ಕಾಂಗ್ರೆಸ್ ಮುಖಂಡರಾದ ಆರ್.ನವ್ಯಶ್ರೀ ಮಾತನಾಡಿ, ‘ರಾಜ ಮಹಾರಾಜರ ಕಾಲದಿಂದಲೂ ಪಾರಿವಾಳ ಹಾರಾಟ ಸ್ಪರ್ಧೆಗೆ ತನ್ನದೇ ಆದ ಇತಿಹಾಸವಿದೆ. ಇದನ್ನು ಮರೆಯಾಗಲು ಬಿಡದೆ ವಿವಿಧ ಜಿಲ್ಲೆಗಳ ಪಾರಿವಾಳ ಹಾರಾಟಗಾರರನ್ನು ಆಹ್ವಾನಿಸಿ, ಸ್ಪರ್ಧೆ ಆಯೋಜನೆ ಮಾಡಿ, ಕಲೆಯನ್ನು ಜೀವಂತವಾಗಿರಿಸಿರುವುದು ಒಳ್ಳೆಯ ಬೆಳವಣಿಗೆ’ ಎಂದರು.