<p><strong>ಮಾಗಡಿ:</strong> ತಾಲ್ಲೂಕಿನಲ್ಲಿ ಸುಮಾರು 30,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ರಾಗಿ ಬೆಳೆಯು ಇನ್ನೂ ಎರಡು ಹಂತದ ಹದವಾದ ಮಳೆ ಮೇಲೆ ನಿಂತಿದೆ. ಆದರೂ, ರೈತರು ಭರ್ಜರಿ ಬೆಳೆ ನಿರೀಕ್ಷೆಯಲ್ಲಿದ್ದಾರೆ. ಮಳೆ ಕೈಕೊಟ್ಟರೆ ಬೆಳೆ ಉತ್ಪಾದನೆಯಲ್ಲಿ ಶೇ40-50 ಇಳಿಕೆ ಆಗುವ ಆತಂಕದಲ್ಲಿ ಇದ್ದಾರೆ ರೈತರು.</p>.<p>ಜುಲೈಯಲ್ಲಿ ಬಿತ್ತನೆ ಮಾಡಿದ ರಾಗಿ ಬೆಳೆ ಕೊಯ್ಲುಗೆ ಸಿದ್ಧವಾಗಿದೆ. ಇನ್ನೂ ಸ್ವಲ್ಪ ಮಳೆ ಬಂದರೆ ಉತ್ತಮ ಇಳುವರಿ ನಿರೀಕ್ಷಿಸಬಹುದು. ಆದರೆ, ಆಗಸ್ಟ್ ತಿಂಗಳಲ್ಲಿ ಬಿತ್ತನೆ ಮಾಡಿದ ಬೆಳೆಗೆ ಮಳೆ ಅತ್ಯವಶ್ಯ. ಈ ಎರಡೂ ಹಂತದ ಬೆಳೆಗಳಿಗೂ ಸರಿಯಾದ ಮಳೆ ಬಂದರೆ ಶೇ90 ಭರ್ಜರಿ ಬೆಳೆ ನಿರೀಕ್ಷೆ ಇದೆ. ರೈತರು ಮಳೆಗಾಗಿ ಆಕಾಶದತ್ತ ಮುಖ ಮಾಡಿದ್ದಾರೆ. </p>.<p><strong>ಮಾಗಡಿ ರಾಗಿ ಪ್ರಸಿದ್ಧಿ:</strong> ತಾಲ್ಲೂಕು ಅರೆ-ಮಲೆನಾಡು ಪ್ರದೇಶ. ರಾಗಿ ಬೆಳೆಗೆ ಹೆಸರುವಾಸಿ. ಎಂಆರ್-1, ಜಿಪಿ-28 ಮತ್ತು ಎಂಎಲ್-365 ತಳಿಗಳನ್ನು ಹೆಚ್ಚಾಗಿ ಬೆಳೆಯಲಾಗಿದೆ. ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಲ್ಲೂ ಮಾಗಡಿ ಕೆಂಪು ರಾಗಿಗೆ ಉತ್ತಮ ಬೇಡಿಕೆ ಮತ್ತು ಬೆಲೆ ಇದೆ. ಸರ್ಕಾರವೂ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಮಾಡುತ್ತದೆ.</p>.<p><strong>ಹಸಿರಿನಿಂದ ಕಂಗೊಳಿಸುವ ಹೊಲಗಳು:</strong> ತಾಲ್ಲೂಕಿನ ಕುದೂರು, ತಿಪ್ಪಸಂದ್ರ, ಸೋಲೂರು, ಮಾಡಬಾಳ್, ಕಸಬಾ ಹೋಬಳಿಗಳಲ್ಲಿ ರಾಗಿ, ಭತ್ತ, ಅವರೆ ಬೆಳೆಯಲಾಗಿದೆ. ರಾಗಿ ಕಾಳು ಕಟ್ಟಲು ಆರಂಭಿಸಿದೆ. ಅವರೆ, ಅಲಸಂದೆ, ಜೋಳ, ಸಾಸಿವೆ, ತೊಗರಿ ಮಿಶ್ರ ಬೆಳೆಯಾಗಿ ಬೆಳೆಯುವುದು ಇಲ್ಲಿ ಸಾಮಾನ್ಯ. ಹೊಲಗಳು ಹಸಿರಿನಿಂದ ಕಂಗೊಳಿಸುತ್ತಿವೆ.