಿಗ ಕಲಾವಿದ ಹನುಮಂತಪ್ಪ ವೆಂಕಪ್ಪ ಸುಗತೇಕರ ತಂಡ ಗೊಂದಲ ಗಾಯನ ಪ್ರಸ್ತುತಪಡಿಸಿತು
ಜಾನಪದ ಲೋಕವು ರಾಮನಗರ ಜಿಲ್ಲೆಯ ಮುಕುಟವಾಗಿದೆ. ಜಾನಪದ ಕಲಾವಿದರಿಗೆ ಲೋಕದಲ್ಲಿ ವೇದಿಕೆ ಒದಗಿಸುವ ಜೊತೆಗೆ ರಾಜ್ಯ ಸರ್ಕಾರದಿಂದ ಅವರಿಗೆ ಮಾಶಾಸನ ಹೆಚ್ಚಳ ಮಾಡಿಸುವಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಪ್ರಯತ್ನ ಮಹತ್ತರವಾದುದು
ಕುಂಬಾಪುರ ವಿ. ಬಾಬು ಸದಸ್ಯ ಕರ್ನಾಟಕ ನಾಟಕ ಅಕಾಡೆಮಿ
ಜಾನಪದ ಲೋಕದಲ್ಲಿ ಎಂಟೂವರೆ ವರ್ಷಗಳಿಂದ ಲೋಕಸಿರಿ ಕಾರ್ಯಕ್ರಮ ನಡೆಯುತ್ತಿದೆ. ಲೋಕಕ್ಕೆ ಬಂದಿರುವ ಬಹುತೇಕ ಕಲಾವಿದರು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಹಲವು ಪ್ರಶಸ್ತಿ–ಪುರಸ್ಕಾರಗಳಿಗೂ ಭಾಜನರಾಗಿದ್ದಾರೆ. ಜಾನಪದ ಪರಿಷತ್ತು