ಪತ್ನಿಯ ತವರೂರು ಮೈಲನಾಯಕನ ಹೊಸಹಳ್ಳಿಗೆ ಆಗಾಗ ತೆರಳುತ್ತಿದ್ದ ನವೀನ್, ಗುರುವಾರ ಗ್ರಾಮದಲ್ಲಿ ತಮ್ಮ ಮಾವನ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಆಗ ಬಾಯಾರಿಕೆಯಾಗಿ ತೋಟದಲ್ಲಿ ಬಾಟಲಿಯಲ್ಲಿ ಇಟ್ಟಿದ್ದ ನೀರನ್ನು ಕುಡಿಯುವ ನೀರು ಎಂದು ತಿಳಿದು ಕುಡಿದಿದ್ದಾರೆ. ಆ ಬಾಟಲಿಯಲ್ಲಿ ಬೆಳೆಗೆ ಸಿಂಪಡಿಸಲು ತಂದಿದ್ದ ಕ್ರಿಮಿನಾಶಕ ಬೆರೆಸಿದ್ದ ನೀರಾಗಿತ್ತು ಎಂದು ತಿಳಿದುಬಂದಿದೆ.