<p><strong>ರಾಮನಗರ</strong>: ಐದು ವರ್ಷದ ಹಿಂದೆ ಚನ್ನಪಟ್ಟಣ ತಾಲ್ಲೂಕಿನ ಸೀಬನಹಳ್ಳಿಯಲ್ಲಿ ರಾಗಿ ವ್ಯಾಪಾರದ ವಿಷಯಕ್ಕೆ ವೆಂಕಟಸ್ವಾಮಯ್ಯ ಎಂಬುವರಿಗೆ ಜಾತಿ ನಿಂದನೆ ಮಾಡಿ ಕೊಲೆಗೈದಿದ್ದ ಇಬ್ಬರಿಗೆ ರಾಮನಗರದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 7 ವರ್ಷ ಕಾರಾಗೃಹ ಶಿಕ್ಷೆ ಹಾಗೂ ₹21 ಸಾವಿರ ದಂಡ ವಿಧಿಸಿದೆ.</p>.<p>ಮಳೂರು ಹೋಬಳಿಯ ಸೀಬನಹಳ್ಳಿಯ ಶಿವರಾಜು ಮತ್ತು ಭೈರವ ಶಿಕ್ಷೆಗೊಳಗಾದ ಅಪರಾಧಿಗಳು. ಇಬ್ಬರೂ ಸೇರಿ ರಾಮನಗರದ ಚಾಮುಂಡಿಪುರ ಮೂಲದ ಬೋವಿ ಸಮುದಾಯದ ವೆಂಕಟಸ್ವಾಮಯ್ಯ (60) ಅವರನ್ನು ಕೊಲೆ ಮಾಡಿದ್ದರು.</p>.<p>ತೆಂಕನಹಳ್ಳಿಯಲ್ಲಿರುವ ತನ್ನ ಅಕ್ಕನ ಮನೆಯಲ್ಲಿ ವಾಸವಾಗಿದ್ದ ವೆಂಕಟಸ್ವಾಮಯ್ಯ, ಮನೆ ಬಳಕೆಗೆ ರಾಗಿ ಖರೀದಿಸುವುದಕ್ಕಾಗಿ 2021 ಫೆ. 1ರಂದು ತನ್ನ ಸಂಬಂಧಿಕರೊಂದಿಗೆ ಸೀಬನಹಳ್ಳಿಗೆ ಬಂದಿದ್ದರು. ಕುರುಬ ಸಮುದಾಯದ ಶಿವರಾಜು ಮತ್ತು ಭೈರವ ಅವರೊಂದಿಗೆ ವ್ಯಾಪಾರ ಮಾಡಿ ತಮ್ಮೂರಿಗೆ ಹಿಂದಿರುಗಿದ್ದರು.</p>.<p>ಮಾರನೇಯ ದಿನ ವೆಂಕಟಸ್ವಾಮಯ್ಯ ಅವರು ರಾಗಿ ತೆಗೆದುಕೊಂಡು ಹೋಗಲು ಬಂದಾಗ, ವ್ಯಾಪಾರದ ಬೆಲೆಯಲ್ಲಿ ಆರೋಪಿಗಳು ವ್ಯತ್ಯಾಸ ಮಾಡಿದ್ದರು. ಅವರೊಂದಿಗೆ ವ್ಯಾಪಾರ ನಿಲ್ಲಿಸಿದ್ದ ವೆಂಕಟಸ್ವಾಮಯ್ಯ, ಅದೇ ಗ್ರಾಮದ ಬೇರೊಬ್ಬರ ಬಳಿ ರಾಗಿ ಖರೀದಿ ಮಾಡಿ ಸಂಜೆ ಊರಿಗೆ ಹೊರಟ್ಟಿದ್ದರು.</p>.<p>ಗ್ರಾಮದ ರಸ್ತೆಯಲ್ಲಿ ವೆಂಕಟಸ್ವಾಮಯ್ಯ ಅವರನ್ನು ಅಡ್ಡಗಟ್ಟಿದ ಆರೋಪಿಗಳು ಅವಾಚ್ಯವಾಗಿ ಜಾತಿ ನಿಂದನೆ ಮಾಡಿದರು. ಈ ವೇಳೆ ಶಿವರಾಜ ಕೆನ್ನೆಗೆ ಹೊಡೆದಿದ್ದರಿಂದ ವೆಂಕಟಸ್ವಾಮಯ್ಯ ಅವರ ಕಿವಿಯಲ್ಲಿ ರಕ್ತ ಬಂದು ನೋವಿನಿಂದ ನೆಲಕ್ಕೆ ಕುಸಿದಿದ್ದರು. ಮತ್ತೊಬ್ಬ ಆರೋಪಿ ಭೈರವ, ಎದೆಗೆ ಒದ್ದು ಹಲ್ಲೆ ಮಾಡಿದ್ದ. ಇದರಿಂದಾಗಿ ವೆಂಕಟಸ್ವಾಮಯ್ಯ ಸ್ಥಳದಲ್ಲೇ ಮೃತಪಟ್ಟಿದ್ದರು.</p>.<p>ಈ ಕುರಿತು ಎಂ.