<p><strong>ಚನ್ನಪಟ್ಟಣ: </strong>ಸುಗ್ಗಿಹಬ್ಬ ಮಕರ ಸಂಕ್ರಾಂತಿ ಆಚರಣೆಗೆ ತಾಲ್ಲೂಕಿನ ಜನತೆ ಭರದ ಸಿದ್ಧತೆಯಲ್ಲಿ ತೊಡಗಿದ್ದು, ಮಂಗಳವಾರ ಪಟ್ಟಣದಲ್ಲಿ ಹಬ್ಬಕ್ಕೆ ಬೇಕಾಗುವ ಸಾಮಗ್ರಿಗಳನ್ನು ಸಡಗರ ಸಂಭ್ರಮದಿಂದ ಖರೀದಿಸಿದರು.</p>.<p>ಜನರಲ್ಲಿ ಉತ್ಸಾಹ ಇತ್ತು, ಆದರೆ, ವಸ್ತುಗಳ ಬೆಲೆಯೂ ಗಗನಕ್ಕೇರಿದ್ದು, ಗ್ರಾಹಕರಿಗೆ ಹಬ್ಬ ಕಹಿಯಾಗಿ ಪರಿಣಮಿಸಿದೆ. ಹಬ್ಬದ ವಿಶೇಷ ಎಂಬಂತೆ ಹೂವು, ಎಳ್ಳು, ಬೆಲ್ಲ, ಕಡಲೆಕಾಯಿ, ಸಕ್ಕರೆ ಅಚ್ಚು, ಅವರೆಕಾಯಿ, ಕಬ್ಬು ಮತ್ತಿತರ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆ ಕಂಡಿದೆ.</p>.<p>ಎಳ್ಳು ಪ್ರತಿ ಕೆ.ಜಿ.ಗೆ ₹130, ಸಕ್ಕರೆ ಅಚ್ಚು ಕೆ.ಜಿ.ಗೆ ₹100 ರಿಂದ 120, ಬೆಲ್ಲ ₹60, ಹೂವು ಒಂದು ಕೆ.ಜಿ. ಕನಕಾಂಬರ ₹ 800, ಮಲ್ಲಿಗೆ ₹2,400, ಸೇವಂತಿಗೆ ₹160, ಕಾಕಡ ₹600, ಬಾಳೆ ಹಣ್ಣು ಕೆ.ಜಿ.ಗೆ ₹70, ಕಡಲೆಕಾಯಿ ಸೇರಿಗೆ ₹30 ರಿಂದ 35, ಗೆಣಸು ಕೆ.ಜಿ.ಗೆ ₹40 ರಿಂದ 50, ಕಬ್ಬು ಎರಡಕ್ಕೆ ₹80 ರಿಂದ 100, ಅವರೆಕಾಯಿ ಕೆ.ಜಿ.ಗೆ ₹40 ಇತ್ತು. ಈ ವಸ್ತುಗಳ ಬೆಲೆಯಲ್ಲಿ ಏರಿಕೆ ಆಗಿತ್ತು.</p>.<p>ಹಬ್ಬದ ಕಾರಣ ಹೆಚ್ಚು ವ್ಯಾಪಾರವಾಗುವ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ರಾಶಿ ರಾಶಿ ಅವರೆಕಾಯಿ, ಗೆಣಸು, ಕಬ್ಬು ಬಂದು ಬಿದ್ದಿವೆ. ಪಟ್ಟಣದ ತುಂಬೆಲ್ಲ ಜನವೋ ಜನ ಕಂಡುಬಂದರು. ಬೆಲೆ ಏರಿಕೆಯ ನಡುವೆಯೂ ವ್ಯಾಪಾರಸ್ಥರಿಗೆ ಭರ್ಜರಿ ವ್ಯಾಪಾರ ನಡೆಯುತ್ತಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಪಟ್ಟಣ: </strong>ಸುಗ್ಗಿಹಬ್ಬ ಮಕರ ಸಂಕ್ರಾಂತಿ ಆಚರಣೆಗೆ ತಾಲ್ಲೂಕಿನ ಜನತೆ ಭರದ ಸಿದ್ಧತೆಯಲ್ಲಿ ತೊಡಗಿದ್ದು, ಮಂಗಳವಾರ ಪಟ್ಟಣದಲ್ಲಿ ಹಬ್ಬಕ್ಕೆ ಬೇಕಾಗುವ ಸಾಮಗ್ರಿಗಳನ್ನು ಸಡಗರ ಸಂಭ್ರಮದಿಂದ ಖರೀದಿಸಿದರು.</p>.<p>ಜನರಲ್ಲಿ ಉತ್ಸಾಹ ಇತ್ತು, ಆದರೆ, ವಸ್ತುಗಳ ಬೆಲೆಯೂ ಗಗನಕ್ಕೇರಿದ್ದು, ಗ್ರಾಹಕರಿಗೆ ಹಬ್ಬ ಕಹಿಯಾಗಿ ಪರಿಣಮಿಸಿದೆ. ಹಬ್ಬದ ವಿಶೇಷ ಎಂಬಂತೆ ಹೂವು, ಎಳ್ಳು, ಬೆಲ್ಲ, ಕಡಲೆಕಾಯಿ, ಸಕ್ಕರೆ ಅಚ್ಚು, ಅವರೆಕಾಯಿ, ಕಬ್ಬು ಮತ್ತಿತರ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆ ಕಂಡಿದೆ.</p>.<p>ಎಳ್ಳು ಪ್ರತಿ ಕೆ.ಜಿ.ಗೆ ₹130, ಸಕ್ಕರೆ ಅಚ್ಚು ಕೆ.ಜಿ.ಗೆ ₹100 ರಿಂದ 120, ಬೆಲ್ಲ ₹60, ಹೂವು ಒಂದು ಕೆ.ಜಿ. ಕನಕಾಂಬರ ₹ 800, ಮಲ್ಲಿಗೆ ₹2,400, ಸೇವಂತಿಗೆ ₹160, ಕಾಕಡ ₹600, ಬಾಳೆ ಹಣ್ಣು ಕೆ.ಜಿ.ಗೆ ₹70, ಕಡಲೆಕಾಯಿ ಸೇರಿಗೆ ₹30 ರಿಂದ 35, ಗೆಣಸು ಕೆ.ಜಿ.ಗೆ ₹40 ರಿಂದ 50, ಕಬ್ಬು ಎರಡಕ್ಕೆ ₹80 ರಿಂದ 100, ಅವರೆಕಾಯಿ ಕೆ.ಜಿ.ಗೆ ₹40 ಇತ್ತು. ಈ ವಸ್ತುಗಳ ಬೆಲೆಯಲ್ಲಿ ಏರಿಕೆ ಆಗಿತ್ತು.</p>.<p>ಹಬ್ಬದ ಕಾರಣ ಹೆಚ್ಚು ವ್ಯಾಪಾರವಾಗುವ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ರಾಶಿ ರಾಶಿ ಅವರೆಕಾಯಿ, ಗೆಣಸು, ಕಬ್ಬು ಬಂದು ಬಿದ್ದಿವೆ. ಪಟ್ಟಣದ ತುಂಬೆಲ್ಲ ಜನವೋ ಜನ ಕಂಡುಬಂದರು. ಬೆಲೆ ಏರಿಕೆಯ ನಡುವೆಯೂ ವ್ಯಾಪಾರಸ್ಥರಿಗೆ ಭರ್ಜರಿ ವ್ಯಾಪಾರ ನಡೆಯುತ್ತಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>