<p><strong>ಕನಕಪುರ</strong>: ತಾಲ್ಲೂಕಿನಬರಡನಹಳ್ಳಿಯಶಕ್ತಿದೇವತೆ ಮಾರಮ್ಮ ದೇವಿಯ ಕೊಂಡೋತ್ಸವಬುಧವಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.</p>.<p>ದೇವಿಯ ಕೊಂಡೋತ್ಸವದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಮಂಗಳವಾರ ಸಂಜೆ ಎಳವಾರ ಕಾರ್ಯಕ್ರಮ ನಡೆಯಿತು. ಎಳವಾರದಮೆರವಣಿಗೆ ಮುಕ್ತಾಯವಾದ ನಂತರ ಕೊಂಡದಲ್ಲಿ ಸೌದೆಯನ್ನಿಟ್ಟುಅಗ್ನಿಪೂಜೆ ನೆರವೇರಿಸಲಾಯಿತು.</p>.<p>ಬೆಳಿಗ್ಗೆ ಬರಡನಹಳ್ಳಿ ಗ್ರಾಮಸ್ಥರು ಮಾರಮ್ಮ ದೇವಸ್ಥಾನದ ಅರ್ಚಕ ವೀರಭದ್ರ ಅವರೊಂದಿಗೆ ಚಿಕ್ಕಹೊಳೆಯಲ್ಲಿ ಗಂಗಾಪೂಜೆ ನೆರವೇರಿಸಿದರು. ನಂತರ ದೇವರನ್ನು ಮೆರವಣಿಗೆಯಲ್ಲಿ ಕರೆ ತರಲಾಯಿತು. ಬಸಪ್ಪನ ದೇವಸ್ಥಾನದ ಅರ್ಚಕ ಪರಶಿವಯ್ಯ ಅವರ ಮನೆವರೆಗೂ ಜನರು ಮಾರಮ್ಮನಿಗೆ ಮಡಲಕ್ಕಿ ಕಟ್ಟಿ ಪೂಜೆ ನೆರವೇರಿಸಿದರು.</p>.<p>ಗ್ರಾಮದಲ್ಲಿರುವ ಪ್ರತಿ ಕುಟುಂಬದ ಹೆಣ್ಣುಮಕ್ಕಳು ತಂಬಿಟ್ಟಿನ ಆರತಿಯೊಂದಿಗೆ ದೇವರನ್ನು ಮೆರವಣಿಗೆಯಲ್ಲಿ ಅಗ್ನಿಕೊಂಡದವರೆಗೆ ಕರೆತಂದರು. ದೇವರು ಹೊತ್ತ ಅರ್ಚಕ ವೀರಭದ್ರ ಕೊಂಡದ ಸುತ್ತಲೂ ಮೂರು ಸುತ್ತು ಪ್ರದಕ್ಷಿಣೆ ನಡೆಸಿ ಕೊಂಡ ಹಾಯ್ದರು.</p>.<p>ಸಾವಿರಾರು ಸಂಖ್ಯೆಯಲ್ಲಿ ನೂಕುನುಗ್ಗಲಿನಲ್ಲಿ ನಿಂತಿದ್ದ ಭಕ್ತರು ದೇವರು ಅಗ್ನಿಕೊಂಡು ಪ್ರವೇಶಿಸುವುದನ್ನು ನೋಡಿ ಕಣ್ತುಂಬಿಕೊಂಡರು. ನಂತರ ಅಲ್ಲೇ ಇರುವ ಮಾರಮ್ಮ ದೇವಿಯ ಚಿಕ್ಕಗುಡಿಯಲ್ಲಿ ತಂಬಿಟ್ಟಿನ ಆರತಿಯನ್ನು ದೇವಿಗೆ ಸಮರ್ಪಿಸಿ ಕುಟುಂಬಕ್ಕೆ ಒಳ್ಳೆಯದಾಗಲಿ. ಎಲ್ಲಾ ಸಮಸ್ಯೆಗಳು ದೂರವಾಗಲಿ ಎಂದು<br />ಪ್ರಾರ್ಥಿಸಿದರು.</p>.<p>ಹಬ್ಬದ ಹಿನ್ನೆಲೆಯಲ್ಲಿ ಜನರಲ್ಲಿ ಹೊಸ ಚೈತನ್ಯ ಮತ್ತು ನವೋಲ್ಲಾಸ ಮನೆ ಮಾಡಿತ್ತು. ಗ್ರಾಮದ ಯಜಮಾನರು (ಊರಗೌಡರು) ಹಬ್ಬದ ನೇತೃತ್ವವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಪುರ</strong>: ತಾಲ್ಲೂಕಿನಬರಡನಹಳ್ಳಿಯಶಕ್ತಿದೇವತೆ ಮಾರಮ್ಮ ದೇವಿಯ ಕೊಂಡೋತ್ಸವಬುಧವಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.