ಚನ್ನಪಟ್ಟಣದಲ್ಲಿ ಬುಧವಾರ ಪತ್ರಕರ್ತರ ಜೊತೆ ಅವರು ಮಾತನಾಡಿದರು. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದ ಅಪಘಾತಕ್ಕೂ ಪಿಎಸ್ಐ ಅಕ್ರಮ ಬಯಲಿಗೆ ಬರುವುದಕ್ಕೂ ನಂಟಿದೆ. ಪೊಲೀಸ್ ಇಲಾಖೆ ಇದನ್ನು ಅಪಘಾತ ಎಂದು ಹೇಳಿತ್ತು. ಆದರೆ, ಬಿಜೆಪಿ ನಾಯಕರು ಉರ್ದು ವಿಚಾರವಾಗಿ ಆದ ಗಲಾಟೆ ಎಂದು ಕಥೆ ಕಟ್ಟಿದ್ದರು. ಬಿಜೆಪಿಯ ಒಬ್ಬ ವಕ್ತಾರ ಕಮಲ್ ಪಂಥ್ ವಿರುದ್ಧ ಆರೋಪ ಮಾಡಿದ್ದರು. ಅದೇ ವಕ್ತಾರರಿಗೆ ಕಲಬುರ್ಗಿಯಲ್ಲಿ ಬಂಧನ ಆದವರ ಲಿಂಕ್ ಇತ್ತು. ಹೀಗಾಗಿ ನಿಷ್ಠಾವಂತ ಅಧಿಕಾರಿಗೆ ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು, ಸರ್ಕಾರಕ್ಕೆ ಬುದ್ಧಿ ಕಲಿಸಲು ಅವರ ಅಭಿಮಾನಿಗಳೇ ಇದನ್ನು ಬಯಲಿಗೆ ಎಳೆದರು ಎಂದು ದೂರಿದರು.