ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಕಾಡಾನೆ ಸಮಸ್ಯೆ ಅಷ್ಟಾಗಿ ಇಲ್ಲ. ಬ್ಯಾರಿಕೇಡ್ ಸೌರಬೇಲಿ ಜೊತೆಗೆ ಡ್ರೋನ್ ನಿಗಾ ಇಡಲಾಗುತ್ತಿದೆ. ಆನೆಗಳು ಉದ್ಯಾನ ವ್ಯಾಪ್ತಿ ಬಿಟ್ಟು ಬಂದಾಗ ಕಾರ್ಯಾಚರಣೆ ನಡೆಸಿ ಒಳಕ್ಕೆ ಓಡಿಸಲಾಗುತ್ತಿದೆ. ಕಾವೇರಿ ವನ್ಯಜೀವಿಧಾಮದಲ್ಲೂ ಇಂತಹ ಕ್ರಮಗಳಾಗಬೇಕು
ಎಂ. ರಾಮಕೃಷ್ಣಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮನಗರ
ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಮುತ್ತತ್ತಿಯಲ್ಲಿ ಆನೆ ಕ್ಯಾಂಪ್ ಸ್ಥಾಪನೆಯಾದರೆ ಕಾಡಾನೆಗಳ ನಿಯಂತ್ರಣದ ಜೊತೆಗೆ ಪ್ರವಾಸೋದ್ಯಮವೂ ಅಭಿವೃದ್ಧಿಯಾಗುತ್ತದೆ. ಇಲಾಖೆಗೂ ಆದಾಯ ಬರುತ್ತದೆ. ಚನ್ನಪಟ್ಟಣ ಶಾಸಕರು ಸಹ ಇತ್ತೀಚೆಗೆ ಸಭೆ ಕರೆದು ಪ್ರಸ್ತಾಪ ಮಾಡಿರುವುದು ಒಳ್ಳೆಯ ಬೆಳವಣಿಗೆ
ನಾಗೇಂದ್ರ ಪ್ರಸಾದ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಾವೇರಿ ವನ್ಯಜೀವಿಧಾಮ ಕನಕಪುರ