ಕೆ. ದೊಡ್ಡಿ ಪೊಲೀಸ್ ಠಾಣೆಯಲ್ಲಿ ಜಾತಿನಿಂದನೆ ಮತ್ತು ಕೊಲೆ ಆರೋಪದಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಚನ್ನಪಟ್ಟಣ ಉಪ ವಿಭಾಗದ ಅಂದಿನ ಡಿವೈಎಸ್ಪಿಗಳಾದ ಕೆ.ಎನ್. ರಮೇಶ್ ಹಾಗೂ ಪುರುಷೋತ್ತಮ್ ಅವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.</p>.<p>ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಎಂ. ಪಂಚಾಕ್ಷರಿ ಅವರು, ಆರೋಪಿಗಳ ವಿರುದ್ದದ ಆರೋಪ ಸಾಬೀತಾಗಿದ್ದರಿಂದ ಇಬ್ಬರಿಗೂ 7 ವರ್ಷ ಕಾರಾಗೃಹ ಶಿಕ್ಷೆ ಹಾಗೂ ₹21 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದರು. ಪ್ರಕರಣದ ಸರ್ಕಾರಿ ಅಭಿಯೋಜಕರಾಗಿ ವಿಮಲ ವಾದ ಮಂಡಿಸಿದ್ದರು.</p>.<p>ಕೋರ್ಟ್ ವಿಚಾರಣಾ ಪ್ರಕ್ರಿಯೆಯಲ್ಲಿ ಠಾಣೆ ಅಧಿಕಾರಿಗಳಾದ ಸದಾನಂದ, ಸಹನಾ ಪಾಟೀಲ ಹಾಗೂ ಕೋರ್ಟ್ ಸಿಬ್ಬಂದಿ ಸುನಂದಮ್ಮ ಅವರು ನಿಗಾ ವಹಿಸಿ, ಸಾಕ್ಷಿದಾರರನ್ನು ಕೋರ್ಟ್ಗೆ ಹಾಜರುಪಡಿಸಿ ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ</strong>: ಐದು ವರ್ಷದ ಹಿಂದೆ ಚನ್ನಪಟ್ಟಣ ತಾಲ್ಲೂಕಿನ ಸೀಬನಹಳ್ಳಿಯಲ್ಲಿ ರಾಗಿ ವ್ಯಾಪಾರದ ವಿಷಯಕ್ಕೆ ವೆಂಕಟಸ್ವಾಮಯ್ಯ ಎಂಬುವರಿಗೆ ಜಾತಿ ನಿಂದನೆ ಮಾಡಿ ಕೊಲೆಗೈದಿದ್ದ ಇಬ್ಬರಿಗೆ ರಾಮನಗರದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 7 ವರ್ಷ ಕಾರಾಗೃಹ ಶಿಕ್ಷೆ ಹಾಗೂ ₹21 ಸಾವಿರ ದಂಡ ವಿಧಿಸಿದೆ.</p>.<p>ಮಳೂರು ಹೋಬಳಿಯ ಸೀಬನಹಳ್ಳಿಯ ಶಿವರಾಜು ಮತ್ತು ಭೈರವ ಶಿಕ್ಷೆಗೊಳಗಾದ ಅಪರಾಧಿಗಳು. ಇಬ್ಬರೂ ಸೇರಿ ರಾಮನಗರದ ಚಾಮುಂಡಿಪುರ ಮೂಲದ ಬೋವಿ ಸಮುದಾಯದ ವೆಂಕಟಸ್ವಾಮಯ್ಯ (60) ಅವರನ್ನು ಕೊಲೆ ಮಾಡಿದ್ದರು.</p>.<p>ತೆಂಕನಹಳ್ಳಿಯಲ್ಲಿರುವ ತನ್ನ ಅಕ್ಕನ ಮನೆಯಲ್ಲಿ ವಾಸವಾಗಿದ್ದ ವೆಂಕಟಸ್ವಾಮಯ್ಯ, ಮನೆ ಬಳಕೆಗೆ ರಾಗಿ ಖರೀದಿಸುವುದಕ್ಕಾಗಿ 2021 ಫೆ. 1ರಂದು ತನ್ನ ಸಂಬಂಧಿಕರೊಂದಿಗೆ ಸೀಬನಹಳ್ಳಿಗೆ ಬಂದಿದ್ದರು. ಕುರುಬ ಸಮುದಾಯದ ಶಿವರಾಜು ಮತ್ತು ಭೈರವ ಅವರೊಂದಿಗೆ ವ್ಯಾಪಾರ ಮಾಡಿ ತಮ್ಮೂರಿಗೆ ಹಿಂದಿರುಗಿದ್ದರು.