</p>.<p><strong>ಕೀಟನಾಶಕ ಸಿಂಪಡಣೆ ಮತ್ತು ಕೊಯ್ಲು:</strong> ಹಸಿರು ಹುಲ್ಲಿನ ಜತೆಗೆ ಮಿಶ್ರ ಬೆಳೆ ಬಂದಿರುವುದರಿಂದ ಕೀಟಬಾಧೆ ಆತಂಕವೂ ರೈತರನ್ನು ಬಾಧಿಸುತ್ತಿದೆ. ಇದರಿಂದಾಗಿ ಕೃಷಿ ಇಲಾಖೆ ಸೂಚನೆ ಮೇರೆಗೆ ಕೀಟನಾಶಕ ಸಿಂಪಡಣೆ ಕಾರ್ಯವನ್ನು ರೈತರು ಆರಂಭಿಸಿದ್ದಾರೆ.</p>.<p>ಈಗಾಗಲೇ ಮೂರು ಹಂತದಲ್ಲಿ ರಾಗಿ ಕೊಯ್ಲು ಆರಂಭವಾಗಿದೆ. ಮುಂಚಿತವಾಗಿ ಬಿತ್ತನೆಯಾದ ರಾಗಿ ಕೊಯ್ಲಿಗೆ ಬಂದಿದ್ದರೆ, ತಡವಾಗಿ ಬಿತ್ತನೆಯಾದ ಬೆಳೆ 15-20 ದಿನಗಳಲ್ಲಿ ಕೊಯ್ಲಿಗೆ ಬರುವ ನಿರೀಕ್ಷೆ ಇದೆ. ಬಹುತೇಕ ರೈತರು ಈಗ ಕೊಯ್ಲು ಯಂತ್ರ ಬಳಸುತ್ತಿದ್ದಾರೆ. ಆದರೆ, ಯಂತ್ರದ ಕೊಯ್ಲಿನಿಂದ ಸುಮಾರು ಶೇ10 ರಾಗಿ ಜಮೀನಿನಲ್ಲೇ ಉಳಿದು ಹಾಳಾಗುತ್ತಿದೆ ಎಂಬ ಆತಂಕವನ್ನೂ ರೈತರು ವ್ಯಕ್ತಪಡಿಸಿದ್ದಾರೆ.</p>.<div><blockquote>ಇನ್ನೊಂದು ವಾರದಲ್ಲಿ ಮಳೆ ಬಾರದಿದ್ದರೆ ರಾಗಿ ಬೆಳೆಗೆ ನಷ್ಟ ಉಂಟಾಗಲಿದೆ. ಶೇ 50ರಷ್ಟು ಮಾತ್ರ ಬೆಳೆ ನಿರೀಕ್ಷೆ ಮಾಡಬಹುದು </blockquote><span class="attribution">ಮಹೇಶ್ ಪ್ರಗತಿರ ರೈತ ಚಕ್ರಬಾವಿ</span></div>.<div><blockquote>ತಾಲೂಕಿನಲ್ಲಿ ಬೆಳೆಯುವ ರಾಗಿಗೆ ಸಾಕಷ್ಟು ಬೇಡಿಕೆ ಇದೆ. ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ. ಮಳೆ ನಿರೀಕ್ಷೆಯಲ್ಲಿ ರೈತರು ಇದ್ದಾರೆ </blockquote><span class="attribution">ವಿಜಯ ಶವಣೂರು ಸಹಾಯಕ ಕೃಷಿ ನಿರ್ದೇಶಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಗಡಿ:</strong> ತಾಲ್ಲೂಕಿನಲ್ಲಿ ಸುಮಾರು 30,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ರಾಗಿ ಬೆಳೆಯು ಇನ್ನೂ ಎರಡು ಹಂತದ ಹದವಾದ ಮಳೆ ಮೇಲೆ ನಿಂತಿದೆ. ಆದರೂ, ರೈತರು ಭರ್ಜರಿ ಬೆಳೆ ನಿರೀಕ್ಷೆಯಲ್ಲಿದ್ದಾರೆ. ಮಳೆ ಕೈಕೊಟ್ಟರೆ ಬೆಳೆ ಉತ್ಪಾದನೆಯಲ್ಲಿ ಶೇ40-50 ಇಳಿಕೆ ಆಗುವ ಆತಂಕದಲ್ಲಿ ಇದ್ದಾರೆ ರೈತರು.</p>.<p>ಜುಲೈಯಲ್ಲಿ ಬಿತ್ತನೆ ಮಾಡಿದ ರಾಗಿ ಬೆಳೆ ಕೊಯ್ಲುಗೆ ಸಿದ್ಧವಾಗಿದೆ. ಇನ್ನೂ ಸ್ವಲ್ಪ ಮಳೆ ಬಂದರೆ ಉತ್ತಮ ಇಳುವರಿ ನಿರೀಕ್ಷಿಸಬಹುದು. ಆದರೆ, ಆಗಸ್ಟ್ ತಿಂಗಳಲ್ಲಿ ಬಿತ್ತನೆ ಮಾಡಿದ ಬೆಳೆಗೆ ಮಳೆ ಅತ್ಯವಶ್ಯ. ಈ ಎರಡೂ ಹಂತದ ಬೆಳೆಗಳಿಗೂ ಸರಿಯಾದ ಮಳೆ ಬಂದರೆ ಶೇ90 ಭರ್ಜರಿ ಬೆಳೆ ನಿರೀಕ್ಷೆ ಇದೆ. ರೈತರು ಮಳೆಗಾಗಿ ಆಕಾಶದತ್ತ ಮುಖ ಮಾಡಿದ್ದಾರೆ. </p>.<p><strong>ಮಾಗಡಿ ರಾಗಿ ಪ್ರಸಿದ್ಧಿ:</strong> ತಾಲ್ಲೂಕು ಅರೆ-ಮಲೆನಾಡು ಪ್ರದೇಶ. ರಾಗಿ ಬೆಳೆಗೆ ಹೆಸರುವಾಸಿ. ಎಂಆರ್-1, ಜಿಪಿ-28 ಮತ್ತು ಎಂಎಲ್-365 ತಳಿಗಳನ್ನು ಹೆಚ್ಚಾಗಿ ಬೆಳೆಯಲಾಗಿದೆ. ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಲ್ಲೂ ಮಾಗಡಿ ಕೆಂಪು ರಾಗಿಗೆ ಉತ್ತಮ ಬೇಡಿಕೆ ಮತ್ತು ಬೆಲೆ ಇದೆ. ಸರ್ಕಾರವೂ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಮಾಡುತ್ತದೆ.</p>.<p><strong>ಹಸಿರಿನಿಂದ ಕಂಗೊಳಿಸುವ ಹೊಲಗಳು:</strong> ತಾಲ್ಲೂಕಿನ ಕುದೂರು, ತಿಪ್ಪಸಂದ್ರ, ಸೋಲೂರು, ಮಾಡಬಾಳ್, ಕಸಬಾ ಹೋಬಳಿಗಳಲ್ಲಿ ರಾಗಿ, ಭತ್ತ, ಅವರೆ ಬೆಳೆಯಲಾಗಿದೆ. ರಾಗಿ ಕಾಳು ಕಟ್ಟಲು ಆರಂಭಿಸಿದೆ. ಅವರೆ, ಅಲಸಂದೆ, ಜೋಳ, ಸಾಸಿವೆ, ತೊಗರಿ ಮಿಶ್ರ ಬೆಳೆಯಾಗಿ ಬೆಳೆಯುವುದು ಇಲ್ಲಿ ಸಾಮಾನ್ಯ. ಹೊಲಗಳು ಹಸಿರಿನಿಂದ ಕಂಗೊಳಿಸುತ್ತಿವೆ.