<p><strong>ಮಾಗಡಿ: </strong>ತಿರುಮಲೆ ತಿರುವೆಂಗಳನಾಥ ರಂಗನಾಥಸ್ವಾಮಿ ದೇವಾಲಯದಲ್ಲಿ ಅಳಿವಿನ ಅಂಚಿನಲ್ಲಿ ಇರುವ ಚಿಪ್ಪುಹಂದಿ (ಪ್ಯಾಂಗೊಲಿನ್) ಕಾಣಿಸಿಕೊಂಡಿತ್ತು.ದೇವಾಲಯ ಪೌಳಿಯೊಳಗಿನ ಮಂಟಪದ ಬಾಗಿಲಿನ ಸಂದಿಯಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಸಿಬ್ಬಂದಿ ಉಪಾಯದಿಂದ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.</p>.<p>ಪರಿಸರ ಸಮತೋಲನ: ಇರುವೆ ಬಕ ಎಂದು ಕರೆಯಲ್ಪಡುವ ಈ ಪ್ರಾಣಿ ಅಳಿವಿನ ಅಂಚಿನಲ್ಲಿದೆ ಎಂದು ತುಮಕೂರಿನ ವನ್ಯಜೀವಿ ಸಂಸ್ಥೆ ಸಂಸ್ಥಾಪಕ ಬಿ.ವಿ.ಗುಂಡಪ್ಪ ತಿಳಿಸಿದರು.</p>.<p>ಅರೆಮಲೆನಾಡು ಮಾಗಡಿ ಸೀಮೆ ಅಪರೂಪದ ಪ್ರಾಣಿ –ಪಕ್ಷಿಗಳ ತಾಣ. ಕಾಡಾನೆ, ಚಿರತೆ, ಕರಡಿ, ನವಿಲುಗಳ ಆವಾಸ ಸ್ಥಾನವಾಗಿತ್ತು ಎಂದು ಪ್ರವಾಸಿಗ ಕರ್ನಲ್ ಬ್ರಾನ್ ಫಿಲ್ ಪ್ರವಾಸಿ ಕಥನದಲ್ಲಿ ದಾಖಲಿಸಿದ್ದಾನೆ. </p>.<p>ಪ್ಯಾಂಗೊಲಿನ್ ಮೈಮೇಲಿನ ಮುಳ್ಳಿನಂತಹ ಚರ್ಮ ಆತ್ಮರಕ್ಷಣೆಗೆ ಸಹಕಾರಿ. ಮೂತಿ ಚೂಪಾಗಿದ್ದು, ರಾತ್ರಿ ಸಂಚಾರಿ. ಇರುವೆ , ಗೊದ್ದ, ಗೆದ್ದಲು ಇದರ ಆಹಾರ ಪದ್ಧತಿ.ಇರುವ ಗೂಡಿಗೆ ಚೂಪಾದ ಮೂತಿಯನ್ನಿಟ್ಟು ಜೋರಾಗಿ ಉಸಿರು ಎಳೆದುಕೊಂಡು ಇರುವೆಗಳನ್ನು ಬಕ್ಷಿಸುತ್ತದೆ. ಗೆದ್ದಲು ಹುತ್ತದ ಒಳಗೆ ನುಸುಳಿ ಗೆದ್ದಲು ಸಾಮ್ರಾಜ್ಯ ನಾಶ ಮಾಡುತ್ತದೆ. ಅಂಟು ನಾಲಿಗೆಯಿಂದ ಇರುವೆ, ಗೆದ್ದಲು, ಗೊದ್ದಗಳನ್ನು ಸುಲಭವಾಗಿ ತಿನ್ನುತ್ತದೆ.</p>.<p>ಅಂತರರಾಷ್ಟ್ರೀಯ ಪರಿಸರ ಸಂಸ್ಥೆ ಪ್ಯಾಂಗೊಲಿನ್ ಕೆಂಪು ಪಟ್ಟಿಗೆ ಸೇರಿಸಿದ್ದು, ಸಂರಕ್ಷಣೆಗೆ ಒತ್ತುನೀಡಿದೆ. ಪ್ರಾಣಕ್ಕೆ ಅಪಾಯ ಬಂದಾಗ ರಕ್ಷಣೆ ಪಡೆಯಲು ದೇಹವನ್ನು ಮುದುಡಿಕೊಂಡು ವಾಲಿಬಾಲ್ ಚೆಂಡಿನಂತಾಗುತ್ತದೆ ಎಂದು ಇದರ ವೈಶಿಷ್ಟವನ್ನು ಗುಂಡಪ್ಪ ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಗಡಿ: </strong>ತಿರುಮಲೆ ತಿರುವೆಂಗಳನಾಥ ರಂಗನಾಥಸ್ವಾಮಿ ದೇವಾಲಯದಲ್ಲಿ ಅಳಿವಿನ ಅಂಚಿನಲ್ಲಿ ಇರುವ ಚಿಪ್ಪುಹಂದಿ (ಪ್ಯಾಂಗೊಲಿನ್) ಕಾಣಿಸಿಕೊಂಡಿತ್ತು.