</p>.<p>ಮಾರನೇಯ ದಿನ ವೆಂಕಟಸ್ವಾಮಯ್ಯ ಅವರು ರಾಗಿ ತೆಗೆದುಕೊಂಡು ಹೋಗಲು ಬಂದಾಗ, ವ್ಯಾಪಾರದ ಬೆಲೆಯಲ್ಲಿ ಆರೋಪಿಗಳು ವ್ಯತ್ಯಾಸ ಮಾಡಿದ್ದರು. ಅವರೊಂದಿಗೆ ವ್ಯಾಪಾರ ನಿಲ್ಲಿಸಿದ್ದ ವೆಂಕಟಸ್ವಾಮಯ್ಯ, ಅದೇ ಗ್ರಾಮದ ಬೇರೊಬ್ಬರ ಬಳಿ ರಾಗಿ ಖರೀದಿ ಮಾಡಿ ಸಂಜೆ ಊರಿಗೆ ಹೊರಟ್ಟಿದ್ದರು.</p>.<p>ಗ್ರಾಮದ ರಸ್ತೆಯಲ್ಲಿ ವೆಂಕಟಸ್ವಾಮಯ್ಯ ಅವರನ್ನು ಅಡ್ಡಗಟ್ಟಿದ ಆರೋಪಿಗಳು ಅವಾಚ್ಯವಾಗಿ ಜಾತಿ ನಿಂದನೆ ಮಾಡಿದರು. ಈ ವೇಳೆ ಶಿವರಾಜ ಕೆನ್ನೆಗೆ ಹೊಡೆದಿದ್ದರಿಂದ ವೆಂಕಟಸ್ವಾಮಯ್ಯ ಅವರ ಕಿವಿಯಲ್ಲಿ ರಕ್ತ ಬಂದು ನೋವಿನಿಂದ ನೆಲಕ್ಕೆ ಕುಸಿದಿದ್ದರು. ಮತ್ತೊಬ್ಬ ಆರೋಪಿ ಭೈರವ, ಎದೆಗೆ ಒದ್ದು ಹಲ್ಲೆ ಮಾಡಿದ್ದ. ಇದರಿಂದಾಗಿ ವೆಂಕಟಸ್ವಾಮಯ್ಯ ಸ್ಥಳದಲ್ಲೇ ಮೃತಪಟ್ಟಿದ್ದರು.</p>.<p>ಈ ಕುರಿತು ಎಂ.ಕೆ. ದೊಡ್ಡಿ ಪೊಲೀಸ್ ಠಾಣೆಯಲ್ಲಿ ಜಾತಿನಿಂದನೆ ಮತ್ತು ಕೊಲೆ ಆರೋಪದಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಚನ್ನಪಟ್ಟಣ ಉಪ ವಿಭಾಗದ ಅಂದಿನ ಡಿವೈಎಸ್ಪಿಗಳಾದ ಕೆ.ಎನ್. ರಮೇಶ್ ಹಾಗೂ ಪುರುಷೋತ್ತಮ್ ಅವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.</p>.<p>ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಎಂ. ಪಂಚಾಕ್ಷರಿ ಅವರು, ಆರೋಪಿಗಳ ವಿರುದ್ದದ ಆರೋಪ ಸಾಬೀತಾಗಿದ್ದರಿಂದ ಇಬ್ಬರಿಗೂ 7 ವರ್ಷ ಕಾರಾಗೃಹ ಶಿಕ್ಷೆ ಹಾಗೂ ₹21 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದರು. ಪ್ರಕರಣದ ಸರ್ಕಾರಿ ಅಭಿಯೋಜಕರಾಗಿ ವಿಮಲ ವಾದ ಮಂಡಿಸಿದ್ದರು.</p>.<p>ಕೋರ್ಟ್ ವಿಚಾರಣಾ ಪ್ರಕ್ರಿಯೆಯಲ್ಲಿ ಠಾಣೆ ಅಧಿಕಾರಿಗಳಾದ ಸದಾನಂದ, ಸಹನಾ ಪಾಟೀಲ ಹಾಗೂ ಕೋರ್ಟ್ ಸಿಬ್ಬಂದಿ ಸುನಂದಮ್ಮ ಅವರು ನಿಗಾ ವಹಿಸಿ, ಸಾಕ್ಷಿದಾರರನ್ನು ಕೋರ್ಟ್ಗೆ ಹಾಜರುಪಡಿಸಿ ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>