<p><strong>ಚನ್ನಪಟ್ಟಣ:</strong> ತಾಲ್ಲೂಕಿನಲ್ಲಿ ಪ್ರಸ್ತುತ ಪತ್ರಿನಿತ್ಯ 3ಲಕ್ಷ ಲೀಟರ್ ಹಾಲು ಉತ್ಪತ್ತಿಯಾಗುತ್ತಿದೆ. ಅದನ್ನು 5ಲಕ್ಷ ಲೀಟರ್ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಬಮೂಲ್ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್ ತಿಳಿಸಿದರು.</p>.<p>ತಾಲ್ಲೂಕಿನ ಬೈರಶೆಟ್ಟಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಈಚೆಗೆ ನಡೆದ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.</p>.<p>ಹಸು ಸಾಕಾಣಿಕೆ ಮಾಡಲು ಮುಂದೆ ಬರುವ ರೈತರಿಗೆ ಬಮೂಲ್ ಮತ್ತು ಸಂಘದ ಸಹಕಾರದಿಂದ ಬಿಡಿಸಿಸಿ ಬ್ಯಾಂಕ್ನಿಂದ ಎರಡು ಹಸುಗಳನ್ನು ಖರೀದಿಸಲು ₹1.80ಲಕ್ಷ ಸಾಲ ನೀಡಲಾಗುವುದು. ಇದರ ಜತೆಗೆ ಬಮೂಲ್ ವತಿಯಿಂದ ಹಲವು ಸೌಲಭ್ಯ ನೀಡಲಾಗುವುದು. ಸದಸ್ಯರು ಜಾಗೃತರಾಗಿ ಸಂಘ ಮತ್ತು ಬಮೂಲ್ ಸೌಲಭ್ಯ ಸದುಪಯೋಗಪಡಿಸಿಕೊಂಡು ಹೆಚ್ಚು ಗುಣಮಟ್ಟದ ಹಾಲು ಸರಬರಾಜು ಮಾಡಿ ಆರ್ಥಿಕವಾಗಿ ಪ್ರಗತಿ ಹೊಂದಬೇಕು ಎಂದು ಕಿವಿಮಾತು ಹೇಳಿದರು.</p>.<p>ಬಮೂಲ್ ವಿಸ್ತರಣಾಧಿಕಾರಿ ರಾಜು ಮಾತನಾಡಿ, ಸಭೆ ಉದ್ದೇಶ ಮತ್ತು ಬಮೂಲ್ನಿಂದ ಸಿಗುವ ಸೌಲಭ್ಯ ಮತ್ತು ವೈಜಾನಿಕವಾಗಿ ರಾಸುಗಳ ಪೋಷಣೆ ಮಾಡಿ ಹೆಚ್ಚಿನ ಹಾಲು ಇಳುವರಿ ಪಡೆಯುವ ಬಗ್ಗೆ ವಿವರಿಸಿದರು.</p>.<p>ಸಂಘದ ಸಿಇಒ ಬಿ.ಭದ್ರಯ್ಯ, ಸಂಘದ ಲೆಕ್ಕಪತ್ರ ಮಂಡಿಸಿ ಸಭೆ ಒಪ್ಪಿಗೆ ಪಡೆದರು. ಸಂಘದ ಉಪಾಧ್ಯಕ್ಷ ನಾಗರಾಜು, ನಿರ್ದೇಶಕರಾದ ಬಿ.ಪಿ.ಲೋಕೇಶ್, ನಾಗರಾಜು, ಶಿವಣ್ಣ, ಎಂ.ದಿನೇಶ್, ತಮ್ಮಯ್ಯ, ಎಂ.ನಾಗರಾಜು, ಉಮೇಶ್, ಬಿ.ಸಿ.