ರೇಷ್ಮೆ ಕೃಷಿಯಲ್ಲಿ ಹೊಸ ಕ್ರಾಂತಿಯಾಗುತ್ತಿದೆ ಎಂದರೆ ತಪ್ಪಾಗಲಾರದು. ಇಡೀ ರಾಜ್ಯದಲ್ಲೇ ರಾಮನಗರ ಜಿಲ್ಲೆ ರೇಷ್ಮೆನಗರಿ ಎಂದು ಹೆಸರು ಪಡದು ಪ್ರಥಮ ಸ್ಥಾನದಲ್ಲಿದ್ದರೆ, ಕನಕಪುರ ತಾಲ್ಲೂಕು ಜಿಲ್ಲೆಯಲ್ಲೇ ಪ್ರಥಮವಾಗಿದೆ. ಇಂತಹ ಉತ್ತಮ ಸ್ಥಿತಿಯಲ್ಲಿದ್ದ ರೇಷ್ಮೆಗೆ ಕೊರೊನಾದಿಂದ ಬರಸಿಡಿಲು ಬಡಿದಿದೆ. ಇದರ ಅದರ ಪರಿಣಾಮವಾಗಿ ₹400 ಗಡಿದಾಟಿದ್ದ ರೇಷ್ಮೆ ಗೂಡಿನ ಬೆಲೆ ದಿಢೀರನೆ ₹150 ಕ್ಕೆ ಕುಸಿದಿದೆ. ಇದರ ನಡುವೆ ರೇಷ್ಮೆ ಸೊಪ್ಪಿಗೆ ಹೇನು ಮತ್ತು ನುಸಿ ರೋಗ ತಗುಲಿ ಕೃಷಿಕರನ್ನು ಕಂಗಾಲು ಮಾಡಿದೆ.