<p><strong>ಕನಕಪುರ</strong>: ‘ಕುಡಿಯುವ ನೀರು ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಕುಡಿಯುವ ನೀರುಶುದ್ಧವಾಗಿದ್ದರೆ ಎಷ್ಟೋ ಕಾಯಿಲೆಯನ್ನು ದೂರ ಮಾಡಬಹುದಾಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ಎಸ್.ರವಿ ತಿಳಿಸಿದರು.</p>.<p>ತಾಲ್ಲೂಕಿನ ಚೀರಣಕುಪ್ಪೆ ಗ್ರಾಮದಲ್ಲಿನ ಹಾಲಿನ ಡೇರಿ ಕಟ್ಟಡದ ಆವರಣದಲ್ಲಿ ಬಮೂಲ್ ವತಿಯಿಂದ ನಿರ್ಮಾಣ ಮಾಡಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.</p>.<p>‘ಗ್ರಾಮದಲ್ಲಿ ಹಾಲು ಉತ್ಪಾದಕರ ಶ್ರಮದಿಂದ ಹಾಲಿನ ಡೇರಿ ನಡೆಯುತ್ತಿದೆ.ಶುದ್ಧ ಕುಡಿಯುವ ನೀರಿನ ಘಟಕವಾಗಿದೆ. ರೈತರು ಇನ್ನು ಹೆಚ್ಚಿನ ಪ್ರಮಾಣದಲ್ಲಿ ಹೈನುಗಾರಿಕೆ ಮಾಡಬೇಕು. ಸರ್ಕಾರದ ಜತೆಗೆ ಬಮೂಲ್ನಿಂದ ರೈತರಿಗೆ ಉತ್ತೇಜನವಾಗಿ ಒಳ್ಳೆಯ ಬೆಲೆ ಸಿಗುತ್ತಿದೆ. ಇಲ್ಲಿಯೇ ಮೆಗಾ ಡೇರಿಯನ್ನು ಮಾಡಿರುವುದರಿಂದ ಹೈನುಗಾರಿಕೆಯಲ್ಲಿ ಆಗುತ್ತಿದ್ದ ನಷ್ಟವನ್ನು ತಪ್ಪಿಸಿ ರೈತರಿಗೆ ಹೆಚ್ಚನ ಲಾಭ ಸಿಗುವಂತಾಗಿದೆ’ ಎಂದರು.</p>.<p>ಬಮೂಲ್ ನಿರ್ದೇಶಕ ಎಚ್.ಪಿ.ರಾಜಕುಮಾರ್ ಮಾತನಾಡಿ, ‘ಹೈನುಗಾರಿಕೆಯ ಈ ಭಾಗದ ರೈತರ ಆರ್ಥಿಕ ಶಕ್ತಿಯಾಗಿದೆ. ಕೋವಿಡ್ನಂತ ಸಂದರ್ಭದಲ್ಲಿಯು ಹೈನುಗಾರಿಕೆ ರೈತರ ಕೈ ಹಿಡಿದಿದೆ’ ಎಂದು ತಿಳಿಸಿದರು.</p>.<p>ಒಕ್ಕೂಟ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಎಂ.ಅಶೋಕ್, ವಿಸ್ತರಣಾಧಿಕಾರಿ ಬಿ.ಎನ್.ಪವಿತ್ರ, ಡೇರಿ ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷ ಗುತ್ತಲೇಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ಟಿ.ಎನ್.ಉಮಾ, ಡಿ.ಸಿ.ಮಂಜುಶ್ರೀ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಬಿ.ಮಹೇಶ್, ಮಾಜಿ ಸದಸ್ಯ ರವಿ, ಮುಖ್ಯ ಕಾರ್ಯನಿರ್ವಾಹಕ ಮಾದೇಗೌಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಪುರ</strong>: ‘ಕುಡಿಯುವ ನೀರು ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಕುಡಿಯುವ ನೀರುಶುದ್ಧವಾಗಿದ್ದರೆ ಎಷ್ಟೋ ಕಾಯಿಲೆಯನ್ನು ದೂರ ಮಾಡಬಹುದಾಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ಎಸ್.ರವಿ ತಿಳಿಸಿದರು.</p>.<p>ತಾಲ್ಲೂಕಿನ ಚೀರಣಕುಪ್ಪೆ ಗ್ರಾಮದಲ್ಲಿನ ಹಾಲಿನ ಡೇರಿ ಕಟ್ಟಡದ ಆವರಣದಲ್ಲಿ ಬಮೂಲ್ ವತಿಯಿಂದ ನಿರ್ಮಾಣ ಮಾಡಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.</p>.<p>‘ಗ್ರಾಮದಲ್ಲಿ ಹಾಲು ಉತ್ಪಾದಕರ ಶ್ರಮದಿಂದ ಹಾಲಿನ ಡೇರಿ ನಡೆಯುತ್ತಿದೆ.ಶುದ್ಧ ಕುಡಿಯುವ ನೀರಿನ ಘಟಕವಾಗಿದೆ. ರೈತರು ಇನ್ನು ಹೆಚ್ಚಿನ ಪ್ರಮಾಣದಲ್ಲಿ ಹೈನುಗಾರಿಕೆ ಮಾಡಬೇಕು. ಸರ್ಕಾರದ ಜತೆಗೆ ಬಮೂಲ್ನಿಂದ ರೈತರಿಗೆ ಉತ್ತೇಜನವಾಗಿ ಒಳ್ಳೆಯ ಬೆಲೆ ಸಿಗುತ್ತಿದೆ. ಇಲ್ಲಿಯೇ ಮೆಗಾ ಡೇರಿಯನ್ನು ಮಾಡಿರುವುದರಿಂದ ಹೈನುಗಾರಿಕೆಯಲ್ಲಿ ಆಗುತ್ತಿದ್ದ ನಷ್ಟವನ್ನು ತಪ್ಪಿಸಿ ರೈತರಿಗೆ ಹೆಚ್ಚನ ಲಾಭ ಸಿಗುವಂತಾಗಿದೆ’ ಎಂದರು.</p>.<p>ಬಮೂಲ್ ನಿರ್ದೇಶಕ ಎಚ್.ಪಿ.ರಾಜಕುಮಾರ್ ಮಾತನಾಡಿ, ‘ಹೈನುಗಾರಿಕೆಯ ಈ ಭಾಗದ ರೈತರ ಆರ್ಥಿಕ ಶಕ್ತಿಯಾಗಿದೆ. ಕೋವಿಡ್ನಂತ ಸಂದರ್ಭದಲ್ಲಿಯು ಹೈನುಗಾರಿಕೆ ರೈತರ ಕೈ ಹಿಡಿದಿದೆ’ ಎಂದು ತಿಳಿಸಿದರು.</p>.<p>ಒಕ್ಕೂಟ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಎಂ.ಅಶೋಕ್, ವಿಸ್ತರಣಾಧಿಕಾರಿ ಬಿ.ಎನ್.ಪವಿತ್ರ, ಡೇರಿ ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷ ಗುತ್ತಲೇಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ಟಿ.ಎನ್.ಉಮಾ, ಡಿ.ಸಿ.ಮಂಜುಶ್ರೀ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಬಿ.ಮಹೇಶ್, ಮಾಜಿ ಸದಸ್ಯ ರವಿ, ಮುಖ್ಯ ಕಾರ್ಯನಿರ್ವಾಹಕ ಮಾದೇಗೌಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>