</p>.<p>ದೇವಿಯ ಕೊಂಡೋತ್ಸವದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಮಂಗಳವಾರ ಸಂಜೆ ಎಳವಾರ ಕಾರ್ಯಕ್ರಮ ನಡೆಯಿತು. ಎಳವಾರದಮೆರವಣಿಗೆ ಮುಕ್ತಾಯವಾದ ನಂತರ ಕೊಂಡದಲ್ಲಿ ಸೌದೆಯನ್ನಿಟ್ಟುಅಗ್ನಿಪೂಜೆ ನೆರವೇರಿಸಲಾಯಿತು.</p>.<p>ಬೆಳಿಗ್ಗೆ ಬರಡನಹಳ್ಳಿ ಗ್ರಾಮಸ್ಥರು ಮಾರಮ್ಮ ದೇವಸ್ಥಾನದ ಅರ್ಚಕ ವೀರಭದ್ರ ಅವರೊಂದಿಗೆ ಚಿಕ್ಕಹೊಳೆಯಲ್ಲಿ ಗಂಗಾಪೂಜೆ ನೆರವೇರಿಸಿದರು. ನಂತರ ದೇವರನ್ನು ಮೆರವಣಿಗೆಯಲ್ಲಿ ಕರೆ ತರಲಾಯಿತು. ಬಸಪ್ಪನ ದೇವಸ್ಥಾನದ ಅರ್ಚಕ ಪರಶಿವಯ್ಯ ಅವರ ಮನೆವರೆಗೂ ಜನರು ಮಾರಮ್ಮನಿಗೆ ಮಡಲಕ್ಕಿ ಕಟ್ಟಿ ಪೂಜೆ ನೆರವೇರಿಸಿದರು.</p>.<p>ಗ್ರಾಮದಲ್ಲಿರುವ ಪ್ರತಿ ಕುಟುಂಬದ ಹೆಣ್ಣುಮಕ್ಕಳು ತಂಬಿಟ್ಟಿನ ಆರತಿಯೊಂದಿಗೆ ದೇವರನ್ನು ಮೆರವಣಿಗೆಯಲ್ಲಿ ಅಗ್ನಿಕೊಂಡದವರೆಗೆ ಕರೆತಂದರು. ದೇವರು ಹೊತ್ತ ಅರ್ಚಕ ವೀರಭದ್ರ ಕೊಂಡದ ಸುತ್ತಲೂ ಮೂರು ಸುತ್ತು ಪ್ರದಕ್ಷಿಣೆ ನಡೆಸಿ ಕೊಂಡ ಹಾಯ್ದರು.</p>.<p>ಸಾವಿರಾರು ಸಂಖ್ಯೆಯಲ್ಲಿ ನೂಕುನುಗ್ಗಲಿನಲ್ಲಿ ನಿಂತಿದ್ದ ಭಕ್ತರು ದೇವರು ಅಗ್ನಿಕೊಂಡು ಪ್ರವೇಶಿಸುವುದನ್ನು ನೋಡಿ ಕಣ್ತುಂಬಿಕೊಂಡರು. ನಂತರ ಅಲ್ಲೇ ಇರುವ ಮಾರಮ್ಮ ದೇವಿಯ ಚಿಕ್ಕಗುಡಿಯಲ್ಲಿ ತಂಬಿಟ್ಟಿನ ಆರತಿಯನ್ನು ದೇವಿಗೆ ಸಮರ್ಪಿಸಿ ಕುಟುಂಬಕ್ಕೆ ಒಳ್ಳೆಯದಾಗಲಿ. ಎಲ್ಲಾ ಸಮಸ್ಯೆಗಳು ದೂರವಾಗಲಿ ಎಂದು<br />ಪ್ರಾರ್ಥಿಸಿದರು.</p>.<p>ಹಬ್ಬದ ಹಿನ್ನೆಲೆಯಲ್ಲಿ ಜನರಲ್ಲಿ ಹೊಸ ಚೈತನ್ಯ ಮತ್ತು ನವೋಲ್ಲಾಸ ಮನೆ ಮಾಡಿತ್ತು. ಗ್ರಾಮದ ಯಜಮಾನರು (ಊರಗೌಡರು) ಹಬ್ಬದ ನೇತೃತ್ವವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>