ಚಂದ್ರು, ಜಯಮ್ಮ, ಶಿವಮ್ಮ, ಸಿಬ್ಬಂದಿ ಮಲ್ಲೇಶ್, ಚಲ್ಲೇಶ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಪಟ್ಟಣ:</strong> ತಾಲ್ಲೂಕಿನಲ್ಲಿ ಪ್ರಸ್ತುತ ಪತ್ರಿನಿತ್ಯ 3ಲಕ್ಷ ಲೀಟರ್ ಹಾಲು ಉತ್ಪತ್ತಿಯಾಗುತ್ತಿದೆ. ಅದನ್ನು 5ಲಕ್ಷ ಲೀಟರ್ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಬಮೂಲ್ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್ ತಿಳಿಸಿದರು.</p>.<p>ತಾಲ್ಲೂಕಿನ ಬೈರಶೆಟ್ಟಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಈಚೆಗೆ ನಡೆದ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.</p>.<p>ಹಸು ಸಾಕಾಣಿಕೆ ಮಾಡಲು ಮುಂದೆ ಬರುವ ರೈತರಿಗೆ ಬಮೂಲ್ ಮತ್ತು ಸಂಘದ ಸಹಕಾರದಿಂದ ಬಿಡಿಸಿಸಿ ಬ್ಯಾಂಕ್ನಿಂದ ಎರಡು ಹಸುಗಳನ್ನು ಖರೀದಿಸಲು ₹1.80ಲಕ್ಷ ಸಾಲ ನೀಡಲಾಗುವುದು. ಇದರ ಜತೆಗೆ ಬಮೂಲ್ ವತಿಯಿಂದ ಹಲವು ಸೌಲಭ್ಯ ನೀಡಲಾಗುವುದು. ಸದಸ್ಯರು ಜಾಗೃತರಾಗಿ ಸಂಘ ಮತ್ತು ಬಮೂಲ್ ಸೌಲಭ್ಯ ಸದುಪಯೋಗಪಡಿಸಿಕೊಂಡು ಹೆಚ್ಚು ಗುಣಮಟ್ಟದ ಹಾಲು ಸರಬರಾಜು ಮಾಡಿ ಆರ್ಥಿಕವಾಗಿ ಪ್ರಗತಿ ಹೊಂದಬೇಕು ಎಂದು ಕಿವಿಮಾತು ಹೇಳಿದರು.</p>.<p>ಬಮೂಲ್ ವಿಸ್ತರಣಾಧಿಕಾರಿ ರಾಜು ಮಾತನಾಡಿ, ಸಭೆ ಉದ್ದೇಶ ಮತ್ತು ಬಮೂಲ್ನಿಂದ ಸಿಗುವ ಸೌಲಭ್ಯ ಮತ್ತು ವೈಜಾನಿಕವಾಗಿ ರಾಸುಗಳ ಪೋಷಣೆ ಮಾಡಿ ಹೆಚ್ಚಿನ ಹಾಲು ಇಳುವರಿ ಪಡೆಯುವ ಬಗ್ಗೆ ವಿವರಿಸಿದರು.</p>.<p>ಸಂಘದ ಸಿಇಒ ಬಿ.ಭದ್ರಯ್ಯ, ಸಂಘದ ಲೆಕ್ಕಪತ್ರ ಮಂಡಿಸಿ ಸಭೆ ಒಪ್ಪಿಗೆ ಪಡೆದರು. ಸಂಘದ ಉಪಾಧ್ಯಕ್ಷ ನಾಗರಾಜು, ನಿರ್ದೇಶಕರಾದ ಬಿ.ಪಿ.ಲೋಕೇಶ್, ನಾಗರಾಜು, ಶಿವಣ್ಣ, ಎಂ.ದಿನೇಶ್, ತಮ್ಮಯ್ಯ, ಎಂ.ನಾಗರಾಜು, ಉಮೇಶ್, ಬಿ.ಸಿ.ಚಂದ್ರು, ಜಯಮ್ಮ, ಶಿವಮ್ಮ, ಸಿಬ್ಬಂದಿ ಮಲ್ಲೇಶ್, ಚಲ್ಲೇಶ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>