</p>.<p><strong>ಕೀಟನಾಶಕ ಸಿಂಪಡಣೆ ಮತ್ತು ಕೊಯ್ಲು:</strong> ಹಸಿರು ಹುಲ್ಲಿನ ಜತೆಗೆ ಮಿಶ್ರ ಬೆಳೆ ಬಂದಿರುವುದರಿಂದ ಕೀಟಬಾಧೆ ಆತಂಕವೂ ರೈತರನ್ನು ಬಾಧಿಸುತ್ತಿದೆ. ಇದರಿಂದಾಗಿ ಕೃಷಿ ಇಲಾಖೆ ಸೂಚನೆ ಮೇರೆಗೆ ಕೀಟನಾಶಕ ಸಿಂಪಡಣೆ ಕಾರ್ಯವನ್ನು ರೈತರು ಆರಂಭಿಸಿದ್ದಾರೆ.</p>.<p>ಈಗಾಗಲೇ ಮೂರು ಹಂತದಲ್ಲಿ ರಾಗಿ ಕೊಯ್ಲು ಆರಂಭವಾಗಿದೆ. ಮುಂಚಿತವಾಗಿ ಬಿತ್ತನೆಯಾದ ರಾಗಿ ಕೊಯ್ಲಿಗೆ ಬಂದಿದ್ದರೆ, ತಡವಾಗಿ ಬಿತ್ತನೆಯಾದ ಬೆಳೆ 15-20 ದಿನಗಳಲ್ಲಿ ಕೊಯ್ಲಿಗೆ ಬರುವ ನಿರೀಕ್ಷೆ ಇದೆ. ಬಹುತೇಕ ರೈತರು ಈಗ ಕೊಯ್ಲು ಯಂತ್ರ ಬಳಸುತ್ತಿದ್ದಾರೆ. ಆದರೆ, ಯಂತ್ರದ ಕೊಯ್ಲಿನಿಂದ ಸುಮಾರು ಶೇ10 ರಾಗಿ ಜಮೀನಿನಲ್ಲೇ ಉಳಿದು ಹಾಳಾಗುತ್ತಿದೆ ಎಂಬ ಆತಂಕವನ್ನೂ ರೈತರು ವ್ಯಕ್ತಪಡಿಸಿದ್ದಾರೆ.</p>.<div><blockquote>ಇನ್ನೊಂದು ವಾರದಲ್ಲಿ ಮಳೆ ಬಾರದಿದ್ದರೆ ರಾಗಿ ಬೆಳೆಗೆ ನಷ್ಟ ಉಂಟಾಗಲಿದೆ. ಶೇ 50ರಷ್ಟು ಮಾತ್ರ ಬೆಳೆ ನಿರೀಕ್ಷೆ ಮಾಡಬಹುದು </blockquote><span class="attribution">ಮಹೇಶ್ ಪ್ರಗತಿರ ರೈತ ಚಕ್ರಬಾವಿ</span></div>.<div><blockquote>ತಾಲೂಕಿನಲ್ಲಿ ಬೆಳೆಯುವ ರಾಗಿಗೆ ಸಾಕಷ್ಟು ಬೇಡಿಕೆ ಇದೆ. ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ. ಮಳೆ ನಿರೀಕ್ಷೆಯಲ್ಲಿ ರೈತರು ಇದ್ದಾರೆ </blockquote><span class="attribution">ವಿಜಯ ಶವಣೂರು ಸಹಾಯಕ ಕೃಷಿ ನಿರ್ದೇಶಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>