ದೇವಾಲಯ ಪೌಳಿಯೊಳಗಿನ ಮಂಟಪದ ಬಾಗಿಲಿನ ಸಂದಿಯಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಸಿಬ್ಬಂದಿ ಉಪಾಯದಿಂದ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.</p>.<p>ಪರಿಸರ ಸಮತೋಲನ: ಇರುವೆ ಬಕ ಎಂದು ಕರೆಯಲ್ಪಡುವ ಈ ಪ್ರಾಣಿ ಅಳಿವಿನ ಅಂಚಿನಲ್ಲಿದೆ ಎಂದು ತುಮಕೂರಿನ ವನ್ಯಜೀವಿ ಸಂಸ್ಥೆ ಸಂಸ್ಥಾಪಕ ಬಿ.ವಿ.ಗುಂಡಪ್ಪ ತಿಳಿಸಿದರು.</p>.<p>ಅರೆಮಲೆನಾಡು ಮಾಗಡಿ ಸೀಮೆ ಅಪರೂಪದ ಪ್ರಾಣಿ –ಪಕ್ಷಿಗಳ ತಾಣ. ಕಾಡಾನೆ, ಚಿರತೆ, ಕರಡಿ, ನವಿಲುಗಳ ಆವಾಸ ಸ್ಥಾನವಾಗಿತ್ತು ಎಂದು ಪ್ರವಾಸಿಗ ಕರ್ನಲ್ ಬ್ರಾನ್ ಫಿಲ್ ಪ್ರವಾಸಿ ಕಥನದಲ್ಲಿ ದಾಖಲಿಸಿದ್ದಾನೆ. </p>.<p>ಪ್ಯಾಂಗೊಲಿನ್ ಮೈಮೇಲಿನ ಮುಳ್ಳಿನಂತಹ ಚರ್ಮ ಆತ್ಮರಕ್ಷಣೆಗೆ ಸಹಕಾರಿ. ಮೂತಿ ಚೂಪಾಗಿದ್ದು, ರಾತ್ರಿ ಸಂಚಾರಿ. ಇರುವೆ , ಗೊದ್ದ, ಗೆದ್ದಲು ಇದರ ಆಹಾರ ಪದ್ಧತಿ.ಇರುವ ಗೂಡಿಗೆ ಚೂಪಾದ ಮೂತಿಯನ್ನಿಟ್ಟು ಜೋರಾಗಿ ಉಸಿರು ಎಳೆದುಕೊಂಡು ಇರುವೆಗಳನ್ನು ಬಕ್ಷಿಸುತ್ತದೆ. ಗೆದ್ದಲು ಹುತ್ತದ ಒಳಗೆ ನುಸುಳಿ ಗೆದ್ದಲು ಸಾಮ್ರಾಜ್ಯ ನಾಶ ಮಾಡುತ್ತದೆ. ಅಂಟು ನಾಲಿಗೆಯಿಂದ ಇರುವೆ, ಗೆದ್ದಲು, ಗೊದ್ದಗಳನ್ನು ಸುಲಭವಾಗಿ ತಿನ್ನುತ್ತದೆ.</p>.<p>ಅಂತರರಾಷ್ಟ್ರೀಯ ಪರಿಸರ ಸಂಸ್ಥೆ ಪ್ಯಾಂಗೊಲಿನ್ ಕೆಂಪು ಪಟ್ಟಿಗೆ ಸೇರಿಸಿದ್ದು, ಸಂರಕ್ಷಣೆಗೆ ಒತ್ತುನೀಡಿದೆ. ಪ್ರಾಣಕ್ಕೆ ಅಪಾಯ ಬಂದಾಗ ರಕ್ಷಣೆ ಪಡೆಯಲು ದೇಹವನ್ನು ಮುದುಡಿಕೊಂಡು ವಾಲಿಬಾಲ್ ಚೆಂಡಿನಂತಾಗುತ್ತದೆ ಎಂದು ಇದರ ವೈಶಿಷ್ಟವನ್ನು ಗುಂಡಪ್